ಹುಬ್ಬಳ್ಳಿ :- 2024 ರಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ. ಆಗ ಪಾಕಿಸ್ತಾನದ ಲಾಹೋರದಲ್ಲೂ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತೇವೆ. ಯಾರಾದರೂ ತಾಕತ್ತಿದ್ದರೆ ತಡೆಯಿರಿ ಎಂದು ಬಿಜೆಪಿ ಶಾಸಕ ಬಸವಗೌಡ ಪಾಟೀಲ ಯತ್ನಾಳ ಗುಡುಗಿದರು.

ಹುಬ್ಬಳ್ಳಿ ಈದ್ಗಾ ಮೈದಾನ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಯ ವಿಸರ್ಜನೆ ಮೆರವಣಿಗೆ ವೇಳೆ ಮಾತನಾಡಿದ ಅವರು ಸನಾತನ ಧರ್ಮದ ವಿರುದ್ಧ ಮಾತನಾಡುವವರಿಗೆ ಏಡ್ಸ್ ಬರುತ್ತೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಬಸವಗೌಡ ಪಾಟೀಲ ಯತ್ನಾಳ ಹಾಗೂ ಶಾಸಕ ಅರವಿಂದ ಬೆಲ್ಲದ ಗಣೇಶ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ವಿಸರ್ಜನೆ ಮೆರವಣಿಗೆಗೆ ಚಾಲನೆ ನೀಡಿದರು. ಭಾರತಾಂಬೆ ಭಾವಚಿತ್ರ ನೋಡುಗರ ಗಮನ ಸೆಳೆಯಿತು.
ಸಹಸ್ರಾರು ಭಕ್ತಸ್ತೋಮದಲ್ಲಿ ಗಜಾನನ ಮಹರಾಜ, ಜೈ ಶ್ರೀರಾಮ, ಭಾರತ ಮಾತಾ ಕೀ ಝಂಕಾರ ಘೋಷಣೆಗಳು ಮೊಳಗಿದವು.

ಬಿಜೆಪಿ ಸಂಘ ಪರಿವಾರ, ವಿಎಚ್ ಪಿ, ಅಲ್ಲದೇ ಹಿಂದೂ ಪರ ವಿವಿಧ ಸಂಘಟನೆಗಳು 6 ಸಾವಿಕ್ಕು ಹೆಚ್ಚು ಕಾರ್ಯಕರ್ತರು ಪಾಲ್ಗೊಂಡಿದ್ದರು.ಎಲ್ಲೆಲ್ಲೂ ಕೇಸರಿ ಧ್ಜಜಗಳು ಮೆರವಣಿಗೆಯಲ್ಲಿ ರಾರಾಜಿಸಿದವು. ಕಿತ್ತೂರ ರಾಣಿ ಚೆನ್ನಮ್ಮ ವೃತ್ತ ಅಕ್ಷರಶಃ ಭಗವಾ ಧ್ವಜ, ಕೇಸರಿ ಧ್ವಜಗಳಿಂದ ಸಂಪೂರ್ಣ ಕೇಸರಿ ಬಣ್ಣಕ್ಕೆ ತಿರುಗಿತ್ತು. ಪಂಚವಾದ್ಯ, ಡೋಲು, ಜಾಂಝ್, ಡಿಜೆ ಮೇಳಗಳು ಮೆರವಣಿಗೆಗೆಯ ಸೊಬಗು ಕಂಡುಬಂದಿತು.

ಮಧ್ಯಾಹ್ನ 11:30ರ ಸುಮಾರಿಗೆ ಈದ್ಗಾ ಮೈದಾನದಿಂದ ಹೊರಟ ಗಣಜಮುಖನ ಮೂರ್ತಿಯ ಮೆರವಣಿಗೆ ಸಂಜೆ 5 ಗಂಟೆಯ ಸುಮಾರಿಗೆ ಮುಕ್ತಾಯಗೊಳ್ಳುವುದರೊಂದಿಗೆ ಸಂಪನ್ನಗೊಂಡಿತು. ಈದ್ಗಾ ಮೈದಾನದಿಂದ ಇಂದಿರಾ ಗಾಜಿನ ಮನೆಯ ಆವರಣದ ಬಾವಿಯಲ್ಲಿ ವಿಸರ್ಜಿಸುವ ಮೂಲಕ ನಿರ್ವಿಘ್ನವಾಗಿ ಕೊನೆಗೊಂಡಿತು.

ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ರಾಣಿ ಚನ್ನಮ್ಮ ಮೈದಾನ ಗಜಾನನೋತ್ಸವ ಮಹಾಮಂಡಳಿ ಅಧ್ಯಕ್ಷ ಸಂಜಯ ಬಡಸ್ಕರ ಪದಾಧಿಕಾರಿಗಳಾದ ಸುಭಾಸಸಿಂಗ ಜಮಾದಾರ,ಜಯತೀರ್ಥ ಕಟ್ಟಿ,ಸಂತೋಷ ಚವ್ಹಾಣ,ಮಹೇಂದ್ರ ಕೌತಾಳ, ರಮೇಶ ಕದಂ, ವಿಜಯ ಕ್ಷೀರಸಾಗರ, ರಘು ಯಲ್ಲಕ್ಕನವರ ಸಹಿತ ಪ್ರಮುಖರು ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರು. ಕುಂದಗೋಳ ಶಾಸಕ ಎಂ.ಆರ್.ಪಾಟೀಲ, ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಸಂತೋಷ ವೆರ್ಣೆಕರ, ಪ್ರಶಾಂತ ಜಾಧವ, ಶಿವು ಮೆಣಸಿನಕಾಯಿ,  ಬೀರಪ್ಪ ಖಂಡೇಕರ  ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿದ್ದರು.

-: ಬಾಕ್ಸ್ :-


ಖಾಕಿ ಸರ್ಪಗಾವಲು: ವಿಸರ್ಜನೆ ಹಿನ್ನೆಲೆಯಲ್ಲಿ ಪೊಲೀಸ್ ಕಮೀಷ್ನರೇಟ್ ವತಿಯಿಂದ ವ್ಯಾಪಕ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತಲ್ಲದೇ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನೂ ನಿಯೋಜಿಸಲಾಗಿತ್ತು. ಸುಮಾರು 6 ಗಂಟೆಗಳ ಕಾಲ ಹುಬ್ಬಳ್ಳಿಯ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಅವರು ಕೈಗೊಂಡ ಬಂದೋಬಸ್ತ ಕ್ರಮ ಎಲ್ಲರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

-: ಬಾಕ್ಸ್ :-


ಪ್ರಮೋದ ಮುತಾಲಿಕ ವಿವಾದಿತ ಹೇಳಿಕೆ : ವಿಸರ್ಜನಾ ಮೆರವಣಿಗೆಗೂ ಮುನ್ನ ಮಾತನಾಡಿದ ಶ್ರೀರಾಮ ಸೇನೆಯ ಪ್ರಮೋದ ಮುತಾಲಿಕ ಗಣೇಶೋತ್ಸವ ಆಚರಣೆಗೆ ಅಡ್ಡಿ ಮಾಡಿದರೆ ಮಸೀದಿಗಳಲ್ಲೂ ಗಣಪತಿ ಪ್ರತಿಷ್ಠಾಪಿಸುವುದಾಗಿ ಹೇಳಿಕೆ ನೀಡಿದ್ದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಪ್ರಚೋದನಕಾರಿ ಹೇಳಿಕೆ ನೀಡಿದ್ದು ಅವರ ಮೇಲೆ ಮಹಾನಗರಪಾಲಿಕೆ ಹುಬ್ಬಳ್ಳಿ ಉಪನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Leave a Reply

Your email address will not be published. Required fields are marked *