


ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯರಾಜಾಜಿನಗರದ ಮತದಾನ ಸಾಕ್ಷರತಾ ಸಂಘವು ದಿನಾಂಕ 12- 1, 2024 ರ ಶುಕ್ರವಾರ 1-00 ಗಂಟೆಗೆ ರಾಜಾಜಿನಗರದ ಬಿಬಿಎಂಪಿ ತಂಡದ ಸಹಯೋಗದೊಂದಿಗೆ ನಮ್ಮ ಇಎಲ್ ಸಿ ವಿದ್ಯಾರ್ಥಿಗಳಿಗೆ ಇವಿಎಂ ಹಾಗೂ ವಿ ವಿ ಪ್ಯಾಟ್ ನ ಪ್ರಾತ್ಯಕ್ಷಿಕೆಯನ್ನು ದರ್ಶಿಸಿ ಮತದಾನದ ಬಗ್ಗೆ ಅರಿವು ಮಾಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪ್ರತಿಯೊಬ್ಬರು ಮತದಾನದ ಹಕ್ಕನ್ನು ಜಾಗೃತವಾಗಿ ತಿಳಿಯಬೇಕೆಂಬಸದಾಶಯದೊಂದಿಗೆ ಅಧಿಕಾರಿಗಳು ಪ್ರಾತ್ಯಕ್ಷಿಕೆಯ ಮೂಲಕ ಜಾಗೃತಿ ಮಾಡಿಸುವ ಕಾರ್ಯಕ್ರಮ ಇದಾಗಿತ್ತು. ಪ್ರಾಂಶುಪಾಲರಾದ ಡಾ. ಶೀಲಾ ದೇವಿ ಎಸ್ ಮಳಿಮಠ ಅವರು ಮತದಾನ ಸಾಕ್ಷರತೆಕ್ಷರತೆಯುವ ಸಮುದಾಯಕ್ಕೊಂದು ವರ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದುಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀ ಶಶಿಕಾಂತ್ ಕುಲಕರ್ಣಿ ಅವರು ಮತದಾನ ಹಾಗೂ ವಿವಿ ಪ್ಯಾಟ್ ಬಗ್ಗೆ ಮಹತ್ವಪೂರ್ಣ ಸಂದೇಶ ಕೊಟ್ಟರು ಎ ಆರ್ ಓ ಶ್ರೀಕೃಷ್ಣ ಎಸ್ ಹಾಗೂ ಎಇ ಆರ್ ಓ ಶ್ರೀಮತಿ ಭಾರತಿ ಹೆಚ್ ಎನ್ ಮತ್ತು ನೋಂದಣಿ ಸಹಾಯಕರಾದ ಶ್ರೀ ಅಜಿತ್ ಅವರು ವಿದ್ಯಾರ್ಥಿಗಳಿಗೆ ಸವಿವರವಾಗಿ ಮತದಾನದ ಜಾಗೃತಿಗೆ ಚಾಲನೆ ನೀಡಿ ಇವಿಎಂ – ವಿವಿ ಪ್ಯಾಟ್ ಬಗ್ಗೆ ಯುವಕರಿಂದಲೇ ಪ್ರಯೋಗಿಸಿ ಅರಿವು ಮಾಡಿಸಿದರು. ಮತದಾನ ಸಾಕ್ಷರತೆ ಸಂಘದ ಸಂಚಾಲಕರಾದ ಕುನಿಖಿತಾ ಕುರುಷಿಕಾ – ಕು. ಐಶ್ವರ್ಯ – ಕುಶರ್ಮಿಳಾ ಎಸ್ ಗಡ್ಡಿ ಕಾರ್ಯಕ್ರಮ ಸಂಘಟಕರಾದ ಶ್ರೀಗಿರೀಶ ವೈ- ಶ್ರೀಗಿರೀಶ ಪಿ ಹೆಚ್-ಇಎಲ್ ಸಿ ಅಂಬಾಸಿಡರ್ ಕು.ಮಂಜುನಾಥ ಕು.ಶೃತಿ ಕು ಶರಣಪ್ಪ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಇದರಿಂದ ವಿದಾರ್ಥಿ ವಿದ್ಯಾರ್ಥಿನಿಯರಿಗೆ ಹೆಚ್ಚಿನ ಪ್ರಯೋಜನವಾಗಿ ಮತದಾನದಲ್ಲಿ ಎಪಿಕ್ ಕಾರ್ಡ್ ಎಷ್ಟು ಮುಖ್ಯ ಎಂಬ ವಿವೇಕವನ್ನು ಹೆಚ್ಚಿಸಿಕೊಂಡರು. ಇದು 161ನೇ ಸ್ವಾಮಿ ವಿವೇಕಾನಂದ ಜಯಂತಿಯ ಯುವಸಪ್ತಾಹದ ಪ್ರಸ್ತುತಿ ಆಗಿತ್ತು.