

: ದಿನಾಂಕ 12 – 10, 2023ರಿಂದ 21-10 – 2023ರ ವರೆಗೆ ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಕಾಲೇಜು ರಾಜಾಜಿನಗರದಲ್ಲಿ ದಸರಾ ವೈಭವ ಸಮಾರಂಭವನ್ನು ಬಣ್ಣಗಳ ಆರಾಧನಾ ದೇವತೆ ದುರ್ಗಾ ದೇವಿಯ ಸಂಕೇತವಾಗಿ ಆಚರಿಸಲಾಯ್ತು. ವಿದ್ಯಾರ್ಥಿ ವಿದ್ಯಾರ್ಥಿನಿಯರು – ಶಿಕ್ಷಕ ಶಿಕ್ಷಕೇತರ ವರ್ಗದವರು ಒಂಭತ್ತು ದಿವಸಗಳಲ್ಲಿ ಬಣ್ಣಗಳ ಹಿನ್ನೆಲೆಯಲ್ಲಿ ದುರ್ಗಾ ದೇವಿಯ ಪರಿಕಲ್ಪನೆಯನ್ನು ಶಕ್ತಿಯ ಸಾಕಾರ ರೂಪವಾಗಿ ಆಚರಿಸಿದರು. 21-10-2023ರ ಶನಿವಾರ ದಾಂಡಿಯ ನೃತ್ಯದ ಮೂಲಕ ಸರಸ್ವತಿಯ ರೂಪವಾದ ದುರ್ಗಾ ದೇವಿ ಶಕ್ತಿಯನ್ನು ಸಾಂಕೇತಿಕವಾಗಿ ಪ್ರದರ್ಶಿಸಿದರು. ಪ್ರಾಂಶುಪಾಲರಾದ ಡಾ. ಶೀಲಾ ದೇವಿ ಎಸ್ ಮಳಿಮಠ ಅವರು ಅರ್ಧನಾರೀಶ್ವರ ಕಲ್ಪನೆಯಲ್ಲಿನ ಸ್ತ್ರೀ ಹಾಗೂ ಪುರುಷನ ಸಮ್ಮಿಲನದಲ್ಲಿ ಸಮಾಜದ ಪ್ರಗತಿಯನ್ನು ಯುವ ಜನತೆಯು ಸಂರಕ್ಷಿಸುವ ಇಚ್ಚಾಶಕ್ತಿಯನ್ನು ಪಡೆಯಬೇಕೆಂದು ಸಭೆಗೆ ತಿಳಿಸಿದರು