ವಧು-ವರರ ಸಮಾವೇಶ : –
ಇಂದು ಬೆಳಗ್ಗೆ 10.00 ಗಂಟೆಗೆ ವೇದ ಮಂತ್ರಗಳೊಂದಿಗೆ ಪ್ರಾರಂಭ. ಮುಖ್ಯ ಅತಿಥಿಗಳಾಗಿ ಸ್ಥಳೀಯರು ಹಿರಿಯ ಮುತ್ಸದ್ದಿಗಳಾದ ಶ್ರೀನಿವಾಸ ದೇವಾಲಯದ ಟ್ರಸ್ಟಿ ಶ್ರೀಯುತ ವೆಂಕಟರಾಮ್ ರವರು ಮಾತನಾಡಿ ವಿವಾಹಾಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡಿದರು.
ಬೆಂಗಳೂರು, ಕೋಲಾರ, ತುಮಕೂರು, ರಾಮನಗರ, ಮೈಸೂರು ಭಾಗಗಳಿಂದ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ವಧು-ವರರು ಪೋಷಕರೊಂಗೆ ಆಗಮಿಸಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಈ 8ನೇ ಸಮಾವೇಶವನ್ನು ತುಮಕೂರು ಚಿಕ್ಕಪೇಟೆ ಶ್ರೀನಿವಾಸ ದೇವಾಲಯ ಟ್ರಸ್ಟ್ (ರಿ.) ಹಾಗೂ ಗೌತಮ್ ಮ್ಯಾಟ್ರಿಮೋನಿ ಸಹಯೋಗದಲ್ಲಿ ಯಶಸ್ವಿಯಾಗಿ ನಡೆಸಲಾಯಿತು ಎಂದು ಟಿ.ಎನ್. ಮುರಳೀಧರ್ ಅಧ್ಯಕ್ಷರು ಬ್ರಾಹ್ಮಣ ಕಂಕಣ ಮಾಹಿತಿ ಸಭಾ ಬೆಂಗಳೂರು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ತಾ 27-8-2023 ತುಮಕೂರು

Aug 28, 2023

Leave a Reply

Your email address will not be published. Required fields are marked *