ಕೊರಟಗೆರೆ ,ಸೆಪ್ಟಂಬರ್, ಇಡೀ ವಿಶ್ವದಲ್ಲೇ ತನ್ನದೇ ಆದ ವೈಶಿಷ್ಟ್ಯತೆಗಳಿಂದ ಹೆಗ್ಗುರುತು ಹೊಂದಿರುವ ಬೆಂಗಳೂರನ್ನು ನಾಡಪ್ರಭು ಕೆಂಪೇಗೌಡ ಅವರು ನಿರ್ಮಿಸಿದ್ದು ಯಾವುದೇ ಸ್ವಾರ್ಥಪರತೆ, ಜಾತಿ ಮೋಹವಿಲ್ಲದೇ ಬಳಪೇಟೆ ಕಬ್ಬನ್ ಪೇಟೆ ಚಿಕ್ಕಪೇಟೆ ಎಂಬುದಾಗಿ ಸ್ಥಾಪಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಬೆಂಗಳೂರಿನಲ್ಲಿ ತನಗಾಗಿ ಯಾವುದನ್ನು ಸ್ವಾರ್ಥಕ್ಕಾಗಿ ಬಳಸಲಿಲ್ಲವೆಂದು ಕೇಂದ್ರ ಒಕ್ಕಲಿಗರ ಸಂಘದ ನಿರ್ದೇಶಕ ಹನುಮಂತರಾಯಪ್ಪ ಅವರು ತಿಳಿಸಿದರು.

ತಾಲೂಕಿನ ಹೊಳವನಲ್ಲಿ ಹೋಬಳಿ ವ್ಯಾಪ್ತಿಯ ಮಧ್ಯ ವೆಂಕಟಪುರ ಗ್ರಾಮದಲ್ಲಿ ಅಸ್ತಿತ್ವಕ್ಕೆ ಬಂದ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಯುವ ಪಡೆಯ ನೂತನ ಸಂಘಟನೆ ನಾಮ ಫಲಕ ಅನಾವರಣಗೊಳಿಸಿ ಮಾತನಾಡಿದ ಅವರು ಒಕ್ಕಲಿಗ ಸಮುದಾಯದವರು ಸ್ವಾರ್ಥ ಪರರಲ್ಲ ವಿಶಾಲವಾದ ಮನಸ್ಸುಳ್ಳ ದಾನಿಗಳಾಗಿದ್ದು ಭೂಮಿಯನ್ನ ಹದಗೊಳಿಸಿ ಉತ್ತು ಹೊತ್ತು ಕಷ್ಟಪಟ್ಟು ಬೆಳೆದು ನಾಡು ಕಟ್ಟುತ್ತಿದ್ದೇವೆ ಎಂದು ತಿಳಿಸಿದರು.

ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ಇಂದು ಯಾವುದಕ್ಕೂ ಕಡಿಮೆ ಇಲ್ಲದೆ ಅತ್ಯುತ್ತಮವಾಗಿ ಇಡೀ ಜಗತ್ತೇ ಬೆರಗುಗೊಳಿಸುವಂತಹ ಸಾಧನೆ ಮಾಡಿದ್ದು ಇಂದಿಗೂ ಕೂಡ ಬೆಂಗಳೂರಿನಲ್ಲಿ ವಿಶ್ವದ ಮೂಲೆ ಮೂಲೆಯ ದೇಶದ ಜನರು ಬಂದು ನೆಲಸಿ ಬದುಕು ಕಟ್ಟಿಕೊಂಡಿದ್ದಾರೆ ಆರ್ಥಿಕವಾಗಿ ಸದೃಢರಾಗಿದ್ದಾರೆ ಇಂದಿಗೂ ಬೆಂಗಳೂರಿನಲ್ಲಿ ಲಕ್ಷ ಕೋಟಿ ಜನರು ಇದ್ದು ಇದಕ್ಕೆ ಮೂಲ ಕಾರಣ ಕೆಂಪೇಗೌಡರು ಇಂತಹ ಮಹಾನ್ ನಾಯಕ ನಮ್ಮ ವಂಶದವರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ ಎಂದರು.

ನಾಡು ಕಟ್ಟಿದ ಕೆಂಪೇಗೌಡ ಅವರನ್ನು ರಾಜ್ಯದ ಮೂಲೆ ಮೂಲೆಯ ಎಲ್ಲಾ ಭಾಗಗಳಲ್ಲಿ ಸ್ಮರಿಸುತ್ತಿದ್ದು ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಗಳಲ್ಲಿ ಕೆಂಪೇಗೌಡರ ಹುಡುಗರು ಜಯಂತಿ ಹಾಗೂ ಅವರ ಹೆಸರಿನಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಇತರೆ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗುತ್ತಿದ್ದು ಇದಕ್ಕೆ ರಾಜ್ಯ ವಕ್ಕಲಿಗರ ಸಂಘ ಸಹಕಾರ ನೀಡುತ್ತದೆ ಎಂದು ತಿಳಿಸಿದರು.

ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳು ಉನ್ನತವಾದ ವಿದ್ಯಾಭ್ಯಾಸ ಮಾಡುವ ಸಲುವಾಗಿ ಸಂಘದ ವತಿಯಿಂದ ಉತ್ತಮ ರೀತಿಯ ಹಾಸ್ಟೆಲ್ , ಆರೋಗ್ಯ ಸೇವೆ ಗಳನ್ನ ಅತ್ಯುತ್ತಮವಾಗಿ ನೀಡುತ್ತಿದ್ದು ಕಳೆದ ಎರಡು ವರ್ಷಗಳಿಂದ ಎಲ್ಲಾ ಭಾಗದಲ್ಲಿಯೂ ಕೆಂಪೇಗೌಡರ ಜಯಂತಿಯನ್ನು ಆಚರಿಸಲು ಸಂಘದ ವತಿಯಿಂದ 25 ಸಾವಿರ‌ ಧನ ಸಹಾಯ ಮಾಡಲಾಗುತ್ತದೆ ಎಂದರು.

ನಾಡಪ್ರಭು ಕೆಂಪೇಗೌಡ ವಕ್ಕಲಿಗರ ಯುವ ಪಡೆಯ ರಾಜ್ಯ ಅಧ್ಯಕ್ಷ ದೇವರಾಜ್ ಗೌಡ್ರು ಅವರು ಮಾತನಾಡುತ್ತಾ ವಕ್ಕಲಿಗ ಸಮುದಾಯದ ಕೆಂಪೇಗೌಡ ಅವರು ನಮಗೆಲ್ಲಾ ಮಾದರಿಯಾಗಿದ್ದು ಅವರ ಧೈರ್ಯ ಸ್ಥೈರ್ಯ ಮತ್ತು ಆಳ್ವಿಕೆಯ ತತ್ವಾದರ್ಶಗಳನ್ನ ನಾವೆಲ್ಲ ಅಳವಡಿಸಿಕೊಂಡು ಹಳ್ಳಿಯಿಂದ ದಿಲ್ಲಿಯವರೆಗೂ ಎಲ್ಲಾ ವಿಭಾಗಗಳಲ್ಲೂ ಅತ್ಯುತ್ತಮವಾದ ಸಾಧನೆಯನ್ನು ಮಾಡಬೇಕು ಈನಿಟ್ಟಿನಲ್ಲಿ ಈಗಾಗಲೇ ಯಶಸ್ಸು ಕಂಡಿದ್ದು ನಮ್ಮ‌ ಮಕ್ಕಳು ಉತ್ತಮವಾದ ಸಾಧನೆ ಮಾಡುವಂತಾಗಬೇಕು ಎಂದರು.

ಕೊರಟಗೆರೆ ತಾಲೂಕಿನ ಮಧ್ಯ ವೆಂಕಟಪುರದಲ್ಲಿ ಸ್ಥಾಪನೆಯಾದ ಸಂಘಟನೆ ತಾಲೂಕಿನಾದ್ಯಾಂತ ಹರಡಿಕೊಂಡು ಒಕ್ಕಲಿಗ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲಾ ರೀತಿಯಿಂದಲೂ ಸಹಕಾರ ನೀಡಿ ಶ್ರಮಿಸಲಾಗುವುದು ಎಂದು ತಿಳಿಸಿದರಲ್ಲದೇ ಗ್ರಾಮದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಿ ಹಿರಿಯರನ್ನ ಗೌರವಿಸಿ ಸನ್ಮಾನಿಸಿದರು.

ನೂತನ ಸಂಘಟನೆಯ ನಾಮಫಲಕದ ಅನಾವರಣದ ವೇಳೆ ನಾಡಪ್ರಭು ಕೆಂಪೇಗೌಡ ವಕ್ಕಲಿಗರ ಯುವ ಪಡೆಯ ಪ್ರಧಾನ ಕಾರ್ಯದರ್ಶಿ ಡಿ ಮಂಜುನಾಥ್, ರಾಜ್ಯ ಮಹಿಳಾ ಅಧ್ಯಕ್ಷೆ ಲೀಲಾವತಿ, ಮಹಿಳಾ ಘಟಕದ ಲಕ್ಷ್ಮಮ್ಮ,ರಾಜೇಶ್ವರಿ, ರಾಜ್ಯ ಉಪಾಧ್ಯಕ್ಷರಾದ ನರಸಿಂಹಮೂರ್ತಿ, ಗಂಗನರಸಿಂಹಯ್ಯ, ವಿಷ್ಣುಸೇನಾ ಅಧ್ಯಕ್ಷರಾದ ಶ್ರೀ ಜಗದೀಶ್, ನಂದೀಶ್, ನಾಗಭೂಷಣ್, ಸೋಮಶೇಖರ್ , ನಂಜಮ್ಮ ,ಭದ್ರೇಶ್ ಸೇರಿದಂತೆ ಮಧ್ಯ ವೆಂಕಟಪುರ ಗ್ರಾಮದ ಯುವಕರಾದ ರಾಕೇಶ್, ರಘುನಂದನ್ ರಮೇಶ್, ಗ್ರಾಮದ ಅಧ್ಯಕ್ಷ ರಂಗ ಮುತ್ತಯ್ಯ, ಮಂಜುನಾಥ್, ವೀರಕ್ಯಾತಯ್ಯ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *