ವಸೂಲಾತಿಯಲ್ಲಿ ಅವಿಭಜಿತ ಜಿಲ್ಲೆಗೆ ಮೊದಲ ಸ್ಥಾನದೊಂದಿಗೆ 11 ಲಕ್ಷ ನಿವ್ವಳ ಲಾಭ

ಕೋಲಾರ: ತಾಲ್ಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ 2022-23 ನೆ ಸಾಲಿನಲ್ಲಿ 11 ಲಕ್ಷಗಳ ನಿವ್ವಳ ಲಾಭವನ್ನು ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಬೊಮ್ಮಸಂದ್ರ ಎಚ್ ಕೃಷ್ಣೇಗೌಡ ತಿಳಿಸಿದರು.

ನಗರದ ಟಿ ಚನ್ನಯ್ಯ ರಂಗಮಂದಿರದಲ್ಲಿ ಗುರುವಾರ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಯ ಪಿಎಲ್ಡಿ ಬ್ಯಾಂಕ್‌ನ 2022-23 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರಸಕ್ತ ವರ್ಷದಲ್ಲಿ ಬ್ಯಾಂಕಿನ ಒಟ್ಟು ನಿಧಿಗಳು 51.11 ಲಕ್ಷದಷ್ಟು ಇದ್ದು ಸುಮಾರು 3.41 ಕೋಟಿಯಷ್ಟು ವಿವಿಧ ಯೋಜನೆಗಳಲ್ಲಿ ರೈತರಿಗೆ ಸಾಲ ನೀಡಲಾಗಿದೆ ಹಿಂದಿನ ಅಧ್ಯಕ್ಷ ವಿಟ್ಟಪನಹಳ್ಳಿ ವೆಂಕಟೇಶ್ ಅವರ ಕಾಳಜಿಯಿಂದ 2023 ರ ಮಾರ್ಚ್ ಅಂತ್ಯಕ್ಕೆ ವಸೂಲಾತಿಯಲ್ಲಿ 74.61% ಗಳಿಸಿದ್ದು ಕೋಲಾರ ಚಿಕ್ಕಬಳ್ಳಾಪುರ ಎರಡು ಜಿಲ್ಲೆಗೆ ಪ್ರಥಮ ಸ್ಥಾನವನ್ನು ಬ್ಯಾಂಕ್ ಪಡೆದಿದೆ ಎಂದು ತಿಳಿಸಿದರು.

ಕೋಲಾರ ಜಿಲ್ಲೆಯ ರೈತರ ಏಳಿಗೆಗಾಗಿ 1935 ರಲ್ಲಿ ಪ್ರಾರಂಭವಾದ ಈ ಬ್ಯಾಂಕ್ ಎಲ್ಲರ ಅವಧಿಯಲ್ಲಿನ
ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ನಿರ್ದೇಶಕರ ಸಹಕಾರದಿಂದ ರೈತಸ್ನೇಹಿಯಾಗಿ ಈ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ ಸಾಲ ಸೌಲಭ್ಯ ಪಡೆದ ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ಬ್ಯಾಂಕ್‌ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ವಿಟ್ಟಪನಹಳ್ಳಿ ವೆಂಕಟೇಶ್ ಮಾತನಾಡಿ ಸುಮಾರು 88 ವರ್ಷಗಳ ಹಿಂದೆ ಪ್ರಾರಂಭವಾದ ಈ ಬ್ಯಾಂಕ್ ರೈತರಿಗೆ ಸಹಕಾರದ ತತ್ವದಡಿ ಅತ್ಯುತ್ತಮ ಸೇವೆ ನೀಡುತ್ತಿದೆ ಸಾಲ ಸೌಲಭ್ಯ ಪಡೆದವರು ಪ್ರಾಮಾಣಿಕವಾಗಿ ಮರುಪಾವತಿ ಮಾಡಿ, ಬ್ಯಾಂಕ್ ಮತ್ತಷ್ಟು ಹೆಚ್ಚಿನ ಸೇವೆ ಮಾಡುವಲ್ಲಿ ಸಹಕರಿಸಬೇಕಿದೆ ಎಂದರು.

ಈ ಸಂದರ್ಭದಲ್ಲಿ ಕಸ್ಕಾರ್ಡ್ ಬ್ಯಾಂಕ್ ರಾಜ್ಯ ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ ರೈತರು ಕೊಟ್ಟು ಜಮೀನುಗಳನ್ನು ರಾಜ್ಯ ಬ್ಯಾಂಕ್ ಗಳಲ್ಲಿ ಅಡಮಾನವಿಟ್ಟರೇ 90% ಸಾಲ ಕೊಡುವುದು ಬಿಟ್ಟರೆ ಬೇರೆ ಯಾವುದೇ ಸೌಲಭ್ಯಗಳನ್ನು ಬ್ಯಾಂಕ್ ಗೆ ನೀಡುವುದಿಲ್ಲ ರೈತರ ಅಭಿವೃದ್ಧಿಗಾಗಿ ಸರಕಾರ 9% ರೈತರು 3% ಬಡ್ಡಿ ಬರಿಸಬೇಕು ರೈತರಿಗೆ ಲೋನ್ ಕೊಡುವ ಉದ್ದೇಶ ಸರಿಯಾದ ರೀತಿಯಲ್ಲಿ ಸದುಪಯೋಗವಾಗಬೇಕು ಇವತ್ತಿನ ಸಭೆಯಲ್ಲಿ ಬರುವ ಸಲಹೆ ಸೂಚನೆಗಳನ್ನು ಪಡೆದು ಬ್ಯಾಂಕ್ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.

ಈ ಸಂದರ್ಭದಲ್ಲಿ ರಾಜ್ಯ ಬೀಜ ನಿಗಮದ ನಿರ್ದೇಶಕ ವಡಗೂರು ಡಿ.ಎಲ್ ನಾಗರಾಜ್ ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡದೇ ಬ್ಯಾಂಕ್ ಉಳಿಸಿಕೊಳ್ಳಬೇಕು ಜೊತೆಗೆ ಬ್ಯಾಂಕ್ ಹಳೆ ಕಟ್ಟಡದಿಂದ ಕೂಡಿದ್ದು ಪಕ್ಷಾತೀತವಾಗಿ ಜನಪ್ರತಿನಿಧಿಗಳ ಸಹಕಾರಿ ಕೋರಿ ಅವರ ಅನುದಾನವನ್ನು ಬಳಸಿಕೊಂಡು ಸುಂದರ ಕಟ್ಟಡ ನಿರ್ಮಾಣ ಮಾಡಿಕೊಳ್ಳಬೇಕು ಇದಕ್ಕೆ ಸರ್ವ ಸದಸ್ಯರು ಬೆಂಬಲಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಷೇರುದಾರರು ಮಾತನಾಡಿ ಸಭೆಯ ಅಹ್ವಾನ ಪತ್ರಿಕೆ ಏಳು ದಿನ ಮುಂಚಿತವಾಗಿ ತಲುಪಲಿಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದರು ಮುಂದಿನ ವರ್ಷ ಪೋನ್ ಮೂಲಕ ಮೆಸೇಜ್ ಜೊತೆಗೆ ಪೋಸ್ಟ್ ಮೂಲಕವೂ ಕಳಸಬೇಕು ಸಾಲ ಪಾವತಿ ಮಾಡಿದ ಕೂಡಲೇ ರೈತರಿಗೆ ದಾಖಲೆಗಳನ್ನು ಕೊಡಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ವಸೂಲಾತಿಯಲ್ಲಿ ಮೊದಲ ಸ್ಥಾನ ಗಳಿಸಿದ ಬ್ಯಾಂಕ್ ಸಿಬ್ಬಂದಿಯನ್ನು ನಿರ್ದೇಶಕರು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬ್ಯಾಂಕ್ ಉಪಾಧ್ಯಕ್ಷ ಕೆ.ಎಂ ಗೋವಿಂದಪ್ಪ, ನಿರ್ದೇಶಕರಾದ ಶಶಿಧರ್, ಶಿವಕುಮಾರ್, ಬೈರೇಗೌಡ, ಕೆ.ಸಿ ಮಂಜುನಾಥ್, ಎಂ ಮಂಜುನಾಥ್, ಜಿ.ಅಮರೇಶ್, ರಾಧಾಕೃಷ್ಣ, ಗಂಗಪ್ಪ, ಶೋಭಾ, ಸುನಂದಮ್ಮ, ವ್ಯವಸ್ಥಾಪಕ ಶ್ರೀನಿವಾಸ್, ಲೆಕ್ಕಾಧಿಕಾರಿ, ಶೋಭಾರಾಣಿ, ಸಿಬ್ಬಂದಿ ಶ್ಯಾಮಲಾ, ಶೇಖರ್ ಸೇರಿದಂತೆ ಷೇರುದಾರರು ಭಾಗವಹಿಸಿದ್ದರು

Leave a Reply

Your email address will not be published. Required fields are marked *