: ಬ್ಯಾಟರಾಯನಪುರ ಕ್ಷೇತ್ರದ ಜಾಲ ಹೋಬಳಿಯ ಸಾತನೂರು ಗ್ರಾ.ಪಂ.ವತಿಯಿಂದ ಬೈಯಪ್ಪನಹಳ್ಳಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ 2023-24ನೇ ಸಾಲಿನ ಮೊದಲ ಸುತ್ತಿನ ಗ್ರಾಮಸಭೆಯಲ್ಲಿ ಗ್ರಾ.ಪಂ.ಅಧ್ಯಕ್ಷೆ ಮಾಲಾ ಸುಬ್ರಮಣಿ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಆದೇಶಪತ್ರ, ಭಾಗ್ಯಲಕ್ಷ್ಮಿ ಬಾಂಡ್, ಪ್ರತಿಭಾವಂತ ಮಕ್ಕಳಿಗೆ ಕೈಗಡಿಯಾರದ ಉಡುಗೊರೆ ಸೇರಿದಂತೆ ವಿವಿಧ ಸವಲತ್ತುಗಳನ್ನು ವಿತರಸಿದರು.



.
ಬ್ಯಾಟರಾಯನಪುರ ಕ್ಷೇತ್ರದ ಜಾಲ ಹೋಬಳಿಯ ಸಾತನೂರು ಗ್ರಾ.ಪಂ.ವತಿಯಿಂದ ಬೈಯಪ್ಪನಹಳ್ಳಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ 2023-24ನೇ ಸಾಲಿನ ಮೊದಲ ಸುತ್ತಿನ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ‘ಸುದೈವದಿಂದ ಸಾತನೂರು ಗ್ರಾ.ಪಂ.ನಲ್ಲಿ ಎಲ್ಲಾ ಸದಸ್ಯರ ಸಹಕಾರ, ಬೆಂಬಲ ಚನ್ನಾಗಿದ್ದು, ಗ್ರಾ.ಪಂ.ವ್ಯಾಪ್ತಿಯಲ್ಲಿ ಶೇ.90% ರಷ್ಟು ಪ್ರಗತಿ ಕಾರ್ಯಗಳು ಕೈಗೂಡಿವೆ. ಮುಂದಿನ ವರ್ಷವೂ ಸಹ ಇದೇ ರೀತಿ ಪ್ರಗತಿ ಕಾರ್ಯ ಗಳನ್ನು ಕೈಗೊಳ್ಳಲು ಅನುಮೋದನೆ ಅಗತ್ಯವಿದ್ದು, ಈ ದಿಸೆಯಲ್ಲಿ ಗ್ರಾಮಸಭೆ ಆಯೋಜಿಸಿದ್ದೇವೆ. ಗ್ರಾಮ ಪಂಚಾಯಿತಿ ನೂತನ ಕಟ್ಟಡ ನಿರ್ಮಿಸಬೇಕೆಂದು ಸರ್ವ ಸದಸ್ಯರೂ ಇಂಗಿತ ವ್ಯಕ್ತಪಡಿಸಿ ದ್ದಾರೆ. ಇದಕ್ಕೆ ಅಗತ್ಯ ಸಹಕಾರ, ಬೆಂಬಲ ಸೂಚಿಸಿದ್ದು, ಮುಂದಿನ ವರ್ಷದ ವೇಳೆಗೆ ಗ್ರಾಮ ಪಂಚಾಯಿತಿ ನೂತನ ಕಟ್ಟಡವನ್ನು ಆಧ್ಯತೆಯ ಮೇರೆಗೆ ನಿರ್ಮಿಸಲಾ ಗುವುದು ಎಂದ ಅವರು ಕಸ ವಿಲೇವಾರಿ ವಿಷಯದಲ್ಲಿ ಗ್ರಾಮೀಣ ಜನತೆ ನಿರ್ಲಕ್ಷ್ಯ ಧೋರಣೆ ತೋರು ತ್ತಿರುವುದು ಕಂಡು ಬರುತ್ತಿದ್ದು, ಎಲ್ಲೆಂದರಲ್ಲಿ ಕಸ ಬಿಸಾಡುವ ಕೆಟ್ಟಚಾಳಿ ರೂಢಿಸಿಕೊಂಡಿರುವುದು ವಿಷಾದಕರ ಸಂಗತಿ, ಗ್ರಾಮೀಣ ಜನತೆ ತಮ್ಮ ಮನೆ ಸ್ವಚ್ಛವಾಗಿರ ಬೇಕೆಂದು ಬಯಸುವ ರೀತಿಯಲ್ಲೇ ನಮ್ಮ ಗ್ರಾಮ ಸಹ ಸ್ವಚ್ಛವಾಗಿರ ಬೇಕೆಂಬ ಉದಾರತೆ ಬೆಳೆಸಿ ಕೊಂಡು, ಹಸಿ ಕಸ ಮತ್ತು ಒಣ ಕಸವನ್ನು ವಿಂಗಡಿಸಿ ಕಸದ ವಾಹನಕ್ಕೆ ಹಾಕಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಪಿಂಚಣಿ ಆದೇಶ ಪತ್ರ, ಭಾಗ್ಯಲಕ್ಷ್ಮಿ ಬಾಂಡ್, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೈಗಡಿಯಾರದ ಉಡುಗೊರೆ ಸೇರಿದಂತೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಮುನಿತಿಮ್ಮರಾಯಪ್ಪ, ಸದಸ್ಯರಾದ ಜಿಲಾನಿ, ಮಾನಸ, ಜಾಹೇರ ತಸ್ನೀಂ, ಸುಷ್ಮಿತಾ, ಸುಜಾತ, ಅಶ್ವಿನಿ, ಕೃಷ್ಣಪ್ಪ, ನಾರಾಯಣಸ್ವಾಮಿ, ಶಿವಣ್ಣ, ಮುಖಂಡರಾದ ಸುಬ್ರಮಣಿ, ಪಿಡಿಓ ಮಮತ, ಕಾರ್ಯದರ್ಶಿ ಶಿವಪ್ರಸಾದ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.