ಪಾಂಡವ ಕ್ಷತ್ರಿಯ ತಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಬೃಹತ್ ಅಭಿನಂದನಾ ಸಮಾರಂಭ :
ಯಲಹಂಕ : ಕ್ಷೇತ್ರದ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಕ್ಷತ್ರಿಯ ತಿಗಳ ಸಮುದಾಯದ ಕ್ಷೇಮಾಭಿವೃದ್ಧಿಗಾಗಿ ಹೆಸರಘಟ್ಟ ಸಮೀಪದ ಕೊಡಗಿ ತಿರುಮಳಾಪುರ ಸಮೀಪ ಒಂದು ಎಕರೆ ಜಾಗ ನೀಡಿರುವ ಕೊಡುಗೆಯನ್ನು ಸ್ಮರಿಸಿ‌ ಸಮುದಾಯದ ಮುಖಂಡರು ಕೊಡಗಿ  ತಿರುಮಳಾಪುರದ ತಿಗಳ‌ ಸಮುದಾಯ ಭವನದಲ್ಲಿ ಭಾನುವಾರ ಬೃಹತ್ ಅಭಿನಂದನಾ ಸಮಾರಂಭ ಏರ್ಪಡಿಸಿ ಶಾಸಕ ಎಸ್ ಆರ್ ವಿಶ್ವನಾಥ್, ಆರ್ ಎಸ್ ಎಸ್ ಎನ್ ಬ್ಯಾಂಕ್ ಅಧ್ಯಕ್ಷೆ ಡಾ.ವಾಣಿಶ್ರೀ ವಿಶ್ವನಾಥ್, ಬಿಜೆಪಿ ಯುವ ಮುಖಂಡ ಅಲೋಕ್ ವಿಶ್ವನಾಥ್ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ಸಮಾರಂಭಕ್ಕೂ ಮುನ್ನ ಕೊಡಗಿ ತಿರುಮಳಾಪುರ ಗೇಟ್ ನಿಂದ ಕಾರ್ಯಕ್ರಮದ ವೇದಿಕೆಯವರೆಗೆ ಶಾಸಕ ಎಸ್ ಆರ್ ವಿಶ್ವನಾಥ್, ವಾಣಿಶ್ರೀ ವಿಶ್ವನಾಥ್ ದಂಪತಿಗಳನ್ನು ಒಂಟೆ ರಥದಲ್ಲಿ ಕ್ಷತ್ರಿಯ ಪರಂಪರೆಯ ರೀತಿಯಲ್ಲಿ ಬೃಹತ್ ಮೆರವಣಿಗೆಯ ಮೂಲಕ ಕರೆತರಲಾಯಿತು. ವೇದಿಕೆಯ ಬಳಿ ಬೃಹತ್ ಸೇಬು ಹಣ್ಣಿನ ಹಾರವನ್ನು ಕ್ರೇನ್ ಸಹಾಯದಿಂದ ದಂಪತಿ ಗಳಿಗೆ ಹಾಕಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಮಾತನಾಡಿ ‘ಯಲಹಂಕ ಕ್ಷೇತ್ರದಲ್ಲಿ ಬಹುತೇಕ ಸಮುದಾಯಗಳಿಗೆ ಹಾಸ್ಟೆಲ್ ಅಥವಾ ಸಮುದಾಯ ನಿರ್ಮಾಣದಂತಹ ಸಾಮುದಾಯಿಕ ಕ್ಷೇಮಾಭಿವೃದ್ಧಿ ಕಾರ್ಯಗಳಿಗಾಗಿ ಜಾಗ ನೀಡಿದ್ದು, ಅಂತೆಯೇ ಕ್ಷತ್ರಿಯ ತಿಗಳ ಸಮುದಾಯಕ್ಕೆ ಕೊಡಗಿ ತಿರುಮಳಾಪುರ ಗ್ರಾಮದಲ್ಲಿ ಒಂದು‌ ಎಕರೆ ಜಾಗ ನೀಡಿದ್ದೇನೆ. ತಿಗಳ ಸಮುದಾಯದ ಅಭಿಮಾನ ಬಹು ದೊಡ್ಡದು, ಸಮುದಾಯದ ಏಳಿಗೆಗಾಗಿ ನೀಡಿದ ಕೊಡುಗೆ ಯನ್ನು ಸ್ಮರಿಸಿ, ಬೃಹತ್ ಅಭಿನಂದನಾ ಸಮಾರಂಭ ಏರ್ಪಡಿಸಿ, ನಮ್ಮನ್ನು ಸನ್ಮಾನಿಸಿರುವುದು ಸಂತೋಷದ ಸಂಗತಿ. ಸದರಿ ಜಾಗದಲ್ಲಿ ತಿಗಳ ಸಮುದಾಯ ಭವನ ಮತ್ತು ಸಮುದಾಯದ ಬಡ ಮಕ್ಕಳಿಗೆ ಹಾಸ್ಟೆಲ್ ನಿರ್ಮಾಣಕ್ಕಾಗಿ ಒಂದು ಕೋಟಿ ರು.ಗಳ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕರು, ತಿಗಳ ಸಮುದಾಯದ ಮುಖಂಡರಾದ ನೆ.ಲ.ನರೇಂದ್ರ ಬಾಬು, ಅಖಿಲ ಕರ್ನಾಟಕ ತಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು, ಬಿಬಿಎಂಪಿ ಮಾಜಿ ವಿರೋಧ ಪಕ್ಷದ ನಾಯಕರಾದ ಎ.ಎಚ್.ಬಸವರಾಜು, ಪಾಂಡವ ಕ್ಷತ್ರಿಯ ತಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು, ಮಾಜಿ ಜಿ.ಪಂ.ಸದಸ್ಯ ಎಂ.ಬಿ.ಕೃಷ್ಣಯ್ಯ, ಕೊಲ್ಲಾಪುರದಮ್ಮ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಎಲ್.ಕುಂಬಯ್ಯ, ಹೆಸರಘಟ್ಟ ಗ್ರಾ.ಪಂ.ಅಧ್ಯಕ್ಷೆ ಟಿ.ಪರಿಮಳ ಸೇರಿದಂತೆ ಹೆಸರಘಟ್ಟ ಮತ್ತು ದಾಸನಪುರ ಹೋಬಳಿಯ ತಿಗಳ ಸಮುದಾಯದ ಮುಖಂಡರಿದ್ದರು.

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

R Hanumanthau kogilu layout Yelahanka Bangalore Karnataka

9845085793

8050671579

7349337989

Leave a Reply

Your email address will not be published. Required fields are marked *