









ರಾಜಾನುಕುಂಟೆ ಗ್ರಾ.ಪಂ.ಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ :
ಯಲಹಂಕ : ಕ್ಷೇತ್ರದ ರಾಜಾನುಕುಂಟೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಅದ್ದಿಗಾನಹಳ್ಳಿ ಗ್ರಾಮದ ಸುಜಾತಮ್ಮ, ಉಪಾಧ್ಯಕ್ಷರಾಗಿ ರಾಜಾನುಕುಂಟೆ ಗ್ರಾಮದ ಸೌಮ್ಯ ಗೋವಿಂದರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿದ್ದ ಭವಾನಿ ಶ್ರೀನಿವಾಸ್, ಉಪಾಧ್ಯಕ್ಷರಾಗಿದ್ದ ಶಿವಕುಮಾರ್ ಅವರಿಂದ ತೆರವಾದ ಸ್ಥಾನಕ್ಕಾಗಿ ಬುಧವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಕ್ರಮವಾಗಿ ಅಧ್ಯಕ್ಷರಾಗಿ ಸುಜಾತಮ್ಮ, ಉಪಾಧ್ಯಕ್ಷರಾಗಿ ಸೌಮ್ಯ ಗೋವಿಂದರಾಜು ಅವರು ಅವಿರೋಧವಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷೆ ಸುಜಾತಮ್ಮ, ಉಪಾಧ್ಯಕ್ಷೆ ಸೌಮ್ಯ ಗೋವಿಂದರಾಜು ಅವರನ್ನು ಗ್ರಾ.ಪಂ.ಸದಸ್ಯರು, ಬಿಜೆಪಿ ಮುಖಂಡರು ಹಾಗೂ ಗ್ರಾಮಸ್ಥರು ಸನ್ಮಾನಿಸಿ ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್.ಎನ್.ರಾಜಣ್ಣ, ಚೊಕ್ಕನಹಳ್ಳಿ ವೆಂಕಟೇಶ್, ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಶ್ವನಾಥಪುರ ಮಂಜುನಾಥ್, ಮುಖಂಡರಾದ ವರುಣ್, ಅಶೋಕ್, ರಾಜಾನುಕುಂಟೆ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಎಸ್.ಜಿ.ನರಸಿಂಹಮೂರ್ತಿ (ಎಸ್.ಟಿ.ಡಿ.ಮೂರ್ತಿ), ವೀರಣ್ಣ ರಿಗ್ಲೆ, ಭವಾನಿ ಶ್ರೀನಿವಾಸ್, ಅಂಬಿಕಾ ರಾಜೇಂದ್ರ, ಚನ್ನಮ್ಮ, ಮಾಜಿ ಉಪಾಧ್ಯಕ್ಷರಾದ ಶಿವಕುಮಾರ್, ವೆಂಕಟೇಶ್, ಗ್ರಾ.ಪಂ.ಸದಸ್ಯರಾದ ಆರ್.ಡಿ.ರಾಜಣ್ಣ, ಆರ್.ಎಚ್. ಹನುಮೇಗೌಡ, ಎಂ.ಚಿಕ್ಕಣ್ಣ, ಆರ್.ಎಂ.ನಾಗಭೂಷಣ್, ಮುತ್ತು ವೇಣು, ರಾಜು ಕೆ., ಹೇಮಲತಾ ಡಿ.ಬಿ., ಗಂಗಮ್ಮ, ಸುಜಾತ, ಮಂಜುಳ, ಬಾಲಾಜಿ ಆರ್.ವಿ., ಪಿಡಿಓ ನಾಗರಾಜ್ ಸೇರಿದಂತೆ ಇನ್ನಿತರರಿದ್ದರು.