ಹುಬ್ಬಳ್ಳಿ:- ಸೇನೆಯಲ್ಲಿ ಕನಿಷ್ಠ 17 ರಿಂದ ಗರಿಷ್ಠ 25 ವರ್ಷ ಸೇವೆ ಸಲ್ಲಿಸಿ ನಾವು ಈಗ 18 ಸಾವಿರ ದಿಂದ 25 ಸಾವಿರ ರೂಗಳ ಪಿಂಚಣಿ ಪಡೆಯುವುದು ನಮ್ಮ ಮಕ್ಕಳ ವಿದ್ಯಾಭ್ಯಾಸ ಮನೆ ಬಾಡಿಗೆ ಹಾಗೂ ತಿಂಗಳ ಖರ್ಚಿಗೆ ಸಾಲದಾಗಿದೆ. ಸೇನೆಯಲ್ಲಿ ಬಿಸಿಲು ಮಳೆ ಚಳಿ ಎನ್ನದೆ ಗಡಿ ಹಾಗೂ ಸಂಕಷ್ಟಗಳಲ್ಲಿ ಸೇವೆ ಸಲ್ಲಿಸಿದ್ದೇವೆ ಎಂದು ಮಾಜಿ ಸೈನಿಕರ ಅಸೋಸಿಯೇಷನ್ ಅಧ್ಯಕ್ಷ ನಿಂಗಪ್ಪ ಖಾನೋಜಿ ಹೇಳಿದರು.

ಹುಬ್ಬಳ್ಳಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರೈಲ್ವೇಯು 2012-13 ರಲ್ಲಿ ರೈಲ್ವೆ ಎಲ್ಲ ನೇಮಕಾತಿಯಲ್ಲಿ ಶೇ.10 ಮೀಸಲಾತಿ ನೀಡಿದೆ ಅದರ ಅನ್ವಯ ರೈಲ್ವೆಯಲ್ಲಿ ಇದ್ದ ನಿವೃತ್ತಿ ಸೈನಿಕರು ಸಾಕಷ್ಟು ಸಂಖ್ಯೆಯಲ್ಲಿ 2013-14ರಲ್ಲಿ ಡಿ ದರ್ಜೆಯ ವಿವಿಧ ಹುದ್ದೆಗಳಲ್ಲಿ ನೇಮಕ ಹೊಂದಿದರು. ನಂತರ ಎಸ್ ಡಬ್ಲ್ಯೂ ಆರ್ ಮತ್ತು ಸುಮಾರು 350 ರಿಂದ 400 ನಿವೃತ್ತಿ ಸೈನಿಕರಿಗೆ ತೆಗೆದುಕೊಂಡಿತು ಆದರೆ ನಮ್ಮನ್ನು ಪ್ರತಿ ವರ್ಷ ಸೇವೆಯಿಂದ ಸ್ವಯಂ ನಿವೃತ್ತಿಗೊಳಿಸುವುದು ಮತ್ತೆ ನಂತರ 11 ತಿಂಗಳ ಅವಧಿಗೆ ಮರಳಿ ಪಡೆಯುತ್ತಿತ್ತು. ಆದರೆ 2018 ರಿಂದ ಕೋವಿಡ್ 19 ಸಂದರ್ಭದಲ್ಲಿ ಸುಮಾರು 4 ವರ್ಷ ನಮ್ಮನ್ನು ಸಂಬಳ ಜಾಸ್ತಿ ಮಾಡುವ ಮೂಲಕ ಸೇವೆ ಪಡೆಯಿತು. ಮಾಜಿ ಸೈನಿಕರ ಗೆಟ್ ಮ್ಯಾನ್ ಸೇವಾ ಅವಧಿಯು ಸಪ್ಟಂಬರ್ 31ರಂದು ಅವಧಿ ಮುಕ್ತಾಯಗೊಳ್ಳುತ್ತಿತ್ತು ಆದರೆ ಎಸ್.ಡಬ್ಲ್ಯೂ .ಆರ್. ಜಿ ಎಂ ಅವರು ಆಗಸ್ಟ್ 31 ರಂದು ನಮ್ಮನ್ನು ಸೇವೆಯಿಂದ ಟರ್ಮಿನೇಷನ್ ಮಾಡುವ ಮಾಹಿತಿ ದೊರಕಿದ ಕೂಡಲೇ ನಾವು ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರನ್ನು ಭೇಟಿಯಾದ ನಂತರ ಎಸ್ ಡಬ್ಲ್ಯೂ ಆರ್ ಜಿ ಎಂ ಅವರಿಗೆ ಮಾಜಿ ಸೈನಿಕರ ಹಿತ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು. ಜಿ ಎಂ ಅವರನ್ನು ಭೇಟಿ ಮಾಡಿ ಕೇಳಿದಾಗ ರೈಲ್ವೆ ಬೋರ್ಡಿನಿಂದ ನಮಗೆ ಯಾವುದೇ ಸೂಚನೆಗಳು ದೊರಕಿಲ್ಲದ ಕಾರಣ ನಿಮ್ಮನ್ನು ಟರ್ಮಿನೆಟ್ ಮಾಡಿದ್ದೇವೆ ಎಂದು ಮಾನವೀಯತೆ ತೋರದೆ ಏಕಾಏಕಿ ನಮ್ಮನ್ನು ಕೆಲಸದಿಂದ ವಜಾಗೊಳಿಸಿದ್ದಾರೆ. ಈ ವಿಷಯವಾಗಿ ಕೇಂದ್ರ ರೈಲು ಸಚಿವರಾದ ಅಶ್ವಿನ್ ಅವರನ್ನು ಸಹ ನಾವು ಭೇಟಿ ಮಾಡಿ ನಮ್ಮ ಸಮಸ್ಯೆಗಳನ್ನ ಕೇಳಿಕೊಂಡಿದ್ದೇವೆ ಆದರೂ ಸಹ ಇಲ್ಲಿಯ ಜಿಎಂ ಮಾನವೀಯತೆ ತೋರದೆ ನಮ್ಮನ್ನು ನಮ್ಮ ಮಕ್ಕಳನ್ನು ಬೀದಿಗೆ ತಳ್ಳಿದ್ದಾರೆ. ನಾವು ಇವಾಗ ಎಲ್ಲಿ ಕೆಲಸ ಹುಡುಕುವುದೆಂಬುದೇ ಕಷ್ಟಕರವಾಗಿದೆ. ನೈರುತ್ಯ ರೈಲ್ವೆ ವಲಯದಲ್ಲಿ ಗೆಟ್ ಮ್ಯಾನ 142 ಜನ ಮಾಜಿ ಸೈನಿಕರು ಕಾರ್ಯನಿರ್ವಹಿಸುತ್ತಿದ್ದರು ಅವರನ್ನೆಲ್ಲ ಕೆಲಸದಿಂದ ವಜಾ ಮಾಡಿ ನಮ್ಮ ಕುಟುಂಬಗಳನ್ನು ತುಂಬಾ ಸಂಕಷ್ಟಕ್ಕೆ ಸಿಲುಕಿಸಿದೆ ಸಾಲ ಸೂಲ ಮಾಡಿ ಜೀವನ ನಡೆಸುತ್ತಿದ್ದ ನಮ್ಮನ್ನೆಲ್ಲ ಬೀದಿಗೆ ತಂದಿದ್ದಾರೆ. ಎಸ್ ಡಬ್ಲ್ಯೂ ಆರ್ ಜಿ ಎಮ್ ಅವರಿಗೆ ಮನವಿ ಏನಂದರೆ ನಮಗೆ ಮರಳಿ ಕೆಲಸ ಕೊಡುವ ಯತ್ನವನ್ನು ಮಾಡಬೇಕು, ಗುತ್ತಿಗೆ ಆಧಾರದ ಮೇಲಾದರೂ ನಮಗೆ ಕೆಲಸ ನೀಡಲಿ ಎಂದು ಕೇಳಿಕೊಳ್ಳುತ್ತೇವೆ.ಮತ್ತು ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರಿಗೂ ಹಾಗೂ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನ್ ಅವರಿಗೆ ಗೇಟ್ ಮ್ಯಾನ್ ಕೆಲಸ ನಿರ್ವಹಿಸುತ್ತಿದ್ದ ಮಾಜಿ ಸೈನಿಕರ 142 ಕುಟುಂಬಗಳಿಗೆ ಮಾನವೀಯತ್ತೆ ತೋರಬೇಕೆಂದು ಕೇಳಿಕೊಳ್ಳುತ್ತೇವೆ.

ಪತ್ರಿಕಾಗೋಷ್ಠಿಯಲ್ಲಿ ಅಲ್ಲಾಭಕ್ಷ್ ಮುಲ್ಲಾ, ಹುಸೇನ್ ಸಾಬ್ ಹವಾಲ್ದಾರ್, ಸಂಜೀವ ಸಾವಜಿ, ಉಮೇಶ್ ಭೋಸ್ಲೆ ,ಮಲ್ಲಿಕಾರ್ಜುನ ವಲ್ಲಿ ,ಫಕೀರಪ್ಪ ಪಾಟೀಲ್ ಇದ್ದರು.

ಬಾಕ್ಸ್


ನೈರುತ್ಯ ರೈಲ್ವೆ ವಲಯದಲ್ಲಿ ಮಾಜಿ ಸೈನಿಕರು ಗೇಟ್ ಮಂಡಾಗಿ ಕೆಲಸ ನಿರ್ವಹಿಸುತ್ತಿದ್ದು 12 ಗಂಟೆಗಳ ಕಾಲ ವಾರದಲ್ಲಿ 60 ಗಂಟೆಗಳ ಕಾಲ ನಿರಂತರವಾಗಿ ಕೆಲಸ ನಿರ್ವಹಿಸುತ್ತಿದ್ದೇವೆ ಆದರೆ ಸ್ಪಾರ್ಕ್ ಏಜೆನ್ಸಿ ಅವರಿಂದ ಬೇರೆ ಮಾಜಿ ಸೈನಿಕರನ್ನು ಕೆಲಸಕ್ಕೆ ಸೇರ್ಪಡೆ ಮಾಡಿಕೊಂಡು 142 ಮಾಜಿ ಸೈನಿಕರಣ್ಣ ಬೀದಿಗೆ ತಳ್ಳಿದ್ದಾರೆ ಎಂದು ಎಸ್ ಡಬ್ಲ್ಯೂ ಆರ್ ಎಕ್ಸ್ ಸರ್ವಿಸ್ ಮ್ಯಾನ್ ಅಸೋಸಿಯೇಷನ್ ಕೇಳಿಕೊಂಡಿದ್ದಾರೆ

Leave a Reply

Your email address will not be published. Required fields are marked *