

ಚಿತ್ರದುರ್ಗ, ಕರ್ನಾಟಕ: ಮೈನ್ಸ್ ಸೇಫ್ಟಿ ಅಸೋಸಿಯೇಷನ್ ಕರ್ನಾಟಕ ವಲಯ-3 `ಗಣಿ ಸುರಕ್ಷತೆಯ ಸಪ್ತಾಹ 2023-24’ ಆಯೋಜಿಸಿದ್ದು ಅದನ್ನು ಡೈರೆಕ್ಟೊರೇಟ್ ಜನರಲ್ ಆಫ್ ಮೈನ್ಸ್ ಸೇಫ್ಟಿ(ಡಿಜಿಎಂಎಸ್) ಆಶ್ರಯದಲ್ಲಿ ವೇದಾಂತ ಲಿಮಿಟೆಡ್, ಐರನ್ ಓರ್ ಕರ್ನಾಟಕ, ಚಿತ್ರದುರ್ಗ ಇಲ್ಲಿ ಆಯೋಜಿಸಲಾಗಿತ್ತು.
ಗಣಿ ಸುರಕ್ಷತೆಯ ಸಪ್ತಾಹ 2023 ಪ್ರತಿಜ್ಞೆ ಮಾಡುವ ಕಾರ್ಯಕ್ರಮ ಮತ್ತು ಚಿತ್ರದುರ್ಗದ ವೇದಾಂತ ಕಬ್ಬಿಣದ ಗಣಿಯ ಔಪಚಾರಿಕ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು.
ಈ ಕಾರ್ಯಕ್ರಮವು ಗಣಿ ಸುರಕ್ಷತಾ ಸಪ್ತಾಹ 2023ರ ಅಧಿಕೃತ ಉದ್ಘಾಟನೆಯಾಯಿತು.
ಈ ಕಾರ್ಯಕ್ರಮದಲ್ಲಿ ಉದ್ಯಮದ ನಾಯಕರು, ಸುರಕ್ಷತೆಯ ವಕ್ತಾರರು, ಉದ್ಯೋಗಿಗಳು, ಕಾರ್ಮಿಕ ಸಂಘಟನೆಯ ಸದಸ್ಯರು ಮತ್ತು ಕಂಪನಿಯ ಉದ್ಯೋಗಿಗಳು ಭಾಗವಹಿಸಿದ್ದು ಗಣಿಗಾರಿಕೆ ಕಾರ್ಯಾಚರಣೆಗಳಲ್ಲಿ ಸುರಕ್ಷತೆಯನ್ನು ಉತ್ತೇಜಿಸುವ ಮತ್ತು ದೃಢಪಡಿಸುವ ತಮ್ಮಬದ್ಧತೆಯನ್ನು ಮರು ದೃಢೀಕರಿಸಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಮುಖರು: ಶ್ರೀ ಗಣೇಶ್ ಮೂರ್ತಿ, ಜನರಲ್ ಮ್ಯಾನೇಜರ್ ಮೆ.ಬನ್ನಾರಿಯಮ್ಮ ಶುಗರ್ಸ್ ಲಿ., ಶ್ರೀ ಶಶಾಂಕ್ ಪಾಟೀಲ್, ಮ್ಯಾನೇಜರ್ ಎಸ್.ಸಿ.ಬಿ. ಸ್ಟೋನ್ ಕ್ವಾರಿ, ಶ್ರೀಧನುಷ್, ಮೆಕ್ಯಾನಿಕಲ್ ಎಂಜಿನಿಯರ್, ಎಲ್ ಅಂಡ್ ಟಿ, ಪಿ. ಬಾಲ ಸುರೇಂದ್ರನಾಥ್, ಸೀನಿಯರ್ ಮ್ಯಾನೇಜರ್, ಮೆ.ವೆಸ್ಕೊ, ಶ್ರೀ ಶ್ರೀಶೈಲ ಗೌಡ, ಸಿಇಒ, ಐರನ್ ಓರ್ ಕರ್ನಾಟಕ, ಶ್ರೀ ಉಮಾಪತಿ. ಟಿ.ಆರ್. ಕಾರ್ಮಿಕ ಕಾನಯ, ಶ್ರೀ ವಿಜಯ್ ಮೆಹ್ತಾ- ಲಾಜಿಸ್ಟಿಕ್ಸ್ ಮುಖ್ಯಸ್ಥ, ಮತ್ತು ಶ್ರೀ ಸಂದೀಪ್ ನಾಯಕ್- ಐಒಕೆಯ ಆಪರೇಷನ್ಸ್(ಮೈನಿಂಗ್) ಮುಖ್ಯಸ್ಥರು.
ಗಣಿ ಸುರಕ್ಷತೆಯ ಸಪ್ತಾಹವು ಗಣಿಗಾರಿಕೆ ಉದ್ಯಮದಲ್ಲಿ ಸುರಕ್ಷತೆಯ ಕ್ರಮಗಳ ಪ್ರಾಮುಖ್ಯತೆಯ ಕುರಿತು ಅರಿವನ್ನು ಮೂಡಿಸುವ ವೇದಿಕೆಯಾಗಿ ಕೆಲಸ ಮಾಡುತ್ತದೆ ಮತ್ತು ಸುರಕ್ಷತೆಯ ನಿಯಮಗಳಿಗೆ ಅಸಾಧಾರಣ ಕೊಡುಗೆಗಳನ್ನು ಗುರುತಿಸುತ್ತದೆ. ಈ ಗಣಿ ಸುರಕ್ಷತೆಯ ಸಪ್ತಾಹ 2023-24ರ ವಿಷಯ `ಸೇಫ್ಟಿ ಟುಗೆದರ್: ಸ್ಟ್ರಾಂಗರ್, ಸೇಫರ್, ಸ್ಮಾರ್ಟರ್’ ಎಂದಿದೆ.
ಸುರಕ್ಷತೆಯ ಕ್ರಮಗಳನ್ನು ಕೈಗೊಳ್ಳಲು ಪ್ರತಿಜ್ಞೆ ಮಾಡಿದ್ದೇ ಅಲ್ಲದೆ ಕಾರ್ಮಿಕರು ಉದ್ಯೋಗಿಗಳೊಂದಿಗೆ `ಉದ್ಯೋಗದ ಸ್ಥಳದಲ್ಲಿ ಸುರಕ್ಷತೆ’ ಎಂಬ ವಿಷಯದ ಮೇಲೆ ಘೋಷಣೆ ಬರೆಯುವ ಮತ್ತು ಪೋಸ್ಟರ್ ತಯಾರಿಸುವ ಸ್ಪರ್ಧೆಯಲ್ಲಿ ಭಾಗವಹಿಸಿದರು ಮತ್ತು ಎಲ್ಲ ಘೋಷವಾಕ್ಯ ಮತ್ತು ಪೋಸ್ಟರ್ ಗಳನ್ನು ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದರು.
ವೇದಾಂತ ಐರನ್ ಓರ್ ಕರ್ನಾಟಕದ ಸಿಇಒ ಶ್ರೀಶೈಲ ಗೌಡ, “ನಾವು ವೇದಾಂತದಲ್ಲಿ ನಮ್ಮ ಉದ್ಯೋಗಿಗಳು, ಕಾರ್ಮಿಕರು ಮತ್ತು ಯೂನಿಯನ್ ಸದಸ್ಯರ ಸುರಕ್ಷತೆ ಮತ್ತು ಭದ್ರತೆಗೆ ಆದ್ಯತೆ ನೀಡುತ್ತೇವೆ ಮತ್ತು ನಮ್ಮ ಕಬ್ಬಿಣದ ಗಣಿಗಳಲ್ಲಿ ಗಣಿಗಾರಿಕೆ ಸುರಕ್ಷತಾ ಸಪ್ತಾಹ 2023-24 ಉದ್ಘಾಟಿಸುತ್ತಿರುವುದು ಸುರಕ್ಷಿತ ಕೆಲಸದ ಪರಿಸರಕ್ಕೆ ನಮ್ಮ ಬದ್ಧತೆಯನ್ನು ಮರು ದೃಢೀಕರಿಸಿದೆ. ಸುರಕ್ಷತೆಯು ಬರೀ ರೂಢಿಯಲ್ಲ; ಅದು ಪ್ರತಿ ಕಾರ್ಯಾಚರಣೆಯಲ್ಲೂ ನಮಗೆ ಮಾರ್ಗದರ್ಶನ ನೀಡುವ ಮನಸ್ಥಿತಿ. ಒಟ್ಟಿಗೆ ನಾವು ವೇದಾಂತ ಐರನ್ ಓರ್ ಕರ್ನಾಟಕದಲ್ಲಿ ಸುರಕ್ಷತೆಯನ್ನು ಜೀವನ ವಿಧಾನವಾಗಿಸೋಣ” ಎಂದರು.
ಮತ್ತಷ್ಟು ಮಾಹಿತಿಗೆ
ಸಂಧ್ಯಾ ಮಲಿಕ್
ಚೀಫ್ ಕಾರ್ಪೊರೇಟ್ ಕಮ್ಯುನಿಕೇಷನ್ ಆಫೀಸರ್
ಸೆಸಾ ಗೋವಾ