ಗುಡಿಬಂಡೆ: ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎನ್.ಸುಬ್ಬಾರೆಡ್ಡಿ ರವರು ಇಂದು ಉದ್ಘಾಟಿಸಿ ತುದರು.
ಇದೇ ಸಂದರ್ಭದಲ್ಲಿ ಸಂಘದ 2022-23 ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಮಹಾಸಭೆ ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ಮಾತನಾಡಿದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ನೋತನ ಕಟ್ಟಡದ ಬಗ್ಗೆ ಸಂತಸ ವ್ಯಕ್ತಪಡಿಸಿ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಿದ ಎಲ್ಲ ಹಾಲು ಉತ್ಪಾದಕರಿಗೆ ಶ್ಲಾಘಿಸಿದರು.ಸಂಘದಲ್ಲಿ ಉಳಿಯುವ ಹಣ ಸದುಪಯೋಗ ಮಾಡಿಕೊಂಡರೆ ಸಂಘದ ಅಭಿವೃದ್ಧಿಗೆ ಸಂಘ ಬೆಳೆಯಲು ಸಹಕಾರಿಯಾಗುತ್ತದೆ ಎಂದು ನನ್ನ ಭಾವನೆ ಎಂದ ಅವರು ಹೈನುಗಾರಿಕೆ ಬಾಗೇಪಲ್ಲಿ ಗುಡಿಬಂಡೆ ತಾಲ್ಲೂಕಿಗೆ ತುಂಬಾನೆ ಸಹಕಾರಿಯಾಗಿದೆ ಇದರಿಂದ ಬಹಳಷ್ಟು ಜನ ತಮ್ಮ ಜೀವನ ಕಟ್ಟಿಕೊಂಡಿದ್ದಾರೆ ಹೈನುಗಾರಿಕೆ ಇಲ್ಲ ಅಂದಿದ್ದರೆ ಈ ಭಾಗದ ಬಹುತೇಕರು ಬೇರೆ ಬೇರೆ ಕಡೆ ಕೆಲಸಕ್ಕೆ ಹೋಗಬೇಕಾಗುತ್ತಿತ್ತು ಇನ್ನು ಹಾಲು ಉತ್ಪಾದಕರು ಗುಣಮಟ್ಟದ ಹಾಲು ನೀಡಬೇಕು ಎಂದರು.
ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಹಾಲು ಒಕ್ಕೂಟ ಆದರಲ್ಲಿ ಈ ಭಾಗಕ್ಕೆ ಬಹಳಷ್ಟು ಸಹಕಾರಿಯಾಗಲಿದೆ ಇದರಿಂದ ಹಾಲು ಉತ್ಪಾದನೆ ಹೆಚ್ಚಿಸಲು ಹಾಗೂ ಯಾರಿಗೆ ಏನೆ ಸಮಸ್ಯೆ ಇದ್ದಲ್ಲಿ ನಿಭಾಯಿಸುವುದಕ್ಕೆ ಅನುಕೂಲ ವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಸೋಮೇನಹಳ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹಾಗೂ ಕೋಚಿಮುಲ್ ನಿರ್ದೇಶಕರಾದ
ಆದಿನಾರಾಯಣರೆಡ್ಡಿ ಆಡಳಿತ ಮಂಡಳಿಯಲ್ಲಿ ಚರ್ಚೆ ನಂತರ ಕಟ್ಟಡ ನಿರ್ಮಾಣವಾಗಿ ಇಂದು ಉದ್ಘಾಟನೆ ಯಾಗಿದೆ ಸಂಘದ ನೋತನ ಕಟ್ಟಡದ ನಿರ್ಮಾಣಕ್ಕೆ ಹಾಲು ಉತ್ಪಾದಕರ ಸಹಕಾರ ಬಹಳಷ್ಟು ಇದೆ ಎಂದ ಅವರು ಗುಡಿಬಂಡೆ ತಾಲ್ಲೂಕಿನಲ್ಲಿ ಹೆಚ್ಚಿಗೆ ಹಾಲು ಉತ್ಪಾದನೆ ಆಗಬೇಕು ಗುಣಮಟ್ಟದ ಹಾಲು ಪೂರೈಕೆ ಮಾಡಿ ಸಂಘದ ಅಭಿವೃದ್ಧಿಗೆ ಸಹಕಾರ ನೀಡಿದಬೇಕೆಂದು ತಾಲ್ಲೂಕಿನ ರೈತರಿಗೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೃಷ್ಣಪ್ಪ , ಕೋಚಿಮುಲ್ ನಿರ್ದೇಶಕ ಬಾಗೇಪಲ್ಲಿ ಮಂಜುನಾಥ್ ರೆಡ್ಡಿ ,
ಉಪಾಧ್ಯಕ್ಷೆ ಸುಜಾತಮ್ಮ, ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಗುಡಿಬಂಡೆ ತಾಲ್ಲೂಕಿನ ಉಪ ವ್ಯವಸ್ಥಾಪಕರಾದ ಡಾ.ನವ್ಯಶ್ರಿ,
ವಿಸ್ತರಣಾಧಿಕಾರಿಗಳದಾ ಧರಣಿ ಕುಮಾರ್, ಎಂ.ನರಸಿಂಹಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಕುಮಾರ್,ಒಕ್ಕೂಟದ
ಕಾರ್ಯಕಾರಿ ಮಂಡಳಿ ಸದಸ್ಯರು ಮತ್ತು ಇತರರು ಇದ್ದರು.

Sep 22, 2023

Leave a Reply

Your email address will not be published. Required fields are marked *