ದಿನಾಂಕ 12 – 12, 2023ರ ಮಂಗಳವಾರ ವನಕಲ್ಲು ಗುರುಮಲ್ಲೇಶ್ವರ ಮಹಾ ಸಂಸ್ಥಾನ ಮಠ ದಾಬರ್ ಸ್ಪೇಟೆ ಮಾರ್ಗದಲ್ಲಿರುವ ಮಠದಲ್ಲಿ ಆಯೋಜಿಸಿದ್ದ ಸಂಸ್ಕೃತೋತ್ಸವ ಸಮಾರಂಭಕ್ಕೆ ಆಗಮಿಸುವಂತಹ ಭಕ್ತಾದಿಗಳಿಗೆ ಕಾಲುದಾರಿಯ ಸ್ವಚ್ಛತಾ ಶ್ರಮದಾನದಲ್ಲಿ ಎನ್ಎಸ್ಎಸ್ ಸ್ವಯಂ ಸೇವಕರು ವಿಶೇಷ ಸೇವೆಯನ್ನು ನೀಡಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಶಾಸಕ ವಿ. ಸೋಮಣ್ಣನವರ ಮೆಚ್ಚುಗೆಗೆ ಪಾತ್ರರಾದರು. ಶ್ರೀಮಲಯ ಶಾಂತಿವೀರ ಸ್ವಾಮಿ ಶ್ರೀರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಡಾ.ಬಸವ ರಮಾನಂದ ಸ್ವಾಮಿಗಳ ನೇತೃತ್ವದಲ್ಲಿ ಲಕ್ಷದ್ವೀಪಗಳ ಸಂಸ್ಕೃತಿಯಲ್ಲಿ ಸ್ವಯಂ ಸೇವಕರು ಸಾಂಸ್ಕೃತಿಕ ಸೇವೆಗೆ ಭಾಜನರಾದರು ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯದ ಎನ್ಎಸ್ಎಸ್ ಅಧಿಕಾರಿ ಶ್ರೀ ಗಿರೀಶ್ ವೈ ಹಾಗೂ ಶ್ರೀಗಿರೀಶ ಪಿ ಹೆಚ್ ಅತಿಥಿಗಳಾಗಿ ಆಗಮಿಸಿ ಸೇವಾಕಾರ್ಯವನ್ನು ಯಶಸ್ವಿಗೊಳಿಸಿದರು. ಪ್ರಾಂಶುಪಾಲರಾದ ಡಾ. ಶೀಲಾ ದೇವಿಎಸ್ ಮಳಿಮಠರವರು ಲಕ್ಷದ್ವೀಪದ ಸಮಾರಂಭಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಕಾಲುದಾರಿಯನ್ನು ಸ್ವಚ್ಛಗೊಳಿಸಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಬರುವುದಕ್ಕೆ ಸಾಧ್ಯವಾಯ್ತು ಎ೦ದು ಎನ್ಎಸ್ಎಸ್ ಘಟಕವನ್ನು ಅಭಿನಂದಿಸಿದರು. ಸದಸ್ಯರಾದ ವಾಣಿಜ್ಯ ಶಾಸ್ತ್ರವಿಭಾಗದ ಉಪ ನ್ಯಾಸಕರಾದ ಕು ರುಶಿಕಾ ಹಾಗೂ ಕುನಿಖಿತಾ ಅವರನ್ನು ಸನ್ಮಾನಿಸಲಾಯ್ತು. ಒಟ್ಟು 36 ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೇವಾ ಕಾರ್ಯದಲ್ಲಿ ತೊಡಗಿ ಯುವಜನಾಂಗಕ್ಕೆ ಮಾದರಿಯಾದರು. ರಾಷ್ರೀಯ ಸೇವಾ ಶಿಬಿರದಲ್ಲಿ ಪಾಲ್ಗೊಂಡಿದ್ದ ತೃತೀಯ ಬಿಕಾಂ ವಿದ್ಯಾರ್ಥಿ ಹಾಗೂ ಸಂಯೋಜಕ ಮಂಜುನಾಥ ಅವರನ್ನು ಸನ್ಮಾನಿಸಲಾಯ್ತು ಇದೇ ಸಂದರ್ಭದಲ್ಲಿ ಯುವ ಮತದಾರರಿಗೆ ಮತದಾನದ ಸಾಕ್ಷರತೆಯ ಅರಿವು ಮಾಡಿಸಿದ್ದು ವಿಶೇಷವಾಗಿತ್ತು

Leave a Reply

Your email address will not be published. Required fields are marked *