- ಧಾರವಾಡ ಪೋಲಿಸ್ ಕಮಿಷನರೇಟ್ ಹುಬ್ಬಳ್ಳಿ ಶಹರದ ಗೋಕುಲ ರಸ್ತೆಯಲ್ಲಿರುವ ಪೋಲಿಸ್ ಠಾಣೆಯ ಸಹಾಯಕ ಪೋಲಿಸ್ ಇನ್ಸ್ಪೆಕ್ಟರ್ ಜಿ. ಸಿ. ರಜಪೂತ ಮಾತನಾಡುತ್ತ ಸೈಬರ್ ಕ್ರೈಮ್ ಗಳಾದಾಗ ಹಣ ವಂಚನೆ, ಕಾಗದ ಪತ್ರ ವ್ಯವಹಾರ ಮೋಸ ಮುಂತಾದ ಪ್ರಕರಣಗಳಿಗೆ 193೦, ಕಳ್ಳತನ, ದರೋಡೆ, ಜಗಳ ಪ್ರಕರಣಗಳಿಗೆ 112 ಹಾಗೂ ಮಕ್ಕಳ ಹಕ್ಕುಗಳ ಉಲ್ಲಂಘನೆ ಆದಾಗ 1೦98 ಸಂಖ್ಯೆಯ ಸಹಾಯವಾಣಿಗೆ ಕರೆಮಾಡಿ ತ್ವರಿತ ಪರಿಹಾರ ಪಡೆಯಬೇಕೆಂದು ಸಲಹೆ ನೀಡಿದರು. ಅಲ್ಲದೆ ಮಕ್ಕಳು ಅಪರಾಧಗಳನ್ನು ಮಾಡಿದರೆ ಅವರಿಗೂ ಸಹ ರಿಮಾಂಡ್ ಹಾಲ್ ನಲ್ಲಿ ಹಾಕಲಾಗುತ್ತದೆ ಹಾಗಾಗಿ ಯಾರು ಕೆಟ್ಟ ಕೆಲಸ ಮಾಡದೆ ಸಂವಿಧಾನ ಆಶಯದಂತೆ ಸರಕಾರ ನೀಡಿರುವ ಉಚಿತ ಶಿಕ್ಷಣ ಪಡೆದು ಉತ್ತಮ ವ್ಯಕ್ತಿಗಳಾಗಿ ಎಂದು ಹಾರೈಸಿದರು. ರಾಜ್ಯ - ರಾಷ್ಟ್ರಗಳ ವ್ಯತ್ಯಾಸ ಇಲ್ಲದೆ ಅನಾದಿ ಕಾಲದಿಂದಲೂ ಅಪರಾಧಗಳು, ಮೋಸ, ವಂಚನೆಗಳು ಸಮಾಜದ ಮುಗ್ದ ಜನರ ನಿದ್ದೆಗೆಡಿಸಿವೆ. ಅತ್ಯಾಚಾರ, ಹತ್ಯಾಚಾರ, ಸುಲಿಗೆ, ಜೀವ ಬೆದರಿಕೆ, ಬಾಲ್ಯವಿವಾಹ, ಬಾಲ ಕಾರ್ಮಿಕತೆ, ಭ್ರೂಣ ಹತ್ಯೆ, ಜೀತಗಾರಿಕೆ, ದಾಸ್ಯ, ಡ್ರಗ್ಸ್ ಮಾಪಿಯಾ, ಜೂಜು, ಮಾದಕ ವಸ್ತುಗಳ ಸೇವನೆ, ಬಾಂಬ್ ಬೆದರಿಕೆ, ಭಯೋತ್ಪಾದನೆ, ವರದಕ್ಷಣೆ ಕಿರುಕುಳ, ಯ್ಯಾಸಿಡ್ ಹಾವಳಿ ಈ ರೀತಿ ಸಾವಿರಾರು ಹೀನ ಕೃತ್ಯಗಳನ್ನು ಕೇಲವರು ಮಾಡುತ್ತಾ ಬಂದಿದ್ದಾರೆ. ಇದರಿಂದ ಜನ ಸಾಮಾನ್ಯರ ಬದುಕು ಜರ್ಜರಿತವಾಗುತ್ತದೆ. ಇದನ್ನು ಸರಿದೂಗಿಸಿ ಶಾಂತಿ ಸ್ಥಾಪಕನೆಗಾಗಿ ಬುದ್ಧ, ಬಸವ, ಅಂಬೇಡ್ಕರ್, ಗಾಂಧಿಜಿ ಅನೇಕ ಮಹಿಮರು ಸಮಾಜ ಸುಧಾರಣೆ ಮಾಡಿದ್ದಾರೆ. ಆದಾಗ್ಯೂ ದಿನೇ ದಿನೇ ಅಪರಾಧಗಳು ಹೆಚ್ಚಳವಾಗುತ್ತಿದೆ ಹಾಗಾಗಿ ಪೋಲಿಸ್ ಇಲಾಖೆಗೆ ಅಪರಾಧಗಳನ್ನು ತಡೆಲು ಮತ್ತು ತಪಿಸ್ಥತರಿಗೆ ಶಿಕ್ಷೆ ನೀಡಲು ವಹಿಸಲಾಗಿದೆ ಎಂದು ಶಿಕ್ಷಕ ಸಾಹಿತಿ ಸುಭಾಷ್ ಚವ್ಹಾಣ ಸ್ಪಷ್ಟಪಡಿಸಿದರು. ಮುಖ್ಯ ಶಿಕ್ಷಕರಾದ ಹೆಚ್. ಬಿ. ಕೊರವರ ರವರು ಮಾತನಾಡುತ್ತ ಆರಕ್ಷಕ ಬಂಧುಗಳು ಅಪರಾಧ ತಡೆ ಮಾಸಾಚರಣೆ ನಿಮಿತ್ತ (೨೦ ಡಿಸೆಂಬರ್ ೨೦೨೩ರ) ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಮಂಜುನಾಥ ನಗರಕ್ಕೆ ಬಂದು ಅಪರಾಧಗಳನ್ನು ಮಾಡುವುದರಿಂದ ಆಗುವ ಕೆಟ್ಟಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿ, ಸನ್ನಡತೆಗೆ ಮಾರ್ಗದರ್ಶನ ಮಾಡಿದ್ದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಪೋಲಿಸರು ಮೊದಲಿಗೆ ನೋಟ ಬೀರಿ ಚಲನವಲನಗಳನ್ನು ಪರಿಶೀಲಿಸಿ ಆನಂತರ ಲಾಠಿಯಿಂದ ಶಿಕ್ಷಿಸಿ ಕಳ್ಳಕಾಕರ ಹೆಡೆಮೂರಿ ಕಟ್ಟಿ, ಸುರಕ್ಷಿತ ಸಮಾಜಕ್ಕೆ ಅಪಾರ ಕೋಡುಗೆ ನೀಡುತ್ತಾರೆಂದು ಪ್ರಶಂಸೆ ಸಲ್ಲಿಸಿದರು. ಮುಖ್ಯ (ಹೆಡ್ ಕಾನ್ಸ್‌ಟೇಬಲ್) ಆರಕ್ಷಕರಾದ ವಸಂತ ಗುಡಗೇರಿ, ಆರಕ್ಷಕರಾದ ಸುರೇಶ್ ಕೋಲಿ, ಪ್ರತಾಪರವರು ವೇದಿಕೆಯಲ್ಲಿ ಇದ್ದರು. ಶಾಲಾ ಹಿರಿಯ ಶಿಕ್ಷಕಿಯರಾದ ಚೌಕಿಮಠ, ಚಕ್ರಸಾಲಿ, ವೇದಾ ನಾಗನೂರ, ಸೈನಾಭಿ ನದಾಫ, ರೂಪ ಹೆಬ್ಬಳ್ಳಿ ಇತರರು ಉಪಸ್ಥಿತರಿದ್ದರು. ಡಿಸೆಂಬರ್ ನಲ್ಲಿ ಆಯೋಜಿಸುವ ಅಪರಾಧ ತಡೆ ಮಾಸಾಚಾರಣೆಯ ಕಾರ್ಯಕ್ರಮವನ್ನು ಸುಭಾಷ್ ಚವ್ಹಾಣರವರು ಅಪರಾಧಗಳನ್ನು ತಡೆಗಟ್ಟುವಲ್ಲಿ ಪೋಲಿಸರ ಕಾರ್ಯವೈಖರಿಯ ಮೇಲೆ ಬೆಳಕು ಚೆಲ್ಲುವ 'ಮಗಧೀರ' ಎಂಬ ಸ್ವರಚಿತ ಕವಿತೆಯನ್ನು ವಾಚಿಸಿ, ಆರಕ್ಷಕ ಬಂಧುಗಳ ಮೆಚ್ಚುಗೆ ಪಡೆದು, ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *