ಬೀದರ ನಗರದ ಬೋಯಿಗಲ್ಲಿ ನಿವಾಸಿಯಾಗಿರುವ ಶಶಿಕಾಂತ ತಂದೆ ನಾಗೇಂದ್ರರಾವ ಹಿವರೆ ಜಾತಿ ಹಿಂದುಳಿದ ಪ್ರ ವರ್ಗ-1ಕ್ಕೆ ಸೇರಿರುವುದು, ಇವರ ಜನ್ಮ ದಿನಾಂಕ: 08/08/1965 ರಂತೆ ಇರುತ್ತದೆ. ಸರ್ಕಾರಿ ಹಿಂದಿ ಪಾಠ ಶಾಲೆಯ ನೋಂದಣಿ ಪುಸ್ತಕದ ಕ್ರಮ ಸಂಖ್ಯೆ: 708/1971-72 ರ ಜಾತಿ ಕಾಲಂ ನಲ್ಲಿ ಭೋಯಿ ಎಂದು (ಃhoee) ಎಂದು ನಮೂದಿಸಿದ್ದು ಇರುತ್ತದೆ. ಕಾಲಂ 9 ರಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವರ್ಗದವರೇ ಎನ್ನುವ ಕಾಲಂ ನಲ್ಲಿ (–) ಎಂದು ಇರುತ್ತದೆ. ಕಾಲಂ ನಂ. 18 ರಲ್ಲಿ ಯಾವುದಾದರೂ ಶಿಷ್ಯವೇತನ ಪಡೆದಿದ್ದಾರೆ ಎನ್ನುವ ಕಾಲಂ ನಲ್ಲಿ ಬಿ.ಸಿ. ಶಿಷ್ಯವೇತನ ಸಂದಾಯ ಮಾಡಲಾಗಿದೆ ಎಂದು ನಮೂದಿಸಲ್ಪಟ್ಟಿರುತ್ತದೆ. ನಂತರ ಸರ್ಕಾರಿ ಪಿ.ಯು. ಬಾಲಕರ ಕಾಲೇಜು ಬೀದರ ಕಾಲೇಜಿನ ನೋಂದಣಿ ಪುಸ್ತಕದ ಕ್ರಮ ಸಂಖ್ಯೆ: 240/1978-79 ಜಾತಿ ಕಾಲಂ ನಲ್ಲಿ ಹಿಂದೂ ಎಂದು ಇರುತ್ತದೆ. 10ನೇ ತರಗತಿಯ ಉತ್ತೀರ್ಣವಾದ ವರ್ಗಾವಣೆ ಪ್ರಮಾಣ ಪತ್ರದ ಸಂಖ್ಯೆ: 112/1981-82 ರ ಕಾಲಂ-9 ರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರೇ ಎನ್ನುವ ಕಾಲಂ ನಲ್ಲಿ (ಓಔ) ಎಂದು ನಮೂದಿಸ್ಪಟ್ಟಿರುತ್ತದೆ. ಮತ್ತು ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜಿನ ನೋಂದಣಿ ಪುಸ್ತಕದ ಕ್ರಮ ಸಂಖ್ಯೆ: 53/1981-82 ಜಾತಿ ಕಾಲಂ ನಲ್ಲಿ ಭಾರತೀಯ ಭೋಯಿ ಎಂದು (Iಟಿಜiಚಿಟಿ ಃhoie) ಎಂದು ಇರುತ್ತದೆ. 12ನೇ ತರಗತಿ ಉತ್ತೀರ್ಣವಾದ ವರ್ಗಾವಣೆ ಪ್ರಮಾಣ ಪತ್ರದ ಕ್ರಮ ಸಂಖ್ಯೆ: 262/1983-84 ಜಾತಿ ಕಾಲಂ 9 ರಲ್ಲಿ ಹಿಂದೂ ಭೂಯಿ (ಊiಟಿಜu ಃhoi) ನಮೂದಿಸ್ಪಟ್ಟಿರುತ್ತದೆ. ಕಾಲಂ ನಂ. 10 ರಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವರ್ಗದವರೇ ಎನ್ನುವ ಕಾಲಂ ನಲ್ಲಿ (ಓಔ) ಎಂದು ನಮೂದಿಸಲ್ಪಟ್ಟಿರುತ್ತದೆ. ತಹಸೀಲ್ದಾರ ಬೀದರ ರವರಿಂದ ದಿನಾಂಕ: 10/05/1985 ರಲ್ಲಿ ಪರಿಶಿಷ್ಟ ಜಾತಿ (ಭೋವಿ) ಎಂದು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಂಡು ದಿನಾಂಕ: 04/06/1985-86 ರಲ್ಲಿ ವನ ಪಾಲಕರ ಸರ್ಕಾರಿ ಹುದ್ದೆಗೆ ನೇಮಕ ಹೊಂದಿರುತ್ತಾರೆ. ನಂತರ ಇಲಾಖೆಯ ತರಬೇತಿ ಪಡೆದು ರಾಯಚೂರು ಜಿಲ್ಲೆಯ ಕುಷ್ಟಗಿಯಲ್ಲಿ 1992 ರವರೆಗೆ ಸೇವೆ ಸಲ್ಲಿಸಿ ನಂತರ 1996ನೇ ವರ್ಷದವರೆಗೆ ಔರಾದ ತಾಲೂಕಿನಲ್ಲಿ ಸೇವೆ ಸಲ್ಲಿಸಿ ನಂತರ 1996ನೇ ಸಾಲಿನಲ್ಲಿ ವಲಯ ಅರಣ್ಯ ಅಧಿಕಾರಿಗಳೆಂದು ಮುಂಬಡ್ತಿ ಪಡೆದಿರುತ್ತಾರೆ.
ಹೀಗಿರುವಾಗ, ಸದರಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಹುದ್ದೆ ಕಬಳಿಸಿರುವ ಸಂಬAಧ ದೂರು ಸಲ್ಲಿಸಿರುವ ಮೇರೆಗೆ ದಿನಾಂಕ: 08/09/2016 ರಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಕಲಬುರಗಿ ರವರು ಸಂಪೂರ್ಣ ತನಿಖಾ ವರದಿಯನ್ನು ಜಿಲ್ಲಾಧಿಕಾರಿಗಳು ಬೀದರ ರವರಿಗೆ ಸಲ್ಲಿಸಿರುತ್ತಾರೆ. ಇದಾದ ನಂತರ ಮಾನ್ಯ ಜಿಲ್ಲಾಧಿಕಾರಿಗಳು ಬೀದರ ರವರು ಜಿಲ್ಲಾ ಮಟ್ಟದ ಜಾತಿ ಪರಿಶೀಲನಾ ಸಮಿತಿ ಸಭೆ ಗೊತ್ತುಪಡಿಸಿದ ದಿನಾಂಕ: 23/11/2021 ರಂದು ಅದರಂತೆ ಮಾನ್ಯ ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಬೀರ ಇವರು ದಿನಾಂಕ: 24/11/2021 ರಂದು ಸಭಾ ಸೂಚನಾ ಪತ್ರವನ್ನು ತೆಗೆದು ಸಂಬAಧಪಟ್ಟ ಅಧಿಕಾರಿಗಳಿಗೆ ದಿನಾಂಕ: 01/12/2021 ರಂದು ನಡೆಯುವ ಜಿಲ್ಲಾ ಮಟ್ಟದ ಜಾತಿ ಪರಿಶೀಲನಾ ಸಮಿತಿ ಸಭೆಗೆ ಖುದ್ದಾಗಿ ಹಾಜರಾಗಲು ಕೋರಿರುತ್ತಾರೆ. ತದನಂತರ ದಿನಾಂಕ: 03/12/2021 ರಂದು ಮಾನ್ಯ ಜಿಲ್ಲಾಧಿಕಾರಿಗಳು ಬೀದರ ರವರು 2ನೇ ಜಾತಿ ಪರಿಶೀಲನಾ ಸಮಿತಿ ಸಭೆಯನ್ನು ಕರೆಯಲು ಸೂಚಿಸಿರುವ ಕಾರಣ ಮಾನ್ಯ ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಬೀದರ ರವರು ದಿನಾಂಕ: 03/12/2021 ರಂದು ಸಭಾ ಸೂಚನಾ ಪತ್ರವನ್ನು ಮತ್ತೆ 2ನೇ ಜಾತಿ ಪರಿಶೀಲನಾ ಸಮಿತಿ ಸಭೆಯನ್ನು ದಿನಾಂಕ: 06/12/2021 ರಂದು ಜಿಲ್ಲಾಧಿಕಾರಿಗಳು ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಜಾತಿ ಪರಿಶೀಲನಾ ಸಭೆಯನ್ನು ನಿಗದಿಪಡಿಸಿರುವಾಗ ಶಶಿಕಾಂತ ತಂದೆ ನಾಗೇಂದ್ರರವಾ ಹಿವರೆ ಯವರ ನ್ಯಾಯವಾದಿ ಕೆ.ಎಮ್. ಘಾಟೆ ರವರು ಉಚ್ಛ ನ್ಯಾಯಾಲಯ ಕಲಬುರಗಿ ಪೀಠದಲ್ಲಿ ದಿನಾಂಕ: 09/12/2021 ರಂದು ರಿಟ್ ಪಿಟಿಷನ್ ಸಂಖ್ಯೆ: 202486/2021 ರಂದು ನ್ಯಾಯ ಕೋರಿ ಅರ್ಜಿಯನ್ನು ಸಲ್ಲಿಸಿರುತ್ತಾರೆ. ಅಂದಿನಿAದ ಇಲ್ಲಿಯವರೆಗೆ ಕೇವಲ ಕಾಲವನ್ನು ಕಳೆಯುತ್ತಾ ನಿಂತಿರುವುದು ಕಂಡು ಬರುತ್ತಿದೆ. ಸದರಿ ವ್ಯಕ್ತಿಯ ಮೇಲೆ ಸೇವೆಯಲ್ಲಿದ್ದಾಗಲೇ ಕಾನೂನು ಕ್ರಮ ಕೈಗೊಳ್ಳಬಹುದು. ಆದರೆ ಸರ್ಕಾರ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರಕ್ಕೆ ಮೋಸ, ವಂಚನೆ ಮಾಡಿರುವ ವ್ಯಕ್ತಿಯ ವಯೋ ನಿವೃತ್ತಿ ಹೊಂದುವವರೆಗೆ ದಾರಿ ಕಾಯುತ್ತಾ ಕುಳಿತಿರುವುದು ಕಂಡು ಬರುತ್ತಿದೆ.
ಮಾನ್ಯ ನ್ಯಾಯಾಲಯದಿಂದ ಬಂದAತಹ ಅಧಿಕೃತ ಪತ್ರ ಬರೆದಿದ್ದರೂ ಕೂಡ ಕೇವಲ ನ್ಯಾಯವಾದಿಗಳು ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ಹಾಕಿರುವುದಾಗಿ ಒಂದು ಪತ್ರ ಸಲ್ಲಿಸಿದ ಆಧಾರದ ಮೇಲೆ ಸದರಿ ವ್ಯಕ್ತಿಯ ವಿರುದ್ಧ ಕಾನೂನಿನ ಸೂಕ್ತ ಕ್ರಮ ಜರುಗಿಸುವುದಕ್ಕೆ ಹಿಂಜರಿಯುತ್ತಿರುವುದು ದಲಿತ ವಿರೋಧಿ ನೀತಿಯಾಗಿದೆ.
ಆದ್ದರಿಂದ, ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ದಲಿತರಿಗೆ ಹಾಗೂ ಸರ್ಕಾರಕ್ಕೆ ಮೋಸ, ವಂಚನೆ ಮಡಿರುವ ವ್ಯಕ್ತಿಯ ವಿರುದ್ಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಎಸ್.ಸಿ. ಜನಾಂಗಕ್ಕೆ ನ್ಯಾಯ ಒದಗಿಸಿಕೊಡಬೆಕೆಂದು ಇಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ರಾಜಕುಮಾರ ಮೂಲಭರತಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಲಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಟಿ.ಆರ್. ಕರಂಜೆ, ಸಂತೋಷ ಏಣಕೂರ, ಬಸವರಾಜ ಮೀಠಾರೆ ಉಪಸ್ಥಿತರಿದ್ದರು.
