ಬಳ್ಳಾರಿ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿಗಳ ಅವರ ಮನೆಗೆ ರಾತ್ರಿ ಹೋಗಿ ಸಮಸ್ಯೆಗಳ ಬಗ್ಗೆ ಹಾಸ್ಟ ಲ್ ನ ವಿದ್ಯಾರ್ಥಿಗಳು ಅಳಿಲನ್ನು ಹೇಳುತ್ತಿದ್ದಾಗಲೇ ಬೈದು ಕಳಿಸಿದ್ದಲ್ಲದೆ ವಿದ್ಯಾರ್ಥಿಗಳನ್ನು ಹಾಸ್ಟೆಲಿನಿಂದ ಹೊರಗೆ ಹಾಕಿಸಿದಂತ ಹಿಂದಿನ ಜಿಲ್ಲಾಧಿಕಾರಿಗಳ ಮೇಲೆ ಕ್ರಮ ಜರುಗಿಸಲಾರದೆ ಇಲ್ಲದ್ದರಿಂದ ಮತ್ತೆ ಹಾಸ್ಟೆಲಿನ ವಾರ್ಡನ್ ದಲಿತ ವಿದ್ಯಾರ್ಥಿಯ ಮೇಲೆ ಮರಣಾಂತಿಕವಾಗಿ ಹಲ್ಲೆ ಮಾಡಿದ್ದರಿಂದ ಕೂಡಲೇ ಜಿಲ್ಲಾ ಸಮಾಜ ಕಲ್ಯಾಣ ಸಮಾಜ ಅಧಿಕಾರಿಗಳನ್ನು ಅಮಾನತ್ ಗೊಳಿಸಿ ಹಾಗೂ ವಾರ್ಡನ್ ಖಾಯಂ ಸಸ್ಪೆಂಡ್ ಮಾಡಿಸಿ ಪ್ರಕರಣ ದಾಖಲಾದರು ಬಂಧಿಸಲಾರದೆ ಇದರಿಂದ ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸುವ ಕುರಿತು ಸಂಬಂಧಿಸಿದಂತೆ ಕರ್ನಾಟಕ ದಲಿತ ರಕ್ಷಣಾ ವೇದಿಕೆ (ರಿ) ಜಿಲ್ಲಾ ಸಮಿತಿ ಬಳ್ಳಾರಿ ಈಗ ತಮ್ಮ ಗಮನಕ್ಕೆ ತಂದು ಮನವಿ ಮಾಡಿಕೊಳ್ಳುವುದೇನೆಂದರೆ ಬಳ್ಳಾರಿ ನಗರದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಸ್ಟಲಿನ ದಲಿತ ವಿದ್ಯಾರ್ಥಿಗಳು ಓದುತ್ತಿದ್ದಾಗ ಈ ಹಿಂದೆ ಹಾಸ್ಟೆಲ್ ನ ಸಮಸ್ಯೆಗಳ ಬಗ್ಗೆ ಹಿಂದಿನ ಜಿಲ್ಲಾಧಿಕಾರಿಗಳ ಅವರ ಮನೆಗೆ ರಾತ್ರಿಯ ವೇಳೆ ಹೋಗಿ ಸಮಸ್ಯೆಗಳನ್ನು ಹೇಳುತ್ತಿದ್ದಾಗಲೇ ವಿದ್ಯಾರ್ಥಿಗಳಿಗೆ ದೌರ್ಜನ್ಯದಿಂದ ಗದರಿಸಿ ಬೈದಿದ್ದಲ್ಲದೆ ಸುಮಾರು ವಿದ್ಯಾರ್ಥಿ ಹಾಸ್ಟೆಲಿನಿಂದ ಕೂಡಲೇ ಹೊರಗೆ ಹಾಕಬೇಕೆಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಮೌಖಿಕವಾಗಿ ಆದೇಶ ಮಾಡಿ ಹೊರ ಹಾಕಿದ್ದರಿಂದ ಹಿಂದಿನ ಜಿಲ್ಲಾಧಿಕಾರಿಗಳು ಅಧಿಕಾರ ದರ್ಪ ದಿಂದ ವರ್ತನೆ ಮಾಡಿದ್ದಂತ ಹಿಂದಿನ ಜಿಲ್ಲಾಧಿಕಾರಿಗಳ ಮೇಲೆ ಕೂಡಲೆ ಕ್ರಮ ಜರಿಸ ಜರುಗಿಸಬೇಕೆಂದು ದಲಿತ ಪರ ಸಂಘಟನೆಗಳು ಹಿಂದಿನ ಮುಖ್ಯಮಂತ್ರಿಗಳಿಗೆ ಹಾಗೂ ಸಚಿವರುಗಳಿಗೆ ದೂರು ನೀಡಿದರು ಸಹ ಕ್ರಮ ಜರಗಿಸಲಾರದೆ ಇದ್ದರಿಂದ ಅಂದಿನಿಂದ ಸಮಾಜ ಕಲ್ಯಾಣ ಅಧಿಕಾರಿಗಳು ಹಾಗೂ ವಾರ್ಡನ್ ಗಳಿಗೆ ಗರ್ವ ಮತ್ತು ದರ್ಪ ಮಿತಿಮೀರಿ ಹೋಗಿದ್ದರಿಂದ ವಿದ್ಯಾರ್ಥಿಗಳಿಗೆ ಏನು ಮಾಡಿದರು ನಡೆದುಕೊಂಡು ಹೋಗುತ್ತದೆ ಮನಬಂದಂತೆ ಬೇಯುವುದು ಒಡೆಯುವುದು ನಿರಂತರವಾಗಿ ಹಾಸ್ಟೆಲ್ ನ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಮಾಡಿ ಹಲ್ಲೆಗಳು ನಡೆಸುತ್ತಿದ್ದು ಸರ್ವಸಾಮಾನ್ಯವಾಗಿ ಬಿಟ್ಟಿದೆ ಎಂದು ಸುಮಾರು ಹಾಸ್ಟೆಲಿನ ವಿದ್ಯಾರ್ಥಿಗಳ ನೊಂದ ಮಾತುಗಳಾಗಿದ್ದವು ಮೊನ್ನೆ ವಾರ್ಡನ್ ಮನೋಹರ್ ಪಾಟೀಲ್ ಇವರ ಹತ್ತಿರ ಗಣಪತಿ ಹಬ್ಬಕ್ಕೆ ಹೋಗಿ ಬರುತ್ತೇನೆ ಎರಡು ದಿನ ರಜೆ ಕೇಳಿದ್ದಕ್ಕಾಗಿ ದಲಿತ ವಿದ್ಯಾರ್ಥಿ ದಿವಾಕರ್ ಮೇಲೆ ದನಕ್ಕೆ ಹೊಡೆದಂಗೆ ಒಡೆಯುತ್ತಿದ್ದಾಗ ಹೊಡೆತಕ್ಕೆ ತಾಳಲಾರದೆ ಓಡಿ ಹೋದರು ಸಹ ಬಿಡಲಾರದೆ ಬೆನ್ನತ್ತಿ ಹಾಸ್ಟೆಲ್ ತುಂಬೆಲ್ಲ ಓಡಾಡಿಸಿ ತನ್ನ ಮನಬಂದಂತೆ ಹೊಡೆದು ಮರಣಾಂತಿಕವಾಗಿ ದೌರ್ಜನ್ಯದಿಂದ ಹಲ್ಲೆ ಮಾಡಿದಂತ ವಾರ್ಡನನ್ನ ಮೇಲೆ ಎಸ್ಸಿ ಎಸ್ಟಿ ಕಾಯ್ದೆ ಪ್ರಕರಣ ದಾಖಲಾದರೂ ಸಹ ಬಂದಿಸಲಾರದೆ ಇದ್ದು ಇದಕ್ಕೆಲ್ಲ ಸಮಾಜ ಕಲ್ಯಾಣ ಜಿಲ್ಲಾಧಿಕಾರಿಗಳು ಪೊಲೀಸ್ ಇಲಾಖೆ ಕುಮ್ಮಕ್ಕು ಇದರಿಂದ ಸಮಾಜ ಕಲ್ಯಾಣ ಅಧಿಕಾರಿಗಳನ್ನು ಅಮಾನತ್ ಗೊಳಿಸಿ ಹಾಗೂ ಹಾಸ್ಟಲಿ ನ ವಾರ್ಡನನ್ನು ಖಾಯಂವಾಗಿ ಸಸ್ಪೆಂಡ್ ಗೊಳಿಸಿ ಕೂಡಲೇ ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ಈ ಮೂಲಕ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಪತ್ರವನ್ನು ಸಲ್ಲಿಸಲಾಗುತ್ತದೆ
ಒಂದು ವೇಳೆ ಇದರ ಬಗ್ಗೆ ಕ್ರಮ ಜರಗಿಸುವಲ್ಲಿ ನಿರ್ಲಕ್ಷ ವಹಿಸಿದ ಪಕ್ಷದಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿ ವತಿಯಿಂದ ಮುಂದೆ ಉಗ್ರ ಸ್ವರೂಪದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿ ಮತ್ತೊಮ್ಮೆ ತಮ್ಮಲ್ಲಿ ಮನವಿ ನೀಡಿದರು,
ಈ ವೇಳೆ
ಕೆ ಶಂಕರ್ ನಂದಿಹಾಳ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಸಿ ಹನುಮೇಶ ಕಟ್ಟಿಮನಿ ಜಿಲ್ಲಾ ಕಾರ್ಯಧ್ಯಕ್ಷರು
ಧರ್ಮಣ್ಣ ಜಿಲ್ಲಾಧ್ಯಕ್ಷರು
ಲಕ್ಷ್ಮಿಕಾಂತ್ ಸುಗ್ಗೇನಹಳ್ಳಿ ದಲಿತ ಮುಖಂಡರು
ಅಂಜಿನಿ ವಡ್ದು ತಾಲೂಕ ಅಧ್ಯಕ್ಷರು ಸಂಡೂರ್ ಕದರವೇ
ಜಯಣ್ಣ ಚರ ಕುಂಟೆ ಯುವ ಮುಖಂಡರು
ಪಿ ಸಣ್ಣ ವಲಿ ಚರಕುಂಟೆ ಅಲ್ಪಸಂಖ್ಯಾತರ ಮುಖಂಡರು ಉಮೇಶ ಮೇಸ್ತ್ರಿ ಛಲವಾದಿ ಕಾಲೋನಿ ಪ್ರೇಮ್ ಚಲವಾದಿ ಕಾಲೋನಿ ಮೊದಲಾದವರು ಇದ್ದರು,

Sep 20, 2023

Leave a Reply

Your email address will not be published. Required fields are marked *