









ಇದೇ ಶಾಲೆಯಲ್ಲಿ ಸತತ 35 ವರ್ಷಗಳು ಸೇವೆ ಸಲ್ಲಿಸಿದಂತಹ ಜಾನಕಿ ಶಿಕ್ಷಕಿ ಮಾತನಾಡುತ್ತಾ ಇದು ನನಗೆ ಕೇವಲ ಶಾಲೆಯಲ್ಲ ಇದು ನನಗೆ ಮನೆ ಇದು ನನ್ನ ಕುಟುಂಬ ನನ್ನ ಮನೆಯಲ್ಲಿ ಏನೇ ಸಮಸ್ಯೆ ಆದರೂ ಆ ಸಮಸ್ಯೆಗೆ ಸ್ಪಂದಿಸುವಂತಹ ಕೆಲಸ ಈ ವಿದ್ಯಾ ಸಂಸ್ಥೆ ಮಾಡುತ್ತ ಬಂದಿದೆ ನಾನು ಯಾವ ಜನ್ಮದಲ್ಲಿ ಪುಣ್ಯ ಮಾಡಿದೆನೋ, ಇಂತಹ ವಿದ್ಯಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ನನಗೊಂದು ಅವಕಾಶ ಮಾಡಿಕೊಟ್ಟರು. ಪ್ರಾರಂಭದಲ್ಲಿ ಶಾಲೆಗೆ ಬಂದಾಗ ನನ್ನನ್ನ ತಿದ್ದಿ ತಿಡಿದಂತಹ ರಾಜು ಸರ್ ಹಾಗೂ ಪ್ರಾಂಶುಪಾಲರಾದ ಪ್ರಮೀಳಾ ರಾಜೇಶ್ ಅವರಿಗೆ ನಾನು ಅನಂತ ಧನ್ಯವಾದಗಳು ಸಲ್ಲಿಸುತ್ತೇನೆ. ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಪಿ.ಸೀನ ಕೆಎಎಸ್ ಕರ್ನಾಟಕ ಸರ್ಕಾರ ಮಾತನಾಡಿ ಕರ್ನಾಟಕದಲ್ಲಿ ಅನೇಕ ಶಾಲೆಗಳಿದವೇ ಆದರೆ ಬಡವರಿಗಾಗಿ ಬಡವರ ವಿದ್ಯಾಭ್ಯಾಸಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟಿರುವುದು ಬಹಳ ಎಮ್ಮೆ ಎನಿಸುತ್ತಿದೆ ಇಂತಹ ರಾಜು ಸರ್ ಅವರ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಬಹಳ ಸಂತೋಷ ವಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾರ್ಖಂಡಯ್ಯ ಮಾಜಿ ಅಧ್ಯಕ್ಷರು ಸಿಎಂಸಿ, ಡಾ. ಡೆಕ್ಸ್ಟರ್ ಎಸ್ ಮಾಬೇನ್, ಉಪ ಕಾರ್ಯದರ್ಶಿಗಳು ಸಿಎಸ್ಐ ಕರ್ನಾಟಕ ಸೆಂಟ್ರಲ್ ಡೈಯ್ಸ, ಪ್ರೊಫೆಸರ್ ಕೆಂಪೇಗೌಡ, ಮನೋರಂಜನ್, ಫೌಂಡರ್ ಚೇರ್ಮನ್ ಆಫ್ ಲೋಗೋ ಇಂಟರ್ನ್ಯಾಷನಲ್ ಸ್ಕೂಲ್ ಕೋಲಾರ್
ಡಾ. ಬಿ ಆರ್ ಲಕ್ಷ್ಮಣ್, ಪ್ರಾಧ್ಯಾಪಕರು ಹಾಗೂ ವಕೀಲರು, ಡಾ. ರಾಮಚಂದ್ರ ಅಧ್ಯಕ್ಷರು
KASMO, ಪ್ರಧಾನ ಕಾರ್ಯದರ್ಶಿ ಸುರೇಶ್ ವಿ, ಚಿಕ್ಕ ಹನುಮೇಗೌಡ ಖಜಾಂಚಿ ಹಾಗೂ ಆಕ್ಸ್ಫರ್ಡ್ ವಿದ್ಯಾ ಸಂಸ್ಥೆಯ ಎಲ್ಲ ಬೋಧಕ ವರ್ಗ ಮತ್ತು ಬೋಧಕೇತರ ವಿಶೇಷವಾಗಿ ಎಲ್ಲ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಹಾಗೂ ಪೋಷಕರು ಸಾವಿರಾರು ವಿಕ್ಷಕರು ಉಪಸ್ಥಿತರಾಗಿದ್ದು ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು .