ದಿನಾಂಕ 3 -10 – 2023ರ ಮಂಗಳವಾರ 12.30 ಗಂಟೆಗೆ ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ ಥಿಯೇಟರ್ ಕ್ಲಬ್ ಘಟಕವು ಪ್ರಥಮ ಸೆಮೆಸ್ಟರ್ ಬಿಎಬಿ ಎಸ್ಸಿ ಬಿಕಾಂ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಅಭಿನಯ ಹಾಗೂ ನಿರೂಪಣಾ ಕೌಶಲ್ಯದ ಬಹು ಮುಖ ಕಲೆಗಳ ಕಾರ್ಯಾಗಾರವನ್ನು ಚಾಂಪಿಯನ್ಸ್ ಅಕಾಡೆಮಿ ಬೆಂಗಳೂರು ಸಂಸ್ಥೆಯ ವತಿಯಿಂದ ಆಯೋಜಿಸಲಾಗಿತ್ತು. ನಿರೂಪಕರಾಗಲು ನವರಸಗಳು ಮುಖ್ಯ ಎಂಬ ಅಂಶವನ್ನು ಮನದಟ್ಟು ಮಾಡಿಕೊಟ್ಟ ನಿರೂಪಕ ಮನೋಜ್ ಜೋಶಿಯವರು ವಿದ್ಯಾರ್ಥಿಗಳ ಸಕ್ರೀಯ ಭಾಗವಹಿಸುವಿಕೆಗೆ ಅಗ್ರ ಸ್ತಾನ ಕೊಟ್ಟು ಕಾರ್ಯಾಗಾರವನ್ನು ಯಶಸ್ವಿಗೊಳಿಸಿದರು. ಪ್ರಾಂಶುಪಾಲರಾದ ಡಾ. ಶೀಲಾ ದೇವಿ ಎಸ್ ಮಳೀಮಠರವರು ಇಂತಹ ಸೃಜನಶೀಲ ಚಟುವಟಿಕೆಗೆ ಪ್ರೋತ್ಸಾಹ ನೀಡಿ ಚಾಲನೆ ಕೊಟ್ಟರು ಕಲಾವಿದರಾದ ಕುಮಾರಿ ನಯನಾ ಹಾಗೂ ಗೌತಮ ಕಾರ್ಯಾಗಾರಕ್ಕೆ ಮೆರಗನ್ನು ನೀಡಿದರು. ಥಿಯೇಟರ್ ಕ್ಲಬ್ ನ ಸಂಚಾಲಕಾದ ಕುಮಾರಿ ರುಖಯ್ಯಾ ತಬಸುಮ್ ಸದಸ್ಯರಾದ ಐಶ್ವರ್ಯ – ಶರ್ಮಿಳಾ ಗಡ್ಡಿ – ಶ್ರೀಗಿರೀಶ ವಿದ್ಯಾರ್ಥಿ ಸಂಚಾಲಕಿ ಕು.ಶೃತಿ ಉಪಸ್ಥಿತ ಇದ್ದರು. ಕಲೆಯೂ ಕೂಡ ವೃತ್ತಿಪರ ಜೀವನಕ್ಕೆ ದಾರಿ ನೀಡುತ್ತದೆ. ಎಂಬುದನ್ನು ವಿದಾರ್ಥಿಗಳು ಅರಿವು ಪಡೆದರು.
