ದಿನಾಂಕ 2-10-2023ರ ಸೋಮವಾರದಂದು ಬೆಳಗ್ಗೆ 9.30 ಗಂಟೆಗೆ ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯ – ರಾಜಾಜಿನಗರದಲ್ಲಿ NSS ಘಟಕವು ಬಸವ ಮಂಟಪ ರಾಜಾಜಿನಗರದ ಸಹಯೋಗದಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ ಜಯಂತಿಯನ್ನು ಸಮುದಾಯ ಚಟುವಟಿಕೆಯ ಮೂಲಕ ವಿನೂತನವಾಗಿ ಆಚರಿಸಲಾಯ್ತು. ಇದೇ ಕಾರ್ಯಕ್ರಮದಲ್ಲಿ ಪ್ರಥಮ ಸೆಮೆಸ್ಟರ್ ನ ವಿದ್ಯಾರ್ಥಿಗಳಾದ ಕು.ಶೃತಿ ಹಾಗೂ ಕು ಧನುಶ ಹಾಗೂ 4ನೇ ಸೆಮೆಸ್ಟರ್ ನ ವಿದ್ಯಾರ್ಥಿನಿ ಅಂಥೋನಿ ಪ್ರಕಾಶ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಗಳ ವಿಶೇಷ ವ್ಯಕ್ತಿತ್ವವನ್ನು ಕುರಿತು ಪ್ರಬಂಧ ಮಂಡಿಸಿದರು. ಬಸವ ಮಂಟಪದ ಪೀಠಾಧ್ಯಕ್ಷರಾದ ಗಂಗಮ್ಮ ಮಾತಾಜಿಯವರು ಭಜನೆಯ ಮೂಲಕNSS ಸ್ವಯಂ ಸೇವಕರಿಗೆ ಆಧ್ಯಾತ್ಮಿಕತೆಯಿಂದ ಆಗುವ ಪ್ರಯೋಜನ ಕುರಿತು ಚರ್ಚಿಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರು ಡಾ. ಶೀಲಾ ದೇವಿಎಸ್ ಮಳಿಮಠರವರು ಸಮುದಾಯ ಚಟುವಟಿಕೆಗೆ ಚಾಲನೆ ನೀಡಿದರು. ಬೋಧಕು ಬೋಧಕೇತರ ವರ್ಗದವರು ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲರು – ಶಿಕ್ಷಕರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ, ಸ್ವಚ್ಚತೆಯೇ ಸೇವೆ ಸೇವೆಯೇ ಸ್ವಚ್ಛತೆಯ ಮಹತ್ವವನ್ನು ಅರಿತುಕೊಂಡರು

