ಕೋಲಾರ : ಕಲ್ಬುರ್ಗಿ ಜಿಲ್ಲೆಯ ಕೋಟನೂರು ಗ್ರಾಮದಲ್ಲಿ ನಿನ್ನೆ ರಾತ್ರಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ ಬಿ, ಆರ್, ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಕೀಳು ಮಟ್ಟದ ಅವಮಾನ ಎಸಗಿದ ದುಷ್ಕವಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವೇಮಗಲ್ ಪೋಲಿಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ವೆಂಕಟೇಶ್ ರವರಿಗೆ ಭೀಮ ವಾದ ಕರ್ನಾಟಕ ದಲಿತ ಸಂಘರ್ಷ ಸಮಿತಿಯವರು ಮನವಿ ಪತ್ರ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ವೇಮಗಲ್ ಪಟ್ಟಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ವಾದ ಸಂಘಟನೆ ರಾಜ್ಯ ಸಂಘಟನಾ ಸಂಚಾಲಕರಾದ ಮೇಡಿಹಾಳ ಚಂದ್ರಶೇಖರ್ ಮಾತನಾಡಿ ಅಂಬೇಡ್ಕರ್ ರವರು ಒಂದು ಜಾತಿಗೆ ಸೇರಿದವರಲ್ಲ ಅಥವಾ ಒಂದು ಜಾತಿಗೆ ಸಂವಿಧಾನ ಕೂಡ ಬರೆದಿಲ್ಲ ದೇಶದಲ್ಲಿರುವ ಎಲ್ಲಾ ಜಾತಿ ಜನಾಂಗಕ್ಕೂ ಸಂವಿಧಾನವನ್ನು ಬರೆದಿದ್ದಾರೆ ಇದನ್ನು ಸಹಿಸದ ಕೆಲ ಕಿಡಿಗೇಡಿಗಳಿಂದ ಸುಮಾರು ವರ್ಷಗಳಿಂದ ದೇಶದಲ್ಲಿ ಅಂಬೇಡ್ಕರ್ ಅವರ ಬಾವ ಚಿತ್ರಕ್ಕೆ ಅಪಮಾನ ಎಸುಗುತ್ತಾ ಬಂದಿದ್ದಾರೆ.
ಅಂಬೇಡ್ಕರ್ ರವರ ಸಂವಿಧಾನ ಬಳಸಿಕೊಂಡು ದೇಶದಲ್ಲಿ ಸವಲತ್ತು ಪಡೆಯುತ್ತಾರೆ ಸರ್ಕಾರಿ ಕೆಲಸಕ್ಕೆ ಸೇರುತ್ತಾರೆ ಆರ್ಥಿಕತೆಯಲ್ಲಿ ಕೂಡ ಬರುತ್ತಾರೆ ಆದರೆ ಅಂಬೇಡ್ಕರ್ ಮಾತ್ರ ಬೇಡ ಇದು ನ್ಯಾಯವೇ ? ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ದಲಿತರು ಉಳಿಯುತ್ತಾರೆ ಎಂದು ರಾಜಕಾರಣಿಗಳು ಮಾತಾಡ್ತಾರೆ ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸರ್ಕಾರದಲ್ಲಿರುವ ಗೃಹ ಮಂತ್ರಿಗಳು ಕೂಡ ದಲಿತರು ಯಾಕೆ ಇಂತಹ ದಲಿತ ಮುಖಂಡರ ಪುತ್ತಳಿಗಳ ಮೇಲೆ ಕಿಡಿಕೇಡಿಗಳು ನಡೆಸುವ ಹೀನ ಕೃತ್ಯಗಳನ್ನು ಮಾಡುವವರನ್ನ ಬಂಧಿಸಿ ಶಿಕ್ಷೆ ಕೊಡುತ್ತಿಲ್ಲ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಕೂಡ ನಾನು ಒಬ್ಬ ದಲಿತ ಎಂದು ಹೇಳಿದ್ದಾರೆ ಇದು ಸಂತೋಷದ ಸಂಗತಿ ಆದರೆ ರಾಜ್ಯದಲ್ಲಿ ರಾಷ್ಟ್ರೀಯ ದಲಿತರ ಪುತ್ತಳಿಗಳ ಮೇಲೆ ನಡೆಯುವ ಕೃತ್ಯಗಳನ್ನ ನಿಲ್ಲಿಸುವುದರ ಮುಖಾಂತರ ಮತ್ತು ಕೃತ್ಯ ನಡೆಸಿದ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಂ ವಿ ರಮೇಶ್, ತಿಪ್ಪೇನಹಳ್ಳಿ ರಮೇಶ್, ಗುರುಸ್ವಾಮಿ, ಜಗದೀಶ, ವೆಂಕಟೇಶ್, ಮುನಿರಾಜು, ಶಾಂತಕುಮಾರ್, ಸುನಿಲ್, ಕುಪೇಂದ್ರ, ಅರುಣ್ ಕುಮಾರ್, ಕಾಂತರಾಜ್, ಪ್ರಕಾಶ್, ಮುನಿಕೃಷ್ಣ, ಮುನಿಯಪ್ಪ, ಕುರುಗಲ್ ಮುರಳಿ, ನಾರಾಯಣಪ್ಪ, ಹಾಗೂ ಉಪಸ್ಥಿತರಿದ್ದರು.
