ದೀಪ ಬೆಳಗುವುದು ಒಂದು ಆಚರಣೆ ಹಾಗೂ ಸಂಪ್ರದಾಯ. ಉತ್ತಮ ಬದುಕಿನಲ್ಲಿ ಭರವಸೆಯನ್ನು ತಿಳಿಸಿ, ವಿಕೃತ ಬುದ್ಧಿಯನ್ನು ತೊಳೆದು ಹಾಕುತ್ತದಯೆಂಬ . “ದೀಪಂ ಜ್ಯೋತಿ ಪರಬ್ರಹ್ಮ…. ದೀಪಂ ಜ್ಯೋತಿ ಜನಾರ್ಧನ” . ಅಂದರೆ ಸದಾ ಕಾಲ ನಮಗೆ ಜ್ಞಾನದ ಜ್ಯೋತಿಯನ್ನು ಅನುಗ್ರಹಿಸಿ…. ಅಜ್ಞಾನದ ಕತ್ತಲೆಯನ್ನು ನಶಿಸುವಂತೆ ಮಾಡುವುದು ಜ್ಯೋತಿ.
ಇನ್ನು ಹಬ್ಬ ಹರಿದಿನ ಬಂದರೆ ಸಾಕು ಎಲ್ಲರೂ ದೀಪ ಬೆಳಗುತ್ತಾರೆ…. ಕಾರಣ ಇಷ್ಟೇ ಹಬ್ಬ ಎಂದರೆ ಸಾಕು, ಸಡಗರದ ವಾತಾವರಣ, ಸಂಭ್ರಮದ ಕಾರ್ಯಾಚರಣೆ, ಸಂತೋಷ, ಹೊಸ ಚೈತನ್ಯ, ಹೊಸ ಹುರುಪುಗಳ ಸಮ್ಮಿಲನ ಹೀಗೆ.. ಹತ್ತು ಹಲವಾರು ಭಾವನೆಗಳ ಪೂರಕ. ಮನದಲ್ಲಿ ಏನೋ ಒಂದು ರಮಣೀಯವಾದ ಬಾಂಧವ್ಯದ ಬೆಸುಗೆ… ಎಲ್ಲೆಲ್ಲೂ ಉತ್ಸಾಹ… ಎಲ್ಲರೂ ಬಹು ಸಂತಸ ಪಡುವರು.
ಹಿಂದೂ ಧರ್ಮದವರಿಗೆ ಸಮಯ, ನಂಬಿಕೆ, ತತ್ವಗಳು, ಆಚರಣೆ ಶೈಲಿ, ಧಾರ್ಮಿಕ ಪದ್ಧತಿಗಳನ್ನು…. ಮಾದರಿಯಾಗಿ ಒಂದು ಅಸ್ತ್ರವಾಗಿ ಇಟ್ಟುಕೊಂಡು ಅದರ ಅನುಸಾರವಾಗಿ ಬರುವ ಎಲ್ಲಾ ವಿಶೇಷ ದಿನಗಳನ್ನು ಹಬ್ಬಗಳೆಂದು ಆಚರಿಸುತ್ತಾರೆ.
“ಅಸತೋಮ ಸದ್ಗಮಯ
ತಮಸೋಮ ಜ್ಯೋತಿರ್ಗಮಯ”
ಈ ಶ್ಲೋಕವು ಎಲ್ಲರಿಗೂ ಚಿರಪರಿಚಯ ಇದರ ಭಾವಾರ್ಥ ಏನೆಂದರೆ ಮನುಷ್ಯನು ತನ್ನ ಮನದಲ್ಲಿ ಅಡಗಿರುವ ಅಂಧಕಾರ, ಅಹಂಕಾರವನ್ನೆಲ್ಲವನ್ನು ದೂರಸರಿಸುವಂತೆ ಪ್ರೇರಣೆ ಆ ಪರಮಾತ್ಮನ ಅನುಗ್ರಹಿಸಲಿ ಎಂದು ಪ್ರಾರ್ಥಿಸೋಣ.
ಹಬ್ಬವು ನಮ್ಮ ಸಂಸ್ಕೃತಿಯನ್ನು ಪ್ರಜ್ವಲಿಸುತ್ತದೆ, ಇದು ನಿಜಕ್ಕೂ ಒಂದು ವಿಶೇಷ ಎಂದೆ ಆಲಿಸಬಹುದು… ಅದರಲ್ಲೂ ದೀಪಾವಳಿ ಬಂದರೆ ಸಾಕು, ಎಲ್ಲೆಲ್ಲೂ ಸಂತೋಷದ ಹಾವಳಿ, ಅಂದಕಾರವನ್ನು ತೊರೆದು, ಭರವಸೆಯನ್ನು ಮನದಲ್ಲಿ ಬೆಳಗಿಸುವ ಹಬ್ಬ ಎಂದರೆ ದೀಪಾವಳಿ. ಇದು ನಮ್ಮ ಭಾರತದಲ್ಲಿರುವ ಪ್ರಮುಖ ಹಬ್ಬಗಳಲ್ಲಿ ಇದು ಕೂಡ ಒಂದು.
ಆಶ್ವಿಜ ಮಾಸದ ಕೃಷ್ಣ ಪಕ್ಷದ ಚತುರ್ದಶಿ, ಅಮಾವಾಸ್ಯೆ, ಮತ್ತು ಕಾರ್ತಿಕ ಶುದ್ಧ ಪಾಡ್ಯಮಿಯೆಂದು ಆಚರಿಸುತ್ತಾರೆ. ಈ ದಿನ ಬಹು ಮುಖ್ಯವಾಗಿ ದೀಪಗಳನ್ನು ಬೆಳಗಿಸಿ, ಹೊಸ ಉಡುಪನ್ನು ತೊಟ್ಟು, ಸಿಹಿಯನು ಸೇವಿಸಿ….ಎಲ್ಲರೊಂದಿಗೆ ಕೂಡಿ ಸಿಹಿಯಾದ ಮಾತು, ನಡೆ ನುಡಿಗಳನ್ನು, ಹಂಚಿಕೊಂಡು ಎಲ್ಲರಿಗೂ ಒಳಿತು ಮಾಡಲೆಂದು ದೇವರಲ್ಲಿ ಪ್ರಾರ್ಥನೆ ಮಾಡಿ ಬಹುಸಡಗರದಿಂದ ಮನ ಮಂದಿಯಲ್ಲ ಆಚರಿಸುವ ಹಬ್ಬ ಎಂದರೆ ದೀಪಾವಳಿ.
ಈ ಸುದಿನದಂದು ದೀಪಗಳದೆ ವಿಶೇಷ …ಕಾರಣ ಇಷ್ಟೇ… ಕತ್ತಲೆಯೆಂಬ ಭಯವನ್ನು, ಬದುಕಿನಲ್ಲಿ ಭರವಸೆಯ ಬೆಳಕನ್ನು, ಚೆಲ್ಲಿ… ಬದುಕಿಗೆ ಒಂದು ಆಶಾಕಿರಣವಾಗಿ ಪ್ರಜ್ವಲಿಸುತ್ತದೆ.
ಈ ಹಬ್ಬವನ್ನು ಭಾರತದ ಬೇರೆ ಬೇರೆ ಭಾಗಗಳಲ್ಲಿ ಅವರದೇ ಆದ ರೀತಿ,ನೀತಿ, ಶೈಲಿಯಲ್ಲಿ, ಆಚಾರ ವಿಚಾರ ಗಳ ಅನುಸಾರವಾಗಿ ಆಚರಿಸುತ್ತಾರೆ.
ಈ ಹಬ್ಬದಂದು ವಿಶೇಷ ಏನೆಂದರೆ ಅಭ್ಯಂಜನ ಸ್ನಾನ ತುಂಬಾನೇ ವಿಶೇಷ… ನಮ್ಮ ಹಿರಿಯರು ಹೇಳುತ್ತಿದ್ದರು “ಉಂಡು ಯುಗಾದಿ ಮಿಂದು ದೀಪಾವಳಿ”.
ಈ ಹಬ್ಬದ ಮುಖ್ಯ ಉದ್ದೇಶವೇನೆಂದರೆ…. ಕತ್ತಲೆಯ ಮೇಲೆ ಬೆಳಕು ವಿಜಯಪತಾಕೆಯನ್ನು ಹಾರಿಸುವ ಸಂಕೇತ. ಸಾಂಪ್ರದಾಯಿಕವಾಗಿ ಇದಕ್ಕೆ ಹಲವಾರು ಕಥೆ ಪುರಾಣಗಳಿಂದ ತಿಳಿದು ಬಂದಿದೆ.
ನವದಂಪತಿಗಳಿಗೆ ಈ ಹಬ್ಬ ತುಂಬಾನೆ ವಿಶೇಷದಲ್ಲಿ ವಿಶೇಷ ಏಕೆಂದರೆ… ಈ ಹಬ್ಬಕ್ಕೆ ಅಳಿಯ ಮತ್ತು ಮಗಳನ್ನು ತವರಿಗೆ ಕರೆಸಿ, ಅಂದು ಸಿಹಿ ತಿನಿಸುಗಳನ್ನು ಮಾಡಿ, ಎಲ್ಲರೂ ಒಟ್ಟಾಗಿ ಭೋಜನ ಮಾಡಿ .ಸಾಯಂಕಾಲ ಈ ನವದಂಪತಿಗಳಿಗೆ ಆರುತಿ ಮಾಡಿ ಅಂದು ಮಾವನು ಅಳಿಯನಿಗೆ ಮತ್ತು ಮಗಳಿಗೆ ಉಡುಗೊರೆ ಕೊಟ್ಟು ನೂತನ ದಂಪತಿಗಳನ್ನು ಆಶೀರ್ವದಿಸುತ್ತಾರೆ.
ಕಾರ್ತಿಕ ಮಾಸದಲ್ಲಿ ಬರುವ ಈ ಹಬ್ಬ. ತಿಳಿಸುವುದು
ಏನೆಂದರೆ ,ಬದುಕಿನ ಹಾದಿ ತುಂಬಾ ಕಷ್ಟ ಅಂತ ಕಷ್ಟಕ್ಕೆ ಹೊಸ ರೂಪ ಕೊಟ್ಟು ಬೆಳಗುವುದು ಎಂಬುದ ಪ್ರತಿಥಿ.
ಈ ಹಬ್ಬದ ಹಿನ್ನೆಲೆಯನ್ನು ಸಂಕ್ಷಿಪ್ತವಾಗಿ ತಿಳಿಸುವ ಆಸೆ..
ಅಮಾವಾಸ್ಯೆಯ ಹಿಂದಿನ ದಿನ…ಅಂದರೆ ಚತುರ್ದಶಿಯೆಂದು ಲೋಕ ರಕ್ಷಕನಾದ ಮಹಾವಿಷ್ಣುವು, ಎಂಟನೇ ಅವತಾರದಲ್ಲಿ ಕೃಷ್ಣನಾಗಿ ಬಂದು….ನರಕಾಸುರ ಎಂಬ ದುಷ್ಟ ರಾಕ್ಷಸನನ್ನು ಸಂಹರಿಸಿ… 16,000 ಗೋಪಿಕ ಸ್ತ್ರೀಯರನ್ನು ಕಾಪಾಡಿದಂತ ಸುದಿನ…. ಹೀಗಾಗಿ ಈ ವಿಶೇಷ ದಿನವನ್ನು ನರಕ ಚತುರ್ದಶಿ ಎಂದು ಕರೆಯುವ ವಾಡಿಕೆ ತಿಳಿದು ಬಂದಿದೆ.
ಇನ್ನೊಂದು ವೃತಾಂತ, ಅದೇನೆಂದರೆ….. ಪಿತೃವಾಕ್ಯ ಪರಿಪಾಲನೆಯೆಂದೆ ಹೆಸರು ಪಡೆದಿರುವ ಶ್ರೀರಾಮಚಂದ್ರನು, ಹದಿನಾಲ್ಕು ವರ್ಷ ವನವಾಸವನ್ನು ಮುಗಿಸಿ….ಜೊತೆಗೆ 10 ತಲೆ ರಾವಣನನ್ನು ಸದೆಬಡೆದು ಲಂಕೆಯಿಂದ ಅಯೋಧ್ಯೆಗೆ ಸೀತಾ ಮಾತೆ, ಲಕ್ಷ್ಮಣ ಹಾಗೂ ಹನುಮಂತನ ಜೊತೆ ವಿಜಯದ ಪತಾಕೆಯನ್ನು ಆರಿಸುತ್ತಾ…. ಮರಳಿ ಅಯೋಧ್ಯಗೆ ಬಂದ ದಿನ….ಅಂದು ಅಯೋಧ್ಯೆವಾಸಿಗಳೆಲ್ಲ ನಗರವನ್ನು ದೀಪಗಳಿಂದ ಅಲಂಕರಿಸಿ ಆ ವಿಜಯೋತ್ಸವವನ್ನು ಹಾಡಿಕೊಂಡಾಡಿ ದ ದಿನ . ಎಂಬುದು ಒಂದು ಹಿನ್ನೆಲೆ ಯಾದರೆ ಈಗಲೂ ಸಹ ಉತ್ತರ ಭಾರತದಲ್ಲಿ ಈ ದಿನವನ್ನು ಹೊಸ ವರ್ಷವಾಗಿ ಆಚರಿಸುತ್ತಾರೆ.
ದೀಪಾವಳಿಯ ಇನ್ನೊಂದು ಹಿನ್ನೆಲೆ ಏನೆಂದರೆ, ಲೋಕ ರಕ್ಷಕನಾದ ಶ್ರೀಮನ್ ನಾರಾಯಣನು ವಾಮನ ರೂಪದಲ್ಲಿ ವಟ್ಟುವಾಗಿ ಬಲಿಚಕ್ರವರ್ತಿಯ ಬಳಿಗೆ ಬಂದು ಮೂರು ಅಡಿ ಜಾಗವನ್ನು ಬೇಕೆಂದು ಕೇಳುತ್ತಾನೆ. ಅದನ್ನು ಒಪ್ಪಿಕೊಂಡ ನಂತರ ವಾಮನನಾಗಿದ್ದವನು ,ತ್ರಿ ವಿಕ್ರಮನಾಗಿ ಬೆಳೆದು ನಿಂತನು. ಮೊದಲನೇ ಪಾದ ಭೂಮಿಯನ್ನು, ಎರಡನೇ ಪಾದಲ್ಲಿ ಆಕಾಶವನ್ನು ಆವರಿಸಿಕೊಳ್ಳುತ್ತಾನೆ. ಇನ್ನು ಮೂರನೇ ಹೆಜ್ಜೆಗೆ ಸ್ಥಳ ಕೇಳುವಾಗ ಆ ಬಲಿ ಚಕ್ರವರ್ತಿಗೆ ಜ್ಞಾನೋದಯವಾಗಿ ಬಂದಿರುವುದು, ಲೋಕ ರಕ್ಷಕನಾದ ಶ್ರೀಮನ್ನಾರಾಯಣ ಎಂದು ತಿಳಿದು. ಮೂರನೇ ಹೆಜ್ಜೆಯನ್ನು ತನ್ನ ಶಿರದ ಮೇಲೆ ಇಡಲು ಕೇಳಿಕೊಂಡನು. ಆ ಹೆಜ್ಜೆಯನ್ನು ಇಟ್ಟ ಬಳಿಕ ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದನು ಆದರೆ ಅವನ ಭಕ್ತಿ ಭಾವವನ್ನು ಮೆಚ್ಚಿ ಜಗದೊಡೆಯನಾದ ಶ್ರೀಹರಿಯು ಸೂರ್ಯ ಚಂದ್ರ ಇರುವವರೆಗೂ ಈ ಪವಿತ್ರವಾದ ದಿನವನ್ನು , ಎಲ್ಲರೂ ನಿನ್ನನ್ನು ಸ್ಮರಿಸಲೆಂದು ಆಶೀರ್ವದಿಸುತ್ತಾನೆ. ಹಾಗಾಗಿ ಎಲ್ಲರೂಈ ಹಬ್ಬವನ್ನು ಬಲಿಪಾಡ್ಯಮಿ ಎಂದು ಕರೆದು. ಪಟಾಕಿಗಳಿಂದ ಬಾನಲ್ಲ ಬೆಳಕಿ ನಿಂದ ಅಲಂಕರಿಸುವ ಈ ಸುದಿನವೇ ದೀಪಾವಳಿ.
ಈ ಹಬ್ಬದಲ್ಲಿ, ನಾವೆಲ್ಲರೂ ಪ್ರೀತಿ ಎಂಬ ಹಣೆತೆಗೆ, ವಿಶ್ವಾಸದ ಎಣ್ಣೆ ಹಾಗೂ ಮಮತೆ ಎಂಬ ಬತ್ತಿಯಿಂದ ಪರಿಶುದ್ಧವಾದ ಮನಸ್ಸಿನಿಂದ ಬೆಳಗಿಸಬೇಕು. ಕಾರಣ ಪ್ರೀತಿಯು ಆ ದೇವರು ಕೊಟ್ಟಿರುವ ಬಹುದೊಡ್ಡ ಆಸ್ತಿ.
ಸರ್ವೇಜನ ಸುಖಿನೋ ಭವಂತು.
ಭಾರ್ಗವಿ ಪಿ
ಬೆಂಗಳೂರು
