ಕೊರಟಗೆರೆ ಬ್ರೇಕಿಂಗ್…,
ಪಾರಿವಾಳಕ್ಕಾಗಿ ಲಾಂಗ್ ಹಿಡಿದ ಯುವಕರ ಗ್ಯಾಂಗ್..
ಪಾರಿವಾಳ ವಿಚಾರವಾಗಿ ಎರಡು ಗುಂಪಿನ ಯುವಕರ ನಡುವೆ ಗಲಾಟೆ..
ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ ಕಾಳಿದಾಸ ಬಡಾವಣೆಯಲ್ಲಿ ಘಟನೆ..
ಸಂಜು ಎಂಬುವನು 2 ಸಾವಿರಕ್ಕೆ ಅಜಯ್ ಎಂಬುವನಿಂದ ಪಾರಿವಾಳ ಖರಿದಿಸಿದ್ದ..
ಪಾರಿವಾಳ ಪಡೆಯುವ ವೇಳೆ ಮುಂಗಡ 800 ರೂ ನೀಡಿದ್ದ ಸಂಜು..
ಉಳಿದ ಹಣ 1200 ರೂ ಅಜಯ್ ಗೆ ನೀಡಬೇಕಿದ್ದ ಸಂಜು..
ಉಳಿದ ಹಣ ಕೇಳಿದ್ದಕ್ಕೆ ಸಂಜು ಆಕ್ರೋಶ..
ಲಾಂಗ್ ಸಹಿತ ಅಜಯ್ ಬಳಿ ಹೋಗಿ ಹಲ್ಲೆಗೆ ಮುಂದಾದ ಸಂಜು ಅಂಡ್ ಗ್ಯಾಂಗ್..
ಸಂಜು ಸೇರಿ ಆರು ಮಂದಿ ಯುವಕರು ಅಜಯ್ ಮೇಲೆ ಹಲ್ಲೆಗೆ ಯತ್ನ..
ಈ ವೇಳೆ ಅಡ್ಡಬಂದ ಅಜಯ್ ಭಾವ ಸಂಪತ್ ಕೈಗೆ ಗಂಭೀರ ಗಾಯ..
ಕೊರಟಗೆರೆ ಆಸ್ಪತ್ರೆ ದಾಖಲಿಸಿ ಸಂಪತ್ ಗೆ ಚಿಕಿತ್ಸೆ..
ಸ್ಥಳಕ್ಕೆ ಕೊರಟಗೆರೆ ಪೊಲೀಸರು ಭೇಟಿ..
ಪುಂಡಾಟ ಮೆರೆದಿದ್ದ ಗ್ಯಾಂಗ್ ಬಂಧಿಸಿದ ಕೊರಟಗೆರೆ ಪೊಲೀಸರು..
ಕೊರಟಗೆರೆ ಪಿಎಸ್ ಐ ಚೇತನ್ ನೇತೃತ್ವದಲ್ಲಿ ಬಂಧನ..
ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..