ಬಳ್ಳಾರಿ ಸೆ.07
ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ೩೬೦೦ ಕಿಲೋಮೀಟರ್ ಪಾದಯಾತ್ರೆ ಮಾಡಿ, ವಿನೋಭಾಬಾವೆ, ಮಹಾತ್ಮ ಗಾಂಧಿ, ಚಂದ್ರಶೇಖರ್, ದೇವೇಗೌಡ, ಸಿದ್ದರಾಮಯ್ಯ ಮತ್ತು ವೈ.ಎಸ್ ರಾಜಶೇಖರ್ ರೆಡ್ಡಿ ಸಹ ಪಾದಯಾತ್ರೆ ಮಾಡಿದ್ದರು, ಆದರೆ ಯಾರೂ ಸಹ ಆರು ತಿಂಗಳ ಕಾಲ ಇಷ್ಟು ಸುಧರ್ಘ ಅವದಿಯ ಪಾದಯಾತ್ರೆಯನ್ನು ಮಾಡಿಲ್ಲ ರಾಹುಲ್ ಗಾಂಧಿಯವರು ಪ್ರಪಂಚದಲ್ಲೇ ಅತಿದೊಡ್ಡ ಪಾದಯಾತ್ರೆ ಮಾಡಿ ದೇಶದ ವಿವಿದ ಪ್ರದೇಶದ ಜನರ ಕಷ್ಟ ಸಂಕಷ್ಟಗಳನ್ನು ತಿಳಿದುಕೊಂಡು ದೇಶದಲ್ಲಿ ಸ್ಟೇಟ್ಸ್ ಮೆನ್ ಆಗಿ ಹೊರಹೊಮ್ಮಿದ್ದಾರೆ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ದೇಶದ ಬಡಜನರಿಗೆ ಅನುಕೂಲವಾಗಲಿದೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ೨೮ ಪಕ್ಷಗಳ ಒಕ್ಕೂಟ ಇಂಡಿಯಾ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಮಾಜಿ ಲೋಕಸಭಾ ಸದಸ್ಯರಾದ ವಿ.ಎಸ್ ಉಗ್ರಪ್ಪ ಅಭಿಪ್ರಾಯಪಟ್ಟರು.
ಅವರು ಇಂದು ನಗರದ ರ್ಕಾರಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಾಹುಲ್ ಪಾದಯಾತ್ರೆ ಮಾಡಿ ಇಂದಿಗೆ ಒಂದು ರ್ಷವಾಗಿದೆ, ಈ ಪಾದಯಾತ್ರೆಯಿಂದ ದೇಶದಲ್ಲಿ ಭಾವೈಕ್ಯತೆ, ಸಮಗ್ರತೆ, ಬ್ರಾತೃತ್ವ ಮತ್ತು ಏಕತೆ ಮೂಡಲು ಸಹಕಾರಿಯಾಗಿದೆ ಎಂದರು. ಒಂದು ದೇಶ ಒಂದು ಚುನಾವಣೆ ಎನ್ನುವುದು ಅಸಂಬದ್ದವಾದ ಯೋಚನೆಯಾಗಿದೆ, ಇದು ಅಸಾಧ್ಯವಾದ ಮಾತೇ ಸರಿ, ಗ್ರಾಮ ಪಂಚಾಯಿತಿಯಿಂದ ಹಿಡಿದು ಲೋಕಸಭಾ ಸದಸ್ಯರ ವರೆಗೆ ಏಕಕಾಲಕ್ಕೆ ಚುನಾವಣೆ ನಡೆಸುವುದು ಅಸಾಧ್ಯವಾದ ಮಾತೇ ಸರಿ, ಅಸಲಿಗೆ ಮೋದಿ ಒಬ್ಬ ದೊಡ್ಡ ಐರೆನ್ ಲೆಗ್ ಇದ್ದಂತೆ ಅವರು ಪ್ರಚಾರ ನಡೆಸಿದ ಯಾವ ರಾಜ್ಯದಲ್ಲೂ ಬಿ.ಜೆ.ಪಿ ಅಧಿಕಾರಕ್ಕೆ ಬಂದಿಲ್ಲ, ಬಿ.ಜೆ.ಪಿ ಅಧಿಕಾರಕ್ಕೆ ಬಂದ ಎಲ್ಲಾ ರಾಜ್ಯಗಳಲ್ಲೂ ಆಪರೇಷನ್ ಕಮಲ ಮಾಡಿ ಹಿಂಬಾಗಿಲ ಮೂಲಕವೇ ಅಧಿಕಾರಕ್ಕೆ ಬಂದಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೋಲುತ್ತವೆ ಎಂಬ ಹತಾಶೆಯಿಂದ ಮಹಿಳಾ ಮೀಸಲಾತಿ, ಭಾರತ, ಎನ್ನುವಂತ ಅಸಂಬದ್ದವಾದ ವಿಷಯಗಳನ್ನು ಹರಿಬಿಟ್ಟಿದೆ, ಅಡುಗೆ ಅನಿಲ ಸೇರಿದಂತೆ ಬೆಲೆ ಏರಿಕೆ ಬಗ್ಗೆ ಮಾತನಾಡದ ಕೇಂದ್ರ ಸನಾತನ ರ್ಮ, ಜಾತಿ ಎಂಬ ದ್ವೇಷವನ್ನು ಬಿತ್ತುತ್ತಿದೆ ಧರ್ಮಿಕ ಭಾವನೆಗಳ ಬದಲಾಗಿ ಬಡವರ ಸಮಸ್ಯೆಗಳನ್ನು ರ್ಚಿಸಬೇಕಾದ ಅಗತ್ಯವಿದೆ ಬದ್ದತೆಯಿಲ್ಲದ ಬಿ.ಜಿ.ಪಿ ಪಕ್ಷ ಜಾತಿ ರ್ಮದ ಬಗ್ಗೆ ವಿಷ ಬೀಜ ಬಿತ್ತುತ್ತಿದೆ ಎಂದು ವಿರುದ್ದ ಹರಿಹಾಯ್ದರು.
ವಿಧಾನಸಭೆಯಲ್ಲಿ ಮತ್ತು ವಿಧಾನ ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕರನ್ನು ಸಹ ಆಯ್ಕೆ ಮಾಡದಂತ ದುಸ್ಥಿತಿಯಿಂದ ಬಿ.ಜೆ.ಪಿ ರಾಜ್ಯದಲ್ಲಿ ಹೀನಾಯ ಸ್ಥಿತಿಗೆ ತಲುಪಿದೆ, ಇದೇ ಪರಿಸ್ಥಿತಿ ದೇಶದಲ್ಲೂ ಬರಲಿದೆ ಎಂದು ವಾಗ್ದಾಳಿ ನಡೆಸಿದರು. ಈ ಸಂರ್ಭದಲ್ಲಿ ಸಂಗನಕಲ್ಲು ವಿಜಯ್ ಕುಮಾರ್, ವೆಂಕಟೇಶ್ ಹೆಗಡೆ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರಿದ್ದರು.
2ನೇ ಸುದ್ದಿ ಸಾರ್,
