ದಿನಾಂಕ 8, 10- 2023ರ ಭಾನುವಾರ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಕಾಲೇಜಿನಲ್ಲಿ ಡಾ. ಶೀಲಾ ದೇವಿ ಎಸ್ ಮಳಿಮಠ ಅವರಿಗೆ ಅವರ ವಿದ್ಯಾರ್ಥಿಗಳು ಎಂಫಿಲ್ ಹಾಗೂ ಪಿ ಎಚ್ ಡಿ ಸಂಶೋಧನಾ ವಿದ್ಯಾರ್ಥಿಗಳು ವಿದೇಶಿ ಕನ್ನಡಿಗರು ಕರ್ನಾಟಕದ ಕನ್ನಡ ಅಧ್ಯಾಪಕ ಬಳಗ ಸಹ ಉದ್ಯೋಗಿ ಮಿತ್ರರು ಇತರರು ಬರೆದ ವ್ಯಕ್ತಿ ವ್ಯಕ್ತಿತ್ವದ ಅನಾವರಣದ ಗ್ರಂಥ ಜಂಗಮಶ್ರಿ ಲೋಕಾರ್ಪಣೆಗೊಂಡಿತು – ಡಾ. ಗೀತಾ ರಾಮಾನುಜಂ ಅವರಿಂದ ಲೋಕಾರ್ಪಣೆ – ಉದ್ಘಾಟನೆ ಮಾಜಿ ಆಯುಕ್ತರು ಭಾಸ್ಕರ್ ರಾವ್ ಪುಸ್ತಕ ಕುರಿತು ಹಿರಿಯ ವಿದ್ವಾಂಸರು ಪ್ರೊ ಜಿ ಅಶ್ವತ್ಥ ನಾರಾಯಣ ಡಾ. ಅನ್ನದಾನೇಶ, ಪ್ರಾಂಶಪಾಲರು ನಾಗಲಕ್ಷ್ಮಿ – ಸಂಪಾದಕರು ಡಾ. ಸೈಯದ್ ಮುಯೀನ್-ಪ್ರೊಷಪಾನ ಸಮಾರಂಭವನ್ನು ಯಶಸ್ವಿಗೊಳಿಸಿದರು. ಅನಿಸಿಕೆ ಹಂಚಿಕೊಂಡ ಡಾ. ಶೀಲಾ ದೇವಿ ಎಸ್ ಮಳೀಮಠರವರು ಭಾವಸ್ಪರ್ಶಿ ನುಡಿಗಳಿಂದ ತಮ್ಮ ಅನುಭವದಲ್ಲಿ ಶಿಷ್ಯರೇ ತಮ್ಮ ಅಭಿಮಾನಿ ದೇವರುಗಳೆಂದು ಹೇಳಿದರು. ಕಾರ್ಯಕ್ರಮಕ್ಕೆ ಕಳಸವಿಟ್ಟಂತೆ ಶ್ರೀಜಗಜ್ಯೋತಿ ಬಸವೇಶ್ವರ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀಎಸ್ ಎಸ್ ದೊಡ್ಡಣ್ಣನವರ ತಮ್ಮ ಮಾತುಗಳಿಂದ ಸಭೆಗೆ ಜಂಗಮಶ್ರೀ ಅಭಿನಂದನ ಗ್ರಂಥದ ಬಗ್ಗೆ ತಿಳಿಸಿದರು
