ಚಿಕ್ಕಬಳ್ಳಾಪುರ : ದೇಶದ ಜನತಂತ್ರ ವ್ಯವಸ್ಥೆ ಬಲಿಷ್ಟವಾಗಿಸಲು,ಪ್ರಜಾ ಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಬೇಕಾದರೆ ಯುವ ಶಕ್ತಿಯು ತಪ್ಪದೆ ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ತಿಳಿಸಿದರು.
ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಜಿಲ್ಲಾ ಯುವ ಕಾಂಗ್ರೆಸ್ ಏರ್ಪಡಿಸಿದ್ದ ಯುವ ಸಂವಾದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜಕಾರಣಕ್ಕೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು.ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು.ಎಂಬುದನ್ನು ಮನಗಂಡಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಮತದಾನ ಮಾಡಲು ನಿಗದಿ ಪಡಿಸಿದ್ದ ೨೧ವರ್ಷದ ೧೮ ವರ್ಷಕ್ಕಿಳಿಸಿದರು.ಇದನ್ನು ಮನಗಂಡು ಮತವನ್ನು ಚಲಾಯಿಸಿ ದೇಶದ ದಿಕ್ಕನ್ನು ಬದಲಾಯಿಸಿ ಎಂದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಬೇರಿ ಭಾರಿಸಲಿದ್ದು ದೇಶದ ಅಖಂಡತೆ ಮತ್ತು ಸಾರ್ವಭೌಮತೆಯನ್ನು ಎತ್ತಿಹಿಡಿಯಲಿದೆ.ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಚಿಕ್ಕಬಳ್ಳಾಪುರವನ್ನು ಬೆಂಗಳೂರಿನ ಮಾದರಿಯಲ್ಲಿ ಅಭಿವೃದ್ದಿ ಮಾಡುತ್ತೇವೆಯೇ ಹೊರತು, ಸಿಂಗಾಪುರ ಮಾಡುವುದಿಲ್ಲ.ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಮಾನವ ಸಂಪನ್ಮೂಲ ಇರುವುದನ್ನು ಮನಗಂಡಿದ್ದು ಹೆಚ್ಚಿನ ಕೈಗರಿಕೆಗಳನ್ನು ಇಲ್ಲಿ ಸ್ಥಾಪಿಸುವ ಮೂಲಕ ಯುವಕರಿಗೆ, ಸ್ಥಳೀಯರಿಗೆ ಉದ್ಯೋಗ ನೀಡುವ ಕೆಲಸ ಮಾಡುತ್ತೇವೆ. ಇದೆಲ್ಲಾ ಸಾಧುವಾಗಬೇಕಾದರೆ ಮತದಾನದ ಹಕ್ಕುಳ್ಳ ಅರ್ಹ ಯುವಜನತೆ ತಪ್ಪದೆ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಮೂಲಕ ನಿಮ್ಮಗೆ ಒಪ್ಪುವ ಅರ್ಹರನ್ನು ಆರಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯ ಯುವ ಮತದಾರರು,ಕಾಲೇಜು ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಧ್ವನಿಯಾಗಲು ಡಿಜಿಟಲ್ ಪ್ಲಾಟ್ಫಾರಂನಲ್ಲಿ ಅವಕಾಶ ನೀಡಲಾಗಿದೆ.ಮೊಬೈಲ್ ಬಳಸಿಕೊಂಡು ಅಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಸಮಸ್ಯೆಗನ್ನು ದಾಖಲಿಸಬಹುದು.ಇದಕ್ಕೆ ಎಂ.ಎಸ್.ರಾಮಯ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪರಿಹಾರ ನೀಡುವುದು ಎಂದರು.
ಜಿಲ್ಲೆಯ ಜನತೆ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆ ಹರಿಸಲು, ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರಲು,ನೀರಾವರಿ, ಉದ್ಯೋಗ,ಬೇಸಾಯ ಮೊದಲಾದ ಕ್ಷೇತ್ರಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಈ ಬಾರಿಯ ಲೋಕ ಸಭಾ ಚುನಾವಣೆಯಲ್ಲಿ ಮತದಾನ ಎಂಬ ಅಸ್ತ್ರವನ್ನು ಬಳಸಿಕೊಳ್ಳಬೇಕು. ಈ ಮೂಲಕ ಜ್ಯಾತ್ಯಾತೀತ ಮನೋಭಾವವುಳ್ಳ,ದೇಶದ ಸಂವಿಧಾನಕ್ಕೆ ಬೆಲೆ ನೀಡುವ ಸಮರ್ಥ ನಾಯಕರನ್ನು ಆರಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ ರಾಜಕಾರಣದಲ್ಲಿ ಎಲ್ಲರೂ ಕೆಟ್ಟವರು ಇರುವುದಿಲ್ಲ, ಅಲ್ಲಿ ನನ್ನಂತಹ ಒಳ್ಳೆಯವರೂ ಇರುತ್ತಾರೆ.ಮುಂಬರುವ ದಿನಗಳಲ್ಲಿ ಯುವಕರಿಗೆ ರಾಜಕಾರಣದಲ್ಲಿ ಹೆಚ್ಚಿನ ಜವಾಬ್ದಾರಿಗಳು ದೊರೆಯುವ ಕಾರಣ ಯುವಕರು ರಾಜಕಾರಣಕ್ಕೆ ಬರಬೇಕು.ಅದಕ್ಕೂ ಮೊದಲು ಒಳ್ಳೆಯ ಶಿಕ್ಷಣ ಪಡೆದುಕೊಳ್ಳಿ ಎಂದರು.
ನನ್ನ ಬಳಿ ಕೆಲಸ ಕೇಳಿಕೊಂಡು ಬರುವ ಯುವಕರಿಗೆ ನಾನು ಹೇಳುವುದಿಷ್ಟೆ. ಕೆಲಸಕ್ಕೆ ಸೇರಿದರೆ ಏನೂ ಮಾಡಲಾಗುವುದಿಲ್ಲ,ನೀವೇ ಕೆಲಸ ಕೊಡುವಂತೆ ಬೆಳೆದರೆ ನೀವು ಇತರರಿಗೆ ಕೆಲಸ ಕೊಡಬಹುದು. ನನಗೆ ಇಂಗ್ಲೀಷ್ ಭಾಷೆ ಸರಿಯಾಗಿ ಬರುವುದಿಲ್ಲ ಎಂದು ಯಾರೂ ಕೆಲಸ ಕೊಡಲಿಲ್ಲ. ಆಗ ನಾನೇ ಸಂಸ್ಥೆ ಕಟ್ಟುವ ಮೂಲಕ ಈಗ ೪೦೦ ಜನಕ್ಕೆ ಕೆಲಸ ಕೊಟ್ಟಿದ್ದೇನೆ.ಇಂಗ್ಲೀಷ್ ಇರೋದೆ ತಪ್ಪಾಗಿ ಮಾತನಾಡಲು, ಕನ್ನಡ ಇರೋದು ಸರಿಯಾಗಿ ಮಾತನಾಡಲು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಮತದಾನ ಸಂವಿಧಾನ ಬದ್ದ ಹಕ್ಕು. ಅದರ ಮೂಲಕವೇ ನಾನು ಎಂಎಲ್ಎ ಆಗಿರೋದು. ಯುವಜನತೆ ತಪ್ಪದೆ ಮತದಾನ ಮಾಡಿ, ಕ್ಷೇತ್ರದ ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಗಣಪತಿ ಹಬ್ಬಕ್ಕೆ ಒಬ್ಬ ಅಣ್ಣನಾಗಿ ಹೊಸ ಬಟ್ಟೆಯನ್ನು ಉಡುಗೊರೆಯಾಗಿ ನೀಡುತ್ತಿದ್ದೇನೆ.ನಿಮಗೆ ಏನೇ ಸಮಸ್ಯೆ ಇದ್ದರೂ ನನ್ನ ಬಳಿ ಹೇಳಿಕೊಳ್ಳಿ, ತಪ್ಪದೆ ಅದನ್ನು ನಿವಾರಿಸುವೆ ಎಂದರು.
ಇಲ್ಲಿರುವ ವಿದ್ಯಾರ್ಥಿಗಳು ಚೆನ್ನಾಗಿ ಓದಿ,ಒಂದು ಗುರಿಯಿಟ್ಟುಕೊಳ್ಳಿ,ಕಷ್ಟಪಟ್ಟು ಇಷ್ಟಪಟ್ಟು ಓದಿ,ಹೇಗೆ ಓದಬೇಕು ಎಂದರೆ ಫಲಿತಾಂಶದ ದಿನ ಇಡೀ ಕರ್ನಾಟಕ ನಿಮ್ಮನ್ನು ಓದಬೇಕು ಹಾಗೆ ಓದಿ ಎಂದು ಹುರಿದುಂಬಿಸಿದರು.
ಕಾರ್ಯಕ್ರಮದಲ್ಲಿ ಎಂಎಸ್ ರಾಮಯ್ಯ ಚಾರಿಟೇಬಲ್ಟ್ರಸ್ಟ್ ವತಿಯಿಂದ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ್ದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ
ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷ ಕೇಶವರೆಡ್ಡಿ, ಮಾಜಿ ಶಾಸಕ ಎಸ್ ಎಂ ಮುನಿಯಪ್ಪ,ಡಿಸಿಸಿ ಬ್ಯಾಂಕ್ ನಿರ್ದೆಶಕ ಮೋಹನ್ ರೆಡ್ಡಿ,ಬಿ ಎಸ್ ರಫೀಉಲ್ಲಾ,ಜೋಳದ ಕಿಟ್ಟಿ,
ಮಮತಾಮೂರ್ತಿ,ಯುವ ಕಾಂಗೈ ಮುಖಂಡ ಕುಬೇರ ಅಚ್ಚು,
ಮಂಡಿಕಲ್ ಶಂಕರ,ಕೂಪೆಂದ್ರ, ನಗರಸಭೆ ಸದಸ್ಯರು,ಎನ್ ಎಸ್ ಯು ಐ ಮುಖಂಡರು ಮತ್ತು ಇತರರು ಇದ್ದರು.

