Post navigation ಚಿಕ್ಕಬಳ್ಳಾಪುರ: ನಿಮ್ಮ ತಂದೆ ತಾಯಿ ಎಷ್ಟು ಕಷ್ಟ ಪಟ್ಟು ನಿಮ್ಮನ್ನು ಓದಿಸುತ್ತಿದ್ದಾರೆ ಅಂತ ಮೊದಲು ತಿಳಿದುಕೊಳ್ಳಿ, ಇಲ್ಲಿ ಮೊದಲನೇ ವರ್ಷದ ಇಂಜಿನಿಯರಿಂಗ್ ಕೋರ್ಸ್ ಗೆ ಸೇರಲು ಬಂದಿರುವ ನೀವು ಎಲ್ಲರೂ ದುಡ್ಡು ಇದ್ದುಕೊಂಡು ಇಂಜಿನಿಯರಿಂಗ್ ಕೋರ್ಸ್ ಓದಲು ಬಂದಿರುವುದಿಲ್ಲ, ಸುಮಾರು ವಿದ್ಯಾರ್ಥಿಗಳ ತಂದೆ-ತಾಯಂದಿರು ಅವರ ಸಂಬಂಧಿಕರಿಂದ, ಅಥವಾ ಬ್ಯಾಂಕ್,ಸ್ತ್ರೀ ಶಕ್ತಿ ಸಂಘಗಳಿಂದ ಹಣವನ್ನು ತಂದು ನಿಮ್ಮನ್ನು ಓದಿಸುತ್ತಿದ್ದಾರೆ.ಅದನ್ನು ಅರಿತುಕೊಂಡು ಈ 4 ವರ್ಷವನ್ನು ಶ್ರದ್ಧೆಯಿಂದ ಓದಿ ಇಂಜಿನಿಯರಿಂಗ್ ಕೋರ್ಸ್ ಅನ್ನು ಮುಗಿಸಿ ಎಂದು ಶಾಸಕ ಪ್ರದೀಪ್ ಈಶ್ವರ್ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನು ಹೇಳಿದರು.ಅವರು ನಾಗಾರ್ಜುನ ಕಾಲೇಜಿನಲ್ಲಿ ಬಿಇ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಾರಂಭ -2023 ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಯಾವುದೇ ವಿದ್ಯಾರ್ಥಿಯೇ ಆಗಲಿ ತಾನು ಆವರೇಜ್ ವಿದ್ಯಾರ್ಥಿಗಳೆಂದು ನರ್ವಸ್ ಆಗಬೇಡಿ, 4 ವರ್ಷ ಶ್ರದ್ಧೆಯಿಂದ ಓದಿ ಕ್ಯಾಂಪಾಸ್ ಸೆಲೆಕ್ಷನ್ ಆಗಿ ಒಳ್ಳೆ ಕಂಪನಿಗಳಲ್ಲಿ ಕೆಲಸ ಮಾಡಿ. ಒಂದು ವೇಳೆ ಕ್ಯಾಂಪಾಸ್ ಸೆಲೆಕ್ಷನ್ ನಲ್ಲಿ ಕಂಪನಿಗಳಿಗೆ ಆಯ್ಕೆಯಾಗದಿದ್ದರೆ ನೀವೇ ಒಂದು ಸ್ವಂತ ಕಂಪನಿಯನ್ನು ಓಪನ್ ಮಾಡಿ,ಕಾರ್ಪೋರೇಟ್ ಕಂಪನಿಗಳಲ್ಲಿ ಕೆಲಸದ ಕನಸು ಕಾಣಬೇಡಿ ಬದಲಾಗಿ ನೀವೇ ಕಂಪನಿಯ ಸಿಇಒ ಆಗಿ ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು.ನಿಮ್ಮ ನಾಲ್ಕು ವರ್ಷದ ಓದಿಗಾಗಿ ಅಪ್ಪ ಅಮ್ಮ ಎಷ್ಟು ಖರ್ಚು ಮಾಡುತ್ತಾರೆ ಎಂದು ಯೋಚನೆ ಮಾಡಿ, ನಿಮಗೆಲ್ಲಾ ಬರೀ ವಿದ್ಯೆ ಇದ್ದರೆ ಸಾಕು,ದುಡ್ಡು ಬೇಡ ಎಂದು ಹೇಳುತ್ತಾರೆ,ಕರೆನ್ಸಿಗೆ ಅದರದೆ ಆದಂತಹ ಬೆಲೆ ಇದೆ, ವಿದ್ಯೆಯ ಜೊತೆಗೆ ದುಡ್ಡು ಕೂಡ ಮುಖ್ಯ, ನಮ್ಮಂತಹ ಒಳ್ಳೆಯವರು ಒಳ್ಳೆಯ ರೀತಿಯಲ್ಲಿ ದುಡ್ಡನ್ನು ಮಾಡಿಕೊಂಡು ಜೀವನ ನಡೆಸೋಣ ಎಂದು ಹೇಳಿದರು.ಮುಂದುವರೆದುಪ್ರದೀಪ್ ಈಶ್ವರ್ ನಾನು ಕೂಡ ಆವರೇಜ್ ಸ್ಟೂಡೆಂಟ್ ಅಪ್ಪ ಅಮ್ಮ ಇಲ್ಲದೆ ಬೆಳೆದೆ,ಇದೀಗ ಅದೇ ನನ್ನ ಅಮ್ಮನ ಹೆಸರಲ್ಲಿ ನಾಳೆ ಐದು ವೆಂಟಿಲೆಟೆರ್ ಆಂಬುಲೆನ್ಸ್ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡುತ್ತಿದ್ದೇನೆ, 25 ಅನಾಥ ಮಕ್ಕಳಿಂದ ಈ ಆಂಬುಲೆನ್ಸ್ ಉದ್ಘಾಟನೆಯನ್ನು ಮಾಡಿಸುತ್ತೇನೆ.ನಾಳೆಯಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಕಲರ್ ಡ್ರೆಸ್ ವಿತರಣೆ ಮಾಡುತ್ತಿದ್ದೇನೆ,ಇವತ್ತಿನಿಂದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಷೇತ್ರದ ಜನರಿಗೆ ಪ್ರತ್ಯೇಕ ಕೌಂಟರ್ ಓಪನ್ ಮಾಡಿಸಿದ್ದೇನೆ, ಸರ್ಕಾರಿ ಪ್ರೌಢಶಾಲೆಗಳ ಮಕ್ಕಳು ಔಟ್ ಆಫ್ ಔಟ್ ಬರೋಕೆ ಪ್ರತ್ಯೇಕ ಟುಷನ್ ಮಾಡಿಸುವ ವ್ಯವಸ್ಥೆ ಮಾಡಿದ್ದೇನೆ ಎಂದು ತಿಳಿಸಿದರು.ಮೋಟಿವೇಷನಲ್ ಸ್ಪೀಕರ್ ನಟ ಪ್ರದೀಪ್ ದೊಡ್ಡಯ್ಯ, ಎಲ್ಲರೂ ಕಷ್ಟ ಪಟ್ಟು ಓದಿ, ಒಂದು ಕಂಪನಿಯನ್ನು ಕಟ್ಟಿ ನಡೆಸುವುದು ಅಷ್ಟು ಸುಲಭದ ಮಾತಲ್ಲ. ಸಿಕ್ಕ ಒಳ್ಳೆಯ ಅವಕಾಶವನ್ನು ಬಳಸಿಕೊಂಡು ಚೆನ್ನಾಗಿ ಓದಿ ಒಳ್ಳೆ ಕೆಲಸಕ್ಕೆ ಸೇರಿಕೊಳ್ಳಿ ಎಂದು ಹೇಳಿದರು.ಕಾರ್ಯಕ್ರಮದಲ್ಲಿನಾಗಾರ್ಜುನ ಶಿಕ್ಷಣ ಸಂಸ್ಥೆಯ ಸದಸ್ಯೆ ಶ್ರೀಮತಿ ಭಾನು ಚೈತನ್ಯ ವರ್ಮಾ, ಕಾಲೇಜಿನ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಬಿ.ವಿ. ರವಿಶಂಕರ್, ನಾಗಾರ್ಜುನ ಸಮೂಹ ಸಂಸ್ಥೆಯ ನಿರ್ದೇಶಕರಾದಡಾ.ಎಸ್. ಜಿ .ಗೋಪಾಲಕೃಷ್ಣ ಮತ್ತು ಇತರರು ಉಪಸ್ಥಿತರಿದ್ದರು. ಪ್ರದೀಪ್ ಈಶ್ವರ್ ಫೌಂಡೇಶನ್. ಅಮ್ಮ ಆಂಬುಲೆನ್ಸ್ ಉದ್ಘಾಟನೆಯ ಸಮಾರಂಭ