ಯಲಹಂಕ ಗ್ರಾ. ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಅವರ ಜನ್ಮದಿನಾಚರಣೆ :

ಬಿಜೆಪಿ ಮುಖಂಡರು, ಸ್ನೇಹಿತರು, ಹಿತೈಷಿಗಳಿಂದ ಶುಭ ಹಾರೈಕೆ :

ಯಲಹಂಕ : ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಸಿಂಗನಾಯಕನಹಳ್ಳಿ ರೈತ ಸೇವಾ ಸಹಕಾರ ಸಂಘದ ನಿರ್ದೇಶಕರಾದ ವಿಶ್ವನಾಥಪುರ ಮಂಜುನಾಥ್ ಅವರ ಜನ್ಮದಿನದ ಪ್ರಯುಕ್ತ ಅವರ ಸ್ವಗ್ರಾಮ ವಿಶ್ವನಾಥಪುರ ಗ್ರಾಮದ ನಿವಾಸದ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಎಸ್ ಅರ್ ವಿಶ್ವನಾಥ್ ಅವರು ಮಂಜುನಾಥ್ ಅವರಿಗೆ ಸನ್ಮಾನಿಸಿ ಜನ್ಮದಿನದ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್ ಎನ್ ರಾಜಣ್ಣ, ಡಿ.ಜಿ.ಅಪ್ಪಯ್ಯಣ್ಣ, ಟಿ.ಮುನಿರೆಡ್ಡಿ, ಎಸ್ ಜಿ ನರಸಿಂಹಮೂರ್ತಿ, ಕಾಕೋಳು ಮುನೇಶ್, ಎಸ್ ಜಿ ಪ್ರಶಾಂತ್ ರೆಡ್ಡಿ, ವರುಣ್, ವಸಂತ್ ಅರಕೆರೆ, ಎಚ್.ಸಿ.ರಾಜೇಶ್, ಮುನಿದಾಸಪ್ಪ, ರಾಜೇಂದ್ರ ಬೈರಾಪುರ, ಅನಿಲ್ ಬೈರಾಪುರ, ಆನಂದಮೂರ್ತಿ, ವಡೇರಹಳ್ಳಿ ಶ್ರೀನಿವಾಸ್, ಸಿ‌.ರಾಮು, ಕೆ.ಬಾಬು,ಯುವ ಮುಖಂಡರಾದ ನವೀನ್(ತಂಬಿ), ಹರೀಶ್, ಶ್ರೀಕಾಂತ್ ರೆಡ್ಡಿ, ಮಂಜುನಾಥ್, ಸಾದೇನಹಳ್ಳಿ ಪ್ರಕಾಶ್ ಗೌಡ, ರಾಜು, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಮಹೇಂದ್ರ, ಸೇರಿದಂತೆ ಇನ್ನಿತರರಿದ್ದರು.

ಇದೇ ವೇಳೆ ವಡೇರಹಳ್ಳಿ ಶ್ರೀನಿವಾಸ್ ಗೌಡ ಅವರ ಜನ್ಮದಿನಕ್ಕೂ ಸಹ ಮುಖಂಡರು ಶುಭ ಕೋರಲಾಯಿತು.

ಕಾರ್ಯಕ್ರಮದಲ್ಲಿ ಯುವ ಮುಖಂಡರಾದ ಹರೀಶ್, ಶ್ರೀಕಾಂತ್ ರೆಡ್ಡಿ ಹಾಗೂ ಸ್ನೇಹಿತರು ಮಂಜುನಾಥ್ ಅವರಿಗೆ ಬೆಳ್ಳಿ ಗದೆ ನೀಡಿ ಗೌರವಿಸಿದರು.

Leave a Reply

Your email address will not be published. Required fields are marked *