
ಜುಲೈ 18 ರಂದು ಶ್ರೀ ಶರಭಯೋಗೇಂದ್ರ ಸ್ವಾಮಿಯವರ 307ನೇ ಆರಾಧನಾ ಮತ್ತು ರಥೋತ್ಸವ.
ಚಿಕ್ಕಬಳ್ಳಾಪುರ: ಶ್ರೀ ಶ್ರೀ ಶ್ರೀ ದಕ್ಷಿಣಕಾಶಿ ಪಂಚನಂದಿ ಮಹಾ ಪುಣ್ಯ ಕ್ಷೇತ್ರ ಪಾಪಾಗ್ನಿ ಮಠ ಚಾರಿಟೇಬಲ್ ಟ್ರಸ್ಟ್ ಕಳವಾರ ಗ್ರಾಮ ಹಾಗೂ ಶ್ರೀ ವಿಶ್ವಕರ್ಮ ಸಂಘ ಚಿಕ್ಕಬಳ್ಳಾಪುರ ವತಿಯಿಂದ ಜುಲೈ ತಿಂಗಳ 18 ಶುಕ್ರವಾರದಂದು ಶ್ರೀ ಶ್ರೀ ಶ್ರೀ ಶರಭಯೋಗೇಂದ್ರ ಸ್ವಾಮಿಯವರ 307ನೇ ಆರಾಧನಾ ಮತ್ತು ರಥೋತ್ಸವ ಪಂಚನಂದಿ ಮಹಾಪುಣ್ಯ ಕ್ಷೇತ್ರ ಪಾಪಾಗ್ನಿ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪಾಪಾಗ್ನಿ ಮಠ ಟ್ರಸ್ಟ್ ಅಧ್ಯಕ್ಷರಾದ ಎನ್. ಹೆಂಜಾರಾಚಾರಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ
ಆರಾಧನಾ ಹಾಗೂ ರಥೋತ್ಸವದ ಬಗ್ಗೆ ಮಾಹಿತಿ ನೀಡಿಲು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಧಾರ್ಮಿಕ ಕಾರ್ಯಕ್ರಮಗಳ ಆರಂಭ ಜುಲೈ 17 ಗುರುವಾರದಂದು ಆಗಲಿದ್ದು ಅಂದು ಬೆಳಿಗ್ಗೆ 6 ಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ಗಣಪತಿ ಪೂಜೆ,ಪುಣ್ಯಾಹ ವಾಚನ,
ತೀರ್ಥಗ್ರಹಣ,ದಶಶಾಂತಿ,
ಜೊತೆಗೆ ಸಂಜೆ ಕಾಶಿವಿಶ್ವನಾಥ ದೇವರಿಗೆ ರುದ್ರಾಭಿಷೇಕ,
ಅಷ್ಟದಿಕ್ಪಾಲಕಾರಾಧನೆ,
ನೈವೇದ್ಯ,ಪ್ರಧಾನ ಕಳಶಾರಾಧನೆ,ಮಹಾನ್ಯಾಸಪೊರ್ವಕ ಅಭಿಷೇಕ,ಅಗ್ನಿ ಪ್ರತಿಷ್ಠಾಪನೆ,ಶರಭಯೋಗೇಂದ್ರಸ್ವಾಮಿ ಮಹಾಮಂತ್ರ ಹೋಮ ಮಂಗಳಾರತಿ,
ನಡೆಯಲಿದೆ ಎಂದು ತಿಳಿಸಿದರು
ಇನ್ನು 18ನೇ ತಾರೀಖು ಶುಕ್ರವಾರದಂದು ಸುಪ್ರಭಾತ ದ್ವಾರ ಪೊಜೆ,
ಗಣಪತಿ ಪೂಜೆ,ಕಲಶೋತ್ಸವ ಕಲಶಪ್ರತಿಷ್ಟಾಪಣೆ, ಶರಭಯೋಗೇಂದ್ರಸ್ವಾಮಿ ರುದ್ರ ಲಿಂಗಕ್ಕೆ,ಕಾಶಿವಿಶ್ವನಾಥ ದೇವರಿಗೆ ಪಂಚಾಮೃತ ಅಭಿಷೇಕ,ದುರ್ಗಾ ಹೋಮ,
ಹಾಗೂ ಮಧ್ಯಾಹ್ನ 12ಕ್ಕೆ ಪೂರ್ಣಾಹುತಿ,ಮಹಾಮಂಗಳಾರತಿ ಪ್ರಸಾದ ವಿನಿಯೋಗ,
ರಾತ್ರಿ 8 ಕ್ಕೆ ಭಗವದ್ಭಕ್ತರಿಂದ ತತ್ವಾತೀತ ಭಜನೆ ನಡೆಯಲಿದೆ. ಎರಡು ದಿನಗಳ ಕಾಲ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದರು.
ಉಸ್ತವ ಸಮಿತಿ ಅಧ್ಯಕ್ಷರಾದ ನವೀನ್ ಕುಮಾರ್ ಮಾತನಾಡಿ ಶ್ರೀ ಕ್ಷೇತ್ರ ಪಾಪಾಗ್ನಿ ಮಠ ಪ್ರಾಚೀನ ಕ್ಷೇತ್ರವಾಗಿದ್ದು,ಇಲ್ಲಿ ಕಾಶಿ ವಿಶ್ವನಾಥಸ್ವಾಮಿ ಹಾಗೂ ಅನ್ನಪೂರ್ಣದೇವಿ ವಿಶೇಷ ರೂಪದಲ್ಲಿದ್ದು ಶ್ರೀ ಕ್ಷೇತ್ರ ಗುರು ಪರಂಪರೆ ಹಾಗೂ ಭಕ್ತರ ಆರಾಧ್ಯ ದೈವವಾಗಿದೆ,ಆಷಾಡ ಬಹುಳ ಅಷ್ಠಮಿ ದಿನದಂದು
ಶರಭಯೋಗೇಂದ್ರಸ್ವಾಮಿ ಸಜೀವ ಸಮಾಧಿಯಾದ ದಿನವಾಗಿದ್ದು ವಿಶ್ವಕರ್ಮ ಕುಲಭಾಂದವರು
ಪ್ರತಿ ವರ್ಷ ಸ್ವಾಮಿ ಅವರ ಆರಾಧನೆಯನ್ನು ವಿಜ್ರಂಭಣೆಯಿಂದ ಆಚರಿಸುತ್ತಾ ಬಂದಿದ್ದು ಪ್ರಸ್ತುತ ವರ್ಷವೂ ಗುರುವಂದನ ಆರಾಧನಾ ಹಾಗೂ ರಥೋತ್ಸವ ನಡೆಯಲಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಸಮೇತ ಸುತ್ತ ಮುತ್ತಲಿನ ಜಿಲ್ಲೆಯ ಸಹಸ್ರಾರು ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಸುದ್ದಿಗೋಷ್ಠಿಯಲ್ಲಿ ಶ್ರೀ ನಾರಾಯಣಸ್ವಾಮಿ,
ಶ್ರೀ ಪರದೇಶಿ ಸ್ವಾಮಿ,ಪಾಪಾಗ್ನಿ ಮಠ ಟ್ರಸ್ಟ್ ನ ಉಪಾಧ್ಯಕ್ಷ ಮಂಜುನಾಥಚಾರಿ,ಗೌರವಾಧ್ಯಕ್ಷ ಬಾಲಕೃಷ್ಣ ಚಾರಿ,
ಸಂಚಾಲಕರಾದ ಸುಬ್ರಹ್ಮಣ್ಯ ಚಾರಿ. ಎನ್ ಮತ್ತು ಇತರರು ಇದ್ದರು.