ಕೋಲಾರ, ಜ.16.ಕೇಂದ್ರ ಸರ್ಕಾರ ರೂಪಿಸಿರುವ ಸಾರಥಿ ಸುರಕ್ಷಾ ಜಾಗೃತ್ ಕಾನೂನು ವಾಣಿಜ್ಯ ವಾಹನ ಚಾಲಕರಿಗೆ ಮಾರಕವಾಗಿದ್ದು,ಜನ ವಿರೋಧಿಯಾಗಿದೆ. ಈ ಕಾನೂನು ಅಡಿಯಲ್ಲಿ ವಾಹನ ಚಾಲಕರಿಗೆ 10 ವರ್ಷಗಳ ಜೈಲು ಹಾಗೂ 7 ಲಕ್ಷ ದಂಡ ವಿಧಿಸಲು ಅವಕಾಶವಿದೆ.ತಕ್ಷಣ ಕೇಂದ್ರ ಸರ್ಕಾರ ಕಾನೂನು ರದ್ದು ಪಡಿಸುವಂತೆ ಆಗ್ರಹಿಸಿ ಅನಿರ್ದಿಷ್ಟ ಕಾಲ ಮುಷ್ಕರವನ್ನು ಇದೇ ತಿಂಗಳ 17 ರಿಂದ ನಡೆಸಲು ತೀರ್ಮಾನ ಕೈಗೊಂಡಿದ್ದು, ಈ ಮುಷ್ಕರಕ್ಕೆ ಎಲ್ಲಾ ತರಹದ ವಾಣಿಜ್ಯ ವಾಹನ ಮಾಲೀಕರ ಸಂಘಗಳು ಹಾಗೂ ಚಾಲಕರ ಸಂಘಗಳು ಸಂಪೂರ್ಣ ಬೆಂಬಲ ಸೂಚಿಸುತ್ತಿದ್ದು, ಬುಧವಾರವಾರದಿಂದ ಯಾವುದೇ ವಾಣಿಜ್ಯ ವಾಹನಗಳು ರಸ್ತೆಗೆ ಇಳಿಯುವುದಿಲ್ಲವೆಂದು ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಕುಮಾರ್ ತಿಳಿಸಿದರು.

ಕೋಲಾರ ಜಿಲ್ಲಾ ಲಾರಿ ಮಾಲೀಕರ ಸಂಘದ ಕಚೇರಿಯಲ್ಲಿ ಕರೆದಿದ್ದ ವಾಣಿಜ್ಯ ವಾಹನ ಮಾಲೀಕರ ಹಾಗೂ ಚಾಲಕರ ಪೂರ್ವ ಭಾವಿಸಭೆಯಲ್ಲಿ ಅವರು ಮಾತನಾಡಿ ಕೇಂದ್ರ ಸರ್ಕಾರ ರೂಪಿಸಿರುವ ಮಾರಕವಾದ ಕಾನೂನು ರದ್ದುಪಡಿಸಬೇಕು,ಶಿಕ್ಷೆಯ ಅವಧಿ ಹಾಗೂ ದಂಡವನ್ನು ಕಡಿತಗೊಳಿಸಬೇಕು,ರಾಜ್ಯ ಸರ್ಕಾರ ರಾಜ್ಯದ ಗಡಿಗಳಲ್ಲಿರುವ ಆರ್.ಟಿ.ಓ.ಚೆಕ್ ಪೋಸ್ಟ್ ಗಳನ್ನು ರದ್ದಪಡಿಸಬೇಕು,ಕಪ್ಪು ಪಟ್ಟಿಯಲ್ಲಿರುವ ವಾಣಿಜ್ಯ ವಾಹನಗಳ ಎಫ್.ಸಿ,ಪರ್ಮಿಟ್ ಗಳನ್ನು ಕಾಲ ಕಾಲಕ್ಕೆ ಮಾಡಿ ಕೊಡಬೇಕು,ಪೋಲಿಸ್ ಇಲಾಖೆ ವಾಣಿಜ್ಯ ವಾಹನಗಳು ಬೆಂಗಳೂರು ಸಿಟಿ ಪ್ರವೇಶಕ್ಕೆ ಸಮಯ ನಿರ್ಭಂದ ಹೇರಬಾರದು,
ವಾಹನ ಅಪಘಾತ ಆದಾಗ ಚಾಲಕರ ಲೈಸೆನ್ಸ್ ರದ್ದು ಪಡಿಸಬಾರದು,ಹೊರ ರಾಜ್ಯಗಳ ವಾಣಿಜ್ಯ ವಾಹನಗಳು ಅಫಘಾತದ ಆದಾಗ ವಾಹನ ಚಾಲಕರ ಬಿಡುಗಡೆಗೆ ಸ್ಥಳೀಯರ ಜಾಮೀನು ಕೇಳಬಾರದು ಮೇಲ್ಕಂಡ ವಾಹನ ಚಾಲಕರ ಹಾಗೂ ಮಾಲೀಕರ ಬೇಡಿಕೆಗಳನ್ನು ತಕ್ಷಣ ಕೇಂದ್ರ, ರಾಜ್ಯ ಮತ್ತು ಪೋಲಿಸ್ ಇಲಾಖೆ ಪರಗಣಿಸಿ ಈಡೇರಿಸುವಂತೆ ಒತ್ತಾಯಿಸಿದರು.

ಸಾರ್ವಜನಿಕರು,ವಾಹನ ಚಾಲಕರು ಹಾಗೂ ವಾಹನ ಮಾಲೀಕರು ನಮ್ಮ ಪ್ರತಿಭಟನೆಗೆ ಹೆಚ್ಚಿನ ಬೆಂಬಲ ನೀಡಬೇಕೆಂದು ಅವರು ಮನವಿ ಮಾಡಿದರಲ್ಲದೆ ಯಾವುದೇ ಅಹಿತಕರ ಘಟನೆಗಳು ನಡೆಯಲು ಅವಕಾಶ ನೀಡಬಾರದೆಂದು ಕೋರಿದರು.

ಸಭೆಯ ನಂತರ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಟೆಂಪೋ ಮಾಲೀಕರ ಸಂಘದ ಜಿಲ್ಲಾ ಅಧ್ಯಕ್ಷ ಜಹೀರ್ ಅಹ್ಮದ್, ಕಾರ್ಯದರ್ಶಿ ಎ.ಜಿ.ಸೋಮಣ್ಣ,ಖಜಾಂಜಿ ಆರ್.ಶಫಿಯುಲ್ಲಾ,
ಎಂ.ಟಿ.ಡಿ.ಖಲೀಲ್,ನಯಾಜ್ ಫಾಷ,ರಿಯಾಜ್ ಖಾನ್,ಸಿರಾಜ್ ಖಾದಲೀ ಪುರ,ಗದ್ದಾ ಬಾಷ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *