ಆಸ್ಪತ್ರೆ ಬಡರೋಗಿಗಳ ಹಸಿವು ನೀಗಿಸುತ್ತಿರುವ ಸಂದೀಪ್ ರೆಡ್ಡಿ
ಮಾನಸ ಮೆಡಿಕಲ್ ಟ್ರಸ್ಟ್ ಜತೆ ಕೈಜೋಡಿಸಿದ ಸಮರಾಸ್ ವೆಜ್ ಹೋಟೆಲ್
ಚಿಕ್ಕಬಳ್ಳಾಪುರ: ಶಿಕ್ಷಣದಿಂದ ಮಾತ್ರವೇ ದೇಶ ಕಟ್ಟಲು ಸಾದ್ಯ ಎಂಬುದನ್ನ ಮನಗಂಡ ಉದ್ಯಮಿ ಸಂದೀಪ್ ರೆಡ್ಡಿ ಸರ್ಕಾರಿ ಪ್ರೌಡಶಾಲೆಗಳನ್ನ ದತ್ತು ಪಡೆದು ಶಾಲೆಗಳನ್ನ ಅಭಿವೃದ್ದಿ ಪಡಿಸಿ ಮೌಲ್ಯಯುತ ಶಿಕ್ಷಣ ಕೊಡಿಸಲು ಮುಂದೆ ಬಂದಿರುವ ಸಂದೀಪ್ ರೆಡ್ಡಿ ಈಗ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉಚಿತ ಊಟ ಕೊಡುವ ಮೂಲಕ ಹಸಿವು ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಹುಟ್ಟಿ ಹೆಚ್ಚಿನ ಶಿಕ್ಷಣಕ್ಕಾಗಿಯೋ ಅಥವಾ ಉದ್ಯೋಗವನ್ನರಿಸಿಯೋ ನಗರಗಳಿಗೆ ವಲಸೆ ಹೋಗಿ ನಿರಂತರ ಶ್ರಮವಹಿಸಿದ ಹಣ ಸಂಪಾದನೆ ಮಾಡಿ ಕ್ಷೇತ್ರದತ್ತ ಮುಖ ಮಾಡಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಹಲವು ಸಮಾಜ ಸೇವಕರಲ್ಲಿ ಕೆಲವರು ಮಾತ್ರವೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಅಂತಹ ಕೆಲವೆ ಸಮಾಜ ಸೇವಕರಲ್ಲಿ ಭಗತ್ ಸಿಂಗ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ಚಿಕ್ಕಬಳ್ಳಾಪುರ ವಾಪಸಂದ್ರ ಸರ್ಕಾರಿ ಪ್ರೌಡಶಾಲೆ ಹಾಗು ಪೋಶೆಟ್ಟಹಳ್ಳಿ ಸರ್ಕಾರಿ ಪ್ರೌಡಶಾಲೆಗಳನ್ನ ಅಭಿವೃದ್ದಿ ಪಡಿಸಿ ಅಲ್ಲಿನ ಪಲಿತಾಂಶವನ್ನ ನೂರಕ್ಕೆ ನೂರರಷ್ಟು ತರಿಸುವಂತಹ ಯೋಜನೆಗೆ ರೂಪಿಸಿದ್ದು ಗಮನ ಸೆಳೆದಿದ್ದಾರೆ ಈಗ ಮತ್ತೊಂದು ಮಹತ್ತರ ಕಾರ್ಯಕ್ಕೆ ಕೈ ಹಾಕಿರುವ ಸಂದೀಪ್ ರೆಡ್ಡಿ ಮತ್ತು ಅವರ ಸ್ನೇಹಿತ ಅಮರ್ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಪ್ರತಿದಿನ ಉಚಿತ ಊಟ ನೀಡುವ ಅನ್ನ ದಾಸೋಹ ನೀಡಲು ಮುಂದಾಗಿದ್ದಾರೆ .ಸ್ಥಳೀಯ ಶಾಸಕ ಸುಬ್ಬಾರೆಡ್ಡಿ ಆಶೀರ್ವಾದದಿಂದ ಇಂದು ಉಚಿತ ದಾಸೋಹ ಕಾರ್ಯಕ್ರಮಕ್ಕೆ ಚಿಕ್ಕಬಳ್ಳಾಪುರ ಮಾನಸ ಮೆಡಿಕಲ್ ಟ್ರಸ್ಟ್ ಅಧ್ಯಕ್ಷ ಮದುಕರ್ ಸಮ್ಮುಖದಲ್ಲಿ ಚಾಲನೆ ನೀಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾನಸ ಮೆಡಿಕಲ್ ಟ್ರಸ್ಟ್ ಅಧ್ಯಕ್ಷ ಡಾ.ಮದುಕರ್ ಮಾತನಾಡಿ ಮೂರು ವರ್ಷಗಳಿಂದ ಜಿಲ್ಲಾ ಆಸ್ಪತ್ರೆ ಗೆ ಬರುವ ರೋಗಿಗಳಿಗೆ ಉಚಿತ ಊಟ ನೀಡಿದ ನಮಗೆ ದೇವರು ದಾರಿ ತೋರಿಸಿದೆ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಿಗೂ ಈ ಯೋಜನೆ ವಿಸ್ತರಣೆ ಮಾಡುವ ಆಸೆ ಇತ್ತು ಆಸೆ ಇಂದು ಸಂದೀಪ್ ರೆಡ್ಡಿ ಕೈಜೋಡಿಸುವ ಮೂಲಕ ತೀರಿಸಿದ್ದಾರೆ ಬಾಗೇಪಲ್ಲಿ ಗಡಿ ಭಾಗದ ಆಸ್ಪತ್ರೆಯನ್ನ ಈ ಕಾರ್ಯಕ್ಕೆ ಆಯ್ಕೆ ಮಾಡಿಕೊಂಡಿರುವುದು ಸೂಕ್ತ ಎಂದು ನನಗನಿಸುತ್ತಿದೆ ಎಂದರು.
ಈ ವೇಳೆ ತಾಲ್ಲೂಕು ವೈದ್ಯಾದಿಕಾರಿ ಡಾ.ಸತ್ಯನಾರಾಯಣರೆಡ್ಡಿ,ಸಂದೀಪ್ ರೆಡ್ಡಿ ಪಾರ್ಟನರ್ ಅಮರ್ ಮತ್ತು ಇತರರು ಉಪಸ್ತಿತರಿದ್ದರು.




