[26/08, 9:31 pm] R Hanumanthu: ತಾಳ್ಮೆಗೆ ಸಮಾನವಾದ ತಪಸ್ಸಿಲ್ಲ. ಸಂತೋಷಕ್ಕಿಂತ
ಹೆಚ್ಚಿನ ಸುಖವಿಲ್ಲ.ದುರಾಸೆಗೆ
ಸಮನಾದ ರೋಗವಿಲ್ಲ. ದಯೆಗಿಂತ ಹೆಚ್ಚಿನ ಧರ್ಮವಿಲ್ಲ
🙏🙏ಶುಭ ದಿನ 🙏🙏
[26/08, 9:31 pm] R Hanumanthu: ಪರಮಾತ್ಮನಿಂದಾದ ಈ ಜಗತ್ತಿನಲ್ಲಿ ಸೃಷ್ಟಿಸಲ್ಪಟ್ಟ ಕೋಟಿ ಕೋಟಿ ಕಾಯಗಳಲ್ಲಿ ಈ ಭೂಮಿ ಒಂದು ಸಣ್ಣ ಕಾಯ. ನಾವು ಇದರ ಮೇಲೆ ಜೀವಿಸಿದ್ದೇವೆ. ಹಾಗಾಗಿ ನಮಗಿದು ಪರಿಚಿತ. ಅನ್ಯ ಆಕಾಶ ಕಾಯಗಳ ವಿಚಾರ ನಮ್ಮ ಅರಿವಿನ ಪರಿಧಿಯಿಂದ ದೂರ, ಅಲ್ಲವೇ? ಹಾಗಾಗಿ ನಾವು ಕೇವಲ ಈ ಭೂಮಿಗೆ ಸಂಬಂಧಿಸಿದ ವಿಚಾರಗಳನ್ನು ನೋಡುವ. ಮೂರ ಭಾಗ ನೀರು ಒಂದು ಭಾಗ ಭೂಮಿ. ಮೇಲೆ ಆಕಾಶ ಬೀಸುವ ಗಾಳಿ ನೆತ್ತಿಯಮೇಲೆ ಸೂರ್ಯ, ಮತ್ತು ಅನ್ಯ ಗ್ರಹಗಳು, ಚಂದ್ರ. ಇವೆಲ್ಲ ನಮಗೆ ಕಾಣುತ್ತದೆ. ಸೂರ್ಯನಿಂದ ಬೆಳಕು ಮತ್ತು ಶಾಖ ನಮಗೆ ಸಿಗುತ್ತದೆ. ಬೆಳಕು ಕಾಣುತ್ತದೆ, ಶಾಖವನ್ನು ಅನುಭವಿಸಬಹುದು. ಆದರೆ ಆ ಸೂರ್ಯನಿಂದ ಭೂಮಿಗೆ ಈ ಬಿಸಿಲು ಮತ್ತು ಶಾಖದ ಜೊತೆಗೆ ಹರಿದುಬರುವ ಜೀವರಸಗಳ ಪ್ರವಾಹವನ್ನು ನಾವು ಕಾಣಲೂ ಆಗುವುದಿಲ್ಲ, ಅನುಭವಿಸಲೂ ಆಗುವುದಿಲ್ಲ. ಆದರೂ ನಾವೆಲ್ಲಾ ಅದರ ಪ್ರಭಾವಕ್ಕೊಳಗಾಗುತ್ತೇವೆ, ಅಲ್ಲವೇ?ಹಾಗೆಯೇ ಈ ಭೂಮಿಯು, ಆ ಸೂರ್ಯನಿಂದ ಬೆಳಕು ಮತ್ತು ಶಾಖದೊಂದಿಗೆ ಹರಿದುಬರುವ ಹಲವಾರು ಜೀವರಸಗಳನ್ನು ತನ್ನ ಗರ್ಭದೊಳಕ್ಕೆ ಬಟ್ಟಿ ಇಳಿಸಿಕೊಂಡು ತನ್ನ ಸತ್ವವನ್ನೂ ಅದಕ್ಕೆ ಮಿಶ್ರಣ ಮಾಡಿ ಸಸಿ, ಗಿಡ ಮರಗಳಿಗೆ ಅವುಗಳ ಬೇರುಗಳ ಮೂಲಕ ತುಂಬಿ ಇಡೀ ಭೂಮಿಯ ಮೇಲಿನ ಸಕಲ ಚರಾಚರ ಜೀವಿಗಳಿಗೆ ಆಹಾರವನ್ನು ಒದಗಿಸಿ, “ಅನ್ನಪೂರ್ಣೆ” ಎನ್ನುವ ಹೆಸರನ್ನು ಪಡೆದಿದೆ. ಅದನ್ನೇ ಮಾನ್ಯ ಗುಂಡಪ್ಪನವರು
“ಉಭಯರ ಸಹಕಾರದಿಂದ” ಎನ್ನುತ್ತಾರೆ.ಅಷ್ಟೇ ಅಲ್ಲ ಬೀಸುವ ಗಾಳಿ, ಸುರಿಯುವ ಮಳೆ, ಇವೆಲ್ಲವನ್ನೂ ಒಂದಕ್ಕೊಂದು ಸಹಕರಿಸುವಂತೆ ಮಾಡುವ ಆ ಪರಮ ಚೇತನ ಎಲ್ಲವೂ ಈ ಇಳೆಯ ಜೀವರಾಶಿಗಳ ಅಸ್ತಿತ್ವಕ್ಕೆ ಸಹಕಾರಿಗಳಾಗೆ ಇವೆ. ಆದರೆ ಆ ಸೂರ್ಯ, ಈ ಭೂಮಿ, ಆ ಗಾಳಿ, ಸೂರ್ಯನ ಬೆಳಕು ಮತ್ತು ಶಾಖ ಮತ್ತು ಆ ಪರತತ್ವ, ಯಾವ ಕ್ರಮದಲ್ಲಿ ಕೆಲಸ ಮಾಡುತ್ತವೆ, ಅವುಗಳ ಕಾರ್ಯದಿಂದ ಪರಿಣಾಮಗಳು ಹೇಗೆ ಆಗುತ್ತವೆ ಎನ್ನುವುದು ಬಹಳ ಸೂಕ್ಷ್ಮ ವಿಚಾರ ಮತ್ತು ನಮ್ಮಂತಹ ಸಾಮಾನ್ಯರಿಗೆ ಅರ್ಥವಾಗುವುದೇ ಇಲ್ಲ. ಈ ಜಗತ್ತಿನಲ್ಲಿ ನಾವು ಜನಿಸಿದ್ದೇವಾದ್ದರಿಂದ ಕೇವಲ ಇವೆಲ್ಲವನ್ನೂ ನೋಡುತ್ತಾ, ಆನಂದಿಸುತ್ತಾ, ಅನುಭವಿಸಬೇಕಷ್ಟೇ. ಇವುಗಳನ್ನು ವಿಶ್ಲೇಷಣೆ ಮಾಡಿ ತರ್ಕ ಕುತರ್ಕಗಳಿಂದ ಅತಿ ಬುದ್ಧಿವಂತಿಕೆಯನ್ನು ತೋರುವುದು ಸರಿಯಲ್ಲ.ಆ ಪರಮಾತ್ಮನ ಕೃಪೆಯಿಂದ, ಇವೆಲ್ಲವೂ ಆಗಿವೆ. ಅ ಪರಮ ಶಕ್ತಿಯ ನಿರ್ದೇಶನದಂತೆ ಅವೆಲ್ಲವೂ ತಮ್ಮ ತಮ್ಮ ಕಾರ್ಯಗಳನ್ನು ಮಾಡುತ್ತಿವೆ. ವಾಚಕರೆ , ಅವುಗಳು ಸಮರ್ಪಕವಾಗಿ ಕೆಲಸ ಮಾಡುತ್ತಿರುವುದರಿಂದ, ನಮ್ಮ ಜೀವನ ಸುಗಮವಾಗಿ ಸಾಗುತ್ತಿದೆ ಎಂದು ಅರ್ಥಮಾಡಿಕೊಂಡು, ಸುಭಾವದಿಂದ ಒಪ್ಪಿಕೊಂಡು, ಅದಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತಾ, ಈ ಭುವಿಯಲ್ಲಿ ಕುತರ್ಕ-ಕುಭಾವಗಳಿಲ್ಲದೆ ಸಂತೋಷ ಮತ್ತು ಆನಂದದಿಂದ ಬಾಳಬೇಕು ಅಲ್ಲವೇ? ಅಂತಹ ಪ್ರಯತ್ನವನ್ನು ನಾವೂ ಸಹ ಮಾಡೋಣವೆ?
[26/08, 9:31 pm] R Hanumanthu: ಕೇವಲ ಸೂರ್ಯನಿಂದಾಗಲೀ ಅಥವಾ ಕೇವಲ ಪ್ರುತ್ವೀತತ್ವದಿಂದಾಗಲೀ ಈ ಭೂಮಿಯು ಅಸ್ತಿತ್ವದಲ್ಲಿಲ್ಲ. ಈ ಭೂಮಿಯ ಅಸ್ಥಿಸ್ತ್ವಕ್ಕೆ ಈ ಎರಡರ ಸಹಕಾರವೂ ಬೇಕು. ಅಷ್ಟೇ ಅಲ್ಲ ಇವೆರಡರ ಸಹಕಾರದಿಂದ ಈ ಭೂಮಿಯ ಮೇಲ್ಮೈಯಲ್ಲಿ ಮತ್ತು ಅಂತರ್ಯದಲ್ಲಿ ಉತ್ಪತ್ತಿಯಾಗುವ ಹಲವಾರು ಜೀವರಸಗಳ ಸಮ್ಮಿಲನದಿಂದ ಇಲ್ಲಿ ಜೀವಿಗಳ ಜೀವಿಕೆ ಸಾಧ್ಯ. ಆದರೆ ಇದು ಏಕೆ ಹೀಗೆ? ಹಾಗೆ ಯಾಕಿರಬಾರದು? ಇದು ಹೀಗೇ ಏಕಾಗುತ್ತದೆ ಹಾಗೇಕಿರಬಾರದು, ಇದು ಸರಿ, ಅದು ಸರಿಯಿಲ್ಲ ಎನ್ನುವಂತಾ ತರ್ಕ ಕುತರ್ಕಗಳಿಗೆ ಸಿಗದ ಸೂಕ್ಷ್ಮವಿಚಾರವಿದು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.