ಕಳೆದ ಬಾರಿ ಗಣೇಶ ಪ್ರತಿಷ್ಠಾಪನೆ ಅನುಮತಿ ಕೋರಿ ಮಹಾನಗರ ಪಾಲಿಕೆ ಮಾಡಿದ್ದ ಠರಾವಿಗೆ ತಡೆಯಾಜ್ಞೆ ಕೋರಿ ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಹುಬ್ಬಳ್ಳಿ ಮಹಾನಗರ ಪಾಲಿಕೆ ಜಾಗದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲು ಅನುಮತಿಸಬೇಕೋ, ಬೇಡವೋ ಎಂಬುದನ್ನು ಮಹಾನಗರ ಪಾಲಿಕೆ ನಿರ್ಧರಿಸಬೇಕಿದ್ದು,
ಕಳೆದ ವರ್ಷವೂ ಗಣೇಶ ಪ್ರತಿಷ್ಠಾಪನೆ ವಿಷಯದಲ್ಲಿ ಇದೇ ತೆರ ಗೊಂದಲ ಏರ್ಪಟ್ಟಿದ್ದಾಗ ಈದ್ಗ ಗಣೇಶ ಪ್ರತಿಷ್ಠಾಪನ ಮಂಡಳಿಯು ನ್ಯಾಯಾಲಯದ ಮೊರೆ ಹೋಗಿ ರಾಣಿಚೆನ್ನಮ್ಮ ಮೈದಾನ ಹು-ಧಾ ಮಹಾನಗರ ಪಾಲಿಕೆಯ ಆಸ್ತಿ, ಹೀಗಾಗಿ ಅಲ್ಲಿ ಹಬ್ಬಗಳ ಆಚರಣೆಗೆ ಪರವಾನಗಿ ಕೊಡುವ ವಿವೇಚನೆ ಪಾಲಿಕೆ ಆಯುಕ್ತರಿಗೆ ಬಿಟ್ಟಿದ್ದು ಎಂದು ತೀರ್ಪು ನೀಡಿತ್ತು. ಹೈಕೋರ್ಟ ತೀರ್ಪು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂಕೋರ್ಟ ಮೊರೆಹೋಗಿದ್ದರು, ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೊರ್ಟ ಹೈಕೊರ್ಟ ಪೀಠದ ತೀರ್ಪು ಎತ್ತಿ ಹಿಡಿದಾಗ ಮೂರು ದಿನಗಳ ಕಾಲ ಗಣೇಶ ಪ್ರತಿಷ್ಠಾಪನೆಗೆ ಆಗಿನ ಪಾಲಿಕೆ ಆಯುಕ್ತರು ಅನುಮತಿ ನೀಡಿದ್ದರು.
ಆದರೆ ಈ ಬಾರಿ ಕೆಲ ಸಂಘಟನೆಗಳು ಗಣೇಶ ಪ್ರತಿಷ್ಠಾಪನೆಗೆ ವಿರೋಧಿಸಿ ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದ್ದಲ್ಲದೇ ಅಂಜುಮನ್ ಸಂಸ್ಥೆಯು ಮತ್ತೆ ಆಕ್ಷೇಪ ವ್ಯಕ್ತಪಡಿಸಿ ಹೈಕೋರ್ಟ ಮೊರೆ ಹೋಗಿತ್ತು.
ಪಾಲಿಕೆ ಠರಾವಿಗೆ ತಡೆಯಾಜ್ಞೆ ಕೋರಿ ಅಂಜುಮನ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಹೈಕೋರ್ಟ ಸೆ.15 ಶುಕ್ರವಾರ ಮಧ್ಯಾಹ್ನ ವಜಾಗೊಳಿಸಿತು.
ಸದ್ಯ ಪ್ರತಿಷ್ಠಾಪನೆ ಕುರಿತಾದ ನಿರ್ಧಾರ ಪಾಲಿಕೆ ಕಡೆಗಿದ್ದು ಕಾಯ್ದು ನೋಡಬೇಕಿದೆ. ಅಲ್ಲದೆ ಗಣೇಶ್ ಮೂರ್ತಿ ಪ್ರತಿಷ್ಠಾಪನ ಮಂಡಳಿ ಹಾಗೂ ಕೆಲವು ಹಿಂದೂ ಸಂಘಟನೆಗಳು ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವುದಾಗಿ ಹಠತೊಟ್ಟು ಪಾಲಿಕೆ ಮುಂಭಾಗದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದವು, ನ್ಯಾಯಾಲಯದ ತೀರ್ಪಿಗಾಗಿ ಕಾಯ್ದಿರಿಸಿದ್ದು ತೀರ್ಪು ಬಂದ ನಂತರ ಈಗ ಸರ್ಕಾರ ಮತ್ತು ಪಾಲಿಕೆಯು ತೀರ್ಪಿನ ಮೇಲೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಕಾದು ನೋಡುವಂತಾಗಿದೆ.
-:ಬಾಕ್ಸ್:-
ಈದ್ಗಾ ಮೈದಾನದ ಗಣೇಶ ಧಾರವಾಡದಲ್ಲಿ ಅಂತಿಮ ಸ್ಪರ್ಶ
ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆಯಾಗಲಿರುವ ಗಣಪತಿಗೆ ಧಾರವಾಡದಲ್ಲಿ ಅಂತಿಮ ಸ್ಪರ್ಶ ನೀಡಲಾಗುತ್ತಿದೆ.ಚರಂತಿಮಠ ಗಾರ್ಡನ್ ಹತ್ತಿರ ಸಂಜೀವಪಾಲ ಕಲಾವಿದರು ಈದ್ಗಾ ಮೈದಾನದಲ್ಲಿ ಆಕರ್ಷಣೆಗೊಳ್ಳಲಿರುವ ಗಣೇಶನನ್ನು ಸಿದ್ಧಪಡಿಸಿದ್ದಾರೆ.
ಪದ್ಮಾಸನಾರೂಢ ಭಂಗಿಯ 6 ಅಡಿ ಎತ್ತರದ ಮೂರ್ತಿ ಗಣೇಶ ಮೂರ್ತಿ ಇದಾಗಿದ್ದೆ, ಸೆ.19 ರಂದು ಈದ್ಗಾ ಮೈದಾನದಲ್ಲಿ ಪ್ರತಿಷ್ಟಾಪನೆಗೊಳ್ಳಲ್ಲು ಸಜ್ಜಾಗದೆ.

