ದೇವನಹಳ್ಳಿ: ಸಾವಕನಹಳ್ಳಿ ಗ್ರಾಮದಲ್ಲಿ ಎನ್ ಹೆಚ್ 207 ರಾಷ್ಟ್ರೀಯ ಹೆದ್ದಾರಿಗೆ ಸರ್ವಿಸ್ ರಸ್ತೆ ಇಲ್ಲದಿರುವುದು ಹಾಗೂ ರಾಜ ಕಾಲುವೆ ಮುಚ್ಚಿರುವುದರಿಂದ ಸಾವಕನಹಳ್ಳಿ, ಅನಿಘಟ್ಟ, ಬಿದಲೂರು ಮುಂತಾದ ಗ್ರಾಮಗಳಲ್ಲಿ ಜನರಿಗೆ ತೊಂದರೆ ಉಂಟಾಗಿದ್ದು ಇದನ್ನು ಸರಿಪಡಿಸಿಕೊಡಬೇಕು ಎಂದು ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಬಿದಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್ ಪಿ ಮುನಿರಾಜು ಅವರ ನೇತೃತ್ವದಲ್ಲಿ ಗ್ರಾಮಸ್ಥರು ಸಾವಕನಹಳ್ಳಿ ಬಳಿ ಮನವಿ ಮಾಡಿದರು.
ರಾಷ್ಟ್ರೀಯ ಹೆದ್ದಾರಿ 207 ವೀಕ್ಷಣೆಗೆ ಶನಿವಾರ ದಿಢೀರ್ ಬೇಟಿ ನೀಡಿದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಾವಕನಹಳ್ಳಿ ಬಳಿ ಹೆದ್ದಾರಿ ರಸ್ತೆಗೆ ಸರ್ವೀಸ್ ರಸ್ತೆ ಇಲ್ಲದಿರುವ ಬಗ್ಗೆ ಮನವಿ ಮಾಡಿದ ಗ್ರಾಮಸ್ಥರ ಅಹವಾಲನ್ನು ಆಲಿಸಿದ ಸಚಿವರು ಕೂಡಲೇ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲಾ ಉಸ್ತುವಾರಿ ಸಚಿವ ಕೆಎಚ್ ಮುನಿಯಪ್ಪ, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ಮುಖಂಡರುಗಳಾದ ರಾಮಚಂದ್ರ, ಚೌಡಪ್ಪನ ಹಳ್ಳಿ ಲೋಕೇಶ್, ಚಿನ್ನಪ್ಪ, ದೇವರಾಜ್ , ಗ್ರಾ ಪಂ ಸದಸ್ಯೆ ವಿಮಲಾ ಸಾವಕನಹಳ್ಳಿ ಗಜೇಂದ್ರ, ಕೃಷ್ಣ, ಮಾಳಿಗೆನಹಳ್ಳಿ ಪ್ರಕಾಶ್ ಮುಂತಾದವರು ಇದ್ದರು.
