Post navigation ಕೋಲಾರ ಜಿಲ್ಲೆಯ ಬಂಗಾರಪೇಟೆ ರೈಲ್ವೆ ನಿಲ್ದಾಣಕ್ಕೆ ಹೈಟೆಕ್ ಟಚ್ ನೀಡಿರುವ ರೈಲ್ವೆ ಇಲಾಖೆ, ಇದೀಗ ರೈಲ್ವೆ ನಿಲ್ದಾಣದ ಮೂರು ಕಡೆ ಪ್ಯಾಸೆಂಜರ್ ಎಸ್ಕಲೇಟರ್ ವ್ಯವಸ್ತೆ ಮಾಡಿದ್ದು, ಸಂಸದ ಮುನಿಸ್ವಾಮಿ ಎಸ್ಕಲೇಟರ್ ಉದ್ಗಾಟನೆ ಮಾಡಿದ್ರು, ಬಳಿಕ ಕೆಜಿಎಪ್ ನ ಬೆಮೆಲ್ ನಗರದ ಹೈಟೆಕ್ ರೈಲ್ವೆ ನಿಲ್ದಾಣವನ್ನು ಸಂಸದ ಮುನಿಸ್ವಾಮಿ ಉದ್ಗಾಟನೆ ಮಾಡಿದ್ರು, ಬಂಗಾರಪೇಟೆ ರೈಲ್ವೆ ನಿಲ್ದಾಣ ಎದುರು ಆಯೊಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ, ನೈರುತ್ಯ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು, ಸ್ತಳೀಯ ಜನಪ್ರತಿನಿಧಿಗಳು, ಬಿಜೆಪಿ ಮುಖಂಡರು ಭಾಗಿಯಾಗಿದ್ದರು, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಮುನಿಸ್ವಾಮಿ ಅವ್ರು, ಬೆಂಗಳೂರು ಹೊರತಾಗಿ ಅತಿಹೆಚ್ಚು ರೈಲ್ವೆ ನಿಲ್ದಾಣ ಹೊಂದಿರುವ ಕೋಲಾರ ಜಿಲ್ಲೆಯಲ್ಲಿ ಈಗಾಗಲೇ 500 ಕೋಟಿ ವೆಚ್ಚದಲ್ಲಿ ರೈಲ್ವೆ ನಿಲ್ದಾಣ ಅಭಿವೃದ್ದಿ ಮಾಡಲಾಗಿದೆ, ಹಿಂದೆ ಕೆಎಚ್ ಮುನಿಯಪ್ಪ ಅವ್ರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗಲು ಈ ಮಟ್ಟಿಗೆ ಅಭಿವೃದ್ದಿ ಆಗಿಲ್ಲ, ಮೋದಿ ಸರ್ಕಾರ ಎಂದರೇನೆ ಅಭಿವೃಧ್ದಿ ಎಂದರು. ರೈತ ನಾಯಕ ರಾಕೇಶ್ ಟಿಕಾಯತ್ ಮತ್ತು ಯದುವೀರ್ ಸಿಂಗ್ ಅವರಿಂದ ಟಿಪ್ಪು ಸುಲ್ತಾನ್ ಪ್ರತಿಮೆಗೆ ಪುಷ್ಪ ನಮನ.