ಯಲಹಂಕ : ಬ್ಯಾಟರಾಯನಪುರ ಕ್ಷೇತ್ರದ ಹುಣಸಮಾರನಹಳ್ಳಿಯಲ್ಲಿ ಸೋಮವಾರ ಆಯೋಜಿಸಿದ್ದ ಅಕ್ಷಯ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದ 2022-23ನೇ ಸಾಲಿನ 13ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಹಲವು ಹೊಸ ನಿರ್ಣಯಗಳ ಅನುಷ್ಠಾನದೊಂದಿಗೆ ಯಶಸ್ವಿಯಾಗಿ ನೆರವೇರಿತು.

ಸರ್ವ ಸದಸ್ಯರ ಸಭೆಯನ್ನು ಉದ್ದೇಶಿಸಿ ಅಕ್ಷಯ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಆರ್ ರವಿಚಂದ್ರ ಮಾತನಾಡಿ ‘ಸದಸ್ಯರ ಸಮ ಯೋಚಿತ ಸಲಹೆ, ಮಾರ್ಗದರ್ಶನ ದ ಮೇರೆಗೆ ನಮ್ಮ ಸಹಕಾರಿಯು ಪ್ರಗತಿಯ ಹಾದಿಯಲ್ಲಿ ಸಾಗುತ್ತಿದ್ದು, ನಾವು ಅನುಷ್ಠಾನಗೊಳಿಸುವ ಯಾವುದೇ ಹೊಸ ನಿರ್ಣಯವು ಸದಸ್ಯರ ಹಿತರಕ್ಷಣೆಯ ಸೂತ್ರವನ್ನು ಆಧರಿಸಿರುತ್ತದೆ. ಸದಸ್ಯರಿಗೆ, ಷೇರುದಾರರಿಗೆ ಹೆಚ್ಚಿನ ಸೌಲಭ್ಯ ಮತ್ತು ಸವಲತ್ತುಗಳನ್ನು ನೀಡುವ ನಿಟ್ಟಿನಲ್ಲಿ ಸಹಕಾರಿಯು  620 ಷೇರುದಾರರಿಗೆ ಯಶಸ್ವಿನಿ ಕಾರ್ಡ್ ವಿತರಿಸಿದ್ದು, ಅತ್ಯುತ್ತಮ ಆಸ್ಪತ್ರೆ ಗಳಲ್ಲಿ ಉಚಿತ ಆರೋಗ್ಯ ಚಿಕಿತ್ಸೆ ಪಡೆಯಲು ವ್ಯವಸ್ಥೆ ಕಲ್ಪಿಸಿಲಾಗಿದೆ, ಷೇರುದಾರರಿಗೆ ಸದಾಕಾಲ ಸುಲಭ ರೀತಿಯಲ್ಲಿ ಹಣ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ‘ಈಸಿ ಮನಿ ಸ್ಕೀಮ್’ ಜಾರಿಗೊಳಿಸಿದ್ದು, ಇದರಿಂದ ಪ್ರತಿ ಷೇದಾರರು ವರ್ಷದ 365 ದಿನಗಳಲ್ಲೂ ಸಹ ಸುಲಭ ರೀತಿಯಲ್ಲಿ ಹಣ ದೊರೆಯಲಿದ್ದು, ಈ ಯೋಜನೆಯಿಂದ ಹೊರಗಡೆ ಚೀಟಿ ಹಾಕಿ ವಂಚನೆಗೆ ಒಳಗಾಗು ವುದನ್ನು ತಪ್ಪಿಸಬಹುದಾಗಿದೆ. 

ಉಳಿದಂತೆ ನಿಶ್ಚಿತ ಠೇವಣಿ, ಉಳಿತಾಯ ಖಾತೆ, ಆರ್ ಡಿ, ವಾಹನ ಸಾಲ, ಮಾರ್ಟ್ ಗೇಜ್ ಸಾಲ, ವೈಯಕ್ತಿಕ ಸಾಲ ಇವೆಲ್ಲವು ಗಳಲ್ಲೂ ಹೆಚ್ಚಿನ ಲಾಭಾಂಶವನ್ನು ಷೇರುದಾರರಿಗೆ ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಸಾಲ ಮರು ಪಾವತಿಯಲ್ಲೂ ಸಹ ಉತ್ತಮ ಸ್ಥಿತಿಯನ್ನು ಕಾಯ್ದು ಕೊಳ್ಳುವ ಮೂಲಕ ಕಳೆದ ಹಲವು ವರ್ಷ ಗಳಿಂದಲೂ ಸಹಕಾರಿಯು ಪ್ರಗತಿ ಪಥದಲ್ಲಿ ಸಾಗುತ್ತಿರುವುದು ಸಂತೋಷದ ಸಂಗತಿ. ಸಹಕಾರಿಯ ವತಿಯಿಂದ ಅತ್ಯುತ್ತಮ ಸಮಾಜ ಸೇವಕರನ್ನು ಗೌರವಿಸುವ, ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸದಸ್ಯರ ಮಕ್ಕಳಿಗೆ ಸಹಾಯಧನ ನೀಡಿ ಪ್ರೋತ್ಸಾಹಿಸುವ ಕಾರ್ಯ ವನ್ನು ಸಹಕಾರಿಯು ಅವ್ಯಾಹತ ವಾಗಿ ಮುಂದುವರಿಸಿ ಕೊಂಡು ಬಂದಿದೆ ಎಂದರು.

ಕಾರ್ಯಕ್ರಮದಲ್ಲಿ ಪರಿಸರ ಕಾಳಜಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಬೆಟ್ಟಹಲಸೂರು ಗ್ರಾಮದ ಹಸಿರೇ ಉಸಿರು ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಬಿ.ಎಂ.ಶ್ರೀನಿವಾಸಮೂರ್ತಿ ಯವರನ್ನು ಗೌರವಿಸಿ ಸನ್ಮಾನಿಸಲಾಯಿತು. ಇದೇ ವೇಳೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸಹಕಾರಿಯ ಸದಸ್ಯರ ಮಕ್ಕಳಿಗೆ ಸಹಾಯ ಧನದ ನೆರವು ನೀಡುವ ಮೂಲಕ ಗೌರವಿಸಿ ಸನ್ಮಾನಿಸಲಾಯಿತು. 

ಕಾರ್ಯಕ್ರಮದಲ್ಲಿ ಸಹಕಾರಿಯ 2022-23ನೇ ಸಾಲಿನ ವಾರ್ಷಿಕ ವರದಿ ಮಂಡನೆ, ಲೆಕ್ಕಪತ್ರಗಳ ಮಂಡನೆ, ಮುಂಗಡ ಪತ್ರ ಮಂಡನೆ ಸೇರಿದಂತೆ ಹಲವು ವರದಿಗಳನ್ನು ಮಂಡಿಸಿ ಅಂಗೀಕರಿಸಲಾಯಿತು. ಪರಿಸರ ಕಾಳಜಿಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಸಿರೇ ಉಸಿರು ಟ್ರಸ್ಟ್ ನ ಸಂಸ್ಥಾಪಕ ಬಿ.ಎಂ.ಶ್ರೀನಿವಾಸಮೂರ್ತಿ ರವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಸದಸ್ಯರು, ಷೇರುದಾರರಿಗೆ ಸಸಿಗಳನ್ನು ವಿತರಿಸಿದರು.

ಇದೇ ಸಂದರ್ಭದಲ್ಲಿ ಅಕ್ಷಯ ಕ್ರೆಡಿಟ್ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷೆ ಎ.ಎಂ‌.ಸುಜಾತ, ನಿರ್ದೇಶಕರಾದ ಬಿ.ಆರ್. ಬೈರೇ ಗೌಡ, ಲತಾರಾಣಿ, ಎ.ಸಣ್ಣವೀರಣ್ಣ, ಪಿ.ಶಿವಕುಮಾರ್, ಕೆ.ಪಿ.ರವಿ ಕುಮಾರ್, ಎಂ.ಸತೀಶ್, ಡಿ.ಸುರೇಶ್, ವಿ.ಚಂದ್ರಮೋಹನ್, ಎಚ್.ಜಿ.ಸರಸ್ವತಿ, ಮಂಗಳ, ಕೆ.ಜೆ.ಶ್ವೇತಾ ಲೋಕೇಶ್, ಹಸಿರೇ ಉಸಿರು ಟ್ರಸ್ಟ್ ನ ಸಂಸ್ಥಾಪಕ ಬಿ.ಎಂ.ಶ್ರೀನಿವಾಸಮೂರ್ತಿ, ಸಹಕಾರಿಯ ಮುಖ್ಯ ಕಾರ್ಯನಿರ್ವಣಾಧಿಕಾರಿ ಡಿ.ಎಸ್.ವೆಂಕಟಾಚಲಪತಿ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *