ನಾವುಗಳು ಹಿಂದುವಾಗಿ ಇಷ್ಟು ದಿನ ನರಕಯಾತನೆ ಅನುಭವಿಸಬೇಕಾಯಿತು. ಹಿಂದು ಧರ್ಮದಲ್ಲಿ ನಾವುಗಳು ದಲಿತರಾಗಿ ಕೇವಲ ಕೆಲವರು ನೀಡಿರುವ ಹೇಳಿಕೆಗಳನ್ನು ನಾವೆಲ್ಲಾ ಪಾಲಿಸುತ್ತಾಬಂದೆವು, ಸಮಾಜದಲ್ಲಿ ಹೀನಾಯವಾಗಿ ನಮ್ಮನ್ನು ನೋಡಿಕೊಳ್ಳುತಿದ್ದರು, ದಲಿತರು ಎಂಬ ಹಣೆಪಟ್ಟಿ ಕಟ್ಟಿ ದೇವಾಲಯಗಳಿಂದ ದೂರ ಇಟ್ಟರು, ಗ್ರಾಮಗಳಿಂದ ಊರುಗಳಿಂದ ಹೊರಗಿಟ್ಟರು. ಹೊಲಸು ಕೆಲಸಗಳನ್ನು ಮಾಡಿಸುವ ಮೂಲಕ ಸಮಾಜದಲ್ಲಿ ಮುನ್ನೆಲೆಗೆ ಬಾರದಂತೆ ನೋಡಿಕೊಂಡು ಅಸ್ಪಶ್ರರನ್ನಾಗಿಸಿ ಕೇವಲವಾಗಿ ನೋಡಿದ್ದಾರೆ. ಇಂದಿನಿಂದ ನಾವುಗಳು ಮತ್ತೆ ಬೌದ್ಧ ದಮ್ಮಕ್ಕೆ ಸೇರಿಕೊಳ್ಳುವ ಮೂಲಕ ಮರಳಿ ಗೂಡಿಗೆ ವಾಪಸ್‌ ಆಗಬೇಕಿದೆ ಎಂದರು.
ಮುಖಂಡ ಚನ್ನಕೃಷ್ಣಪ್ಪ ರವರು ಮಾತನಾಡಿ, ಅಂಬೇಡ್ಕರ್ ದಲಿತರಾಗಿ ಹುಟ್ಟಿ ಕೊನೆಗೆ ಬೌದ್ಧ ಧರ್ಮಕ್ಕೆ ಮರಳಿದ ನಂತರವಷ್ಟೇ ಅವರ ಮನಸ್ಸಿಗೆ ಸಮಾಧಾನವಾಗಿದೆ. ಈ ಬಗ್ಗೆ ಅವರು ತಮ್ಮಪುಸ್ತಕದಲ್ಲಿ ಬೌದ್ಧ ಧಮ್ಮಕ್ಕೆ ಮರಳಿದ ನಂತರ ಹಾಗೂ ಅದಕ್ಕೂ ಮುನ್ನ, ಜೀವನದಲ್ಲಿ ನಡೆದಿರುವುದನ್ನು
ವಿವರಿಸಿದ್ದಾರೆ. ಯಾರೋ ಮಧ್ಯ ಏಷ್ಯಾದಿಂದ ಬಂದ ಬ್ರಾಹ್ಮಣರು ವೈದಿಕ ಪರಂಪರೆಯನ್ನು ಜಾರಿಗೆ
ತರಲು ಈ ರೀತಿಯ ಪಿತೂರಿ ಮಾಡಿ ದಲಿತರನ್ನು ಕೂಲಿ ಕೆಲಸಗಾರರ ರೀತಿ ನೋಡಿಕೊಂಡರು.
ಅದೇ ರೀತಿ ದೇಶದಲ್ಲಿ ಕಡಿಮೆ ಸಂಖ್ಯೆ ಇರುವ ಅವರು, ದೇಶದ ಉನ್ನತ ಹುದ್ದೆಗಳನ್ನು ಪರಿಪಾಲನೆ ಮಾಡುತ್ತಾ ದೇಶದ ಆಡಳಿತವನ್ನು
ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಇದಕ್ಕೆಲ್ಲ ನಾವು ತಲೆ
ಕೆಡಿಸಿಕೊಳ್ಳದೆ `ಅಂಬೇಡ್ಕರ್ ರಚಿತ ಸಂವಿಧಾನ ಹಾಗೂ ಅವರು ಪಡೆದ ಬೌದ್ಧ ಧಮ್ಮ ದೀಕ್ಷೆ ಪಡೆಯುವ ಮೂಲಕ ನಾವೆಲ್ಲ ಬೌದ್ಧ ಧಮ್ಮದವರು ಎಂದು ಒಂದುಗೂಡಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ದಲಿತಪರ ಸಂಘಟನೆಗಳ ಮುಖಂಡರಾದ ಜನಾರ್ದನ್, ಚಿನ್ನಸ್ವಾಮಿ, ದೊಡ್ಡಅರಳಗೆರೆ ನಾಗೇಶ್, ಲೋಕೇಶ್, ನಾಗೇಶ್ ಮೌರ್ಯ, ಎಂ.ವಿ.ಸೋಮಶೇಖರ್, ಡಾ.ಶಿವಕುಮಾರ್ ಚಕ್ರವರ್ತಿ, ಶ್ರೀನಿವಾಸ್‌, ಅಣ್ಣಯ್ಯಪ್ಪ ಶ್ರೀಕಾಂತ್ ರಾವಣ್ ಇತರರು ಇದ್ದರು.

Leave a Reply

Your email address will not be published. Required fields are marked *