ವರದಿ -ಸದಾನಂದ

ಶಿಡ್ಲಘಟ್ಟ,
ದಿಬ್ಬೂರಹಳ್ಳಿಯ ಎಸ್.ಎಂ.ಇ, ಸೂರ್ಯ, ಶ್ರೀ ಜಗದೀಶ್ವರ ಹಾಗೂ ಸರ್ಕಾರಿ ಶಾಲಾ ಕಾಲೇಜುಗಳಿಂದ 75 ನೇ ಗಣರಾಜ್ಯೋತ್ಸವದ ಸಮಾರಂಭವನ್ನು ತುಂಬಾ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ಇಡೀ ದೇಶಾದ್ಯಂತ 75ನೇ ಗಣರಾಜ್ಯೋತ್ಸವದ ಕಾರ್ಯಕ್ರಮವನ್ನು ಭಾರತೀಯ ಗಣರಾಜ್ಯೋತ್ಸವವನ್ನು ಪ್ರತಿ ವರ್ಷ ಜನವರಿ 26 ರಂದು ಅತ್ಯಂತ ಉತ್ಸಾಹ ಮತ್ತು ವೈಭವದಿಂದ ಆಚರಿಸಲಾಗುತ್ತದೆ. ಇದು ಭಾರತೀಯ ಸಂವಿಧಾನವು ಜಾರಿಗೆ ಬಂದ ದಿನವನ್ನು ಗುರುತಿಸುತ್ತದೆ ಮತ್ತು ಸ್ವತಂತ್ರ ಗಣರಾಜ್ಯವಾಗಿ ಭಾರತದ ಅಸ್ತಿತ್ವವನ್ನು ದೃಢಪಡಿಸಿತು.ಶಾಶ್ವತ ಸಂವಿಧಾನವನ್ನು ವಿನ್ಯಾಸಗೊಳಿಸಲು ಡಾ.ಬಿ.ಆರ್.ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಕರಡು ಸಮಿತಿಯನ್ನು ಸ್ಥಾಪಿಸಲು ಆಗಸ್ಟ್ 29, 1947 ರಂದು ನಿರ್ಣಯವನ್ನು ಮಂಡಿಸಲಾಯಿತು. ನವೆಂಬರ್ 4, 1947 ರಂದು, ಸಮಿತಿಯು ಸಂವಿಧಾನ ಸಭೆಗೆ ಪ್ರಸ್ತಾವಿತ ಸಂವಿಧಾನವನ್ನು ಮಂಡಿಸಿತು. ವ್ಯಾಪಕವಾದ ಚರ್ಚೆ ಮತ್ತು ಪರಿಷ್ಕರಣೆಗಳ ನಂತರ, ಅಸೆಂಬ್ಲಿಯ 308 ಸದಸ್ಯರು ಜನವರಿ 24, 1950 ರಂದು ಒಪ್ಪಂದದ ಎರಡು ಕೈಬರಹದ ಆವೃತ್ತಿಗಳಿಗೆ ಸಹಿ ಹಾಕಿದರು. ಎರಡು ದಿನಗಳ ನಂತರ, ಇದು ಜನವರಿ 26, 1950 ರಂದು ರಾಷ್ಟ್ರವ್ಯಾಪಿ ಜಾರಿಗೆ ಬಂದಿತು.

ಅದೇ ರೀತಿ ದಿಬ್ಬೂರಹಳ್ಳಿಯ ಎಲ್ಲಾ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಗಣರಾಜ್ಯೋತ್ಸವದ ಆಚರಣೆಯ ಅಂಗವಾಗಿ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಿದರು, ಇದೇ ಸಂದರ್ಭದಲ್ಲಿ ಮಕ್ಕಳಿಂದ ಸ್ವಾತಂತ್ರ್ಯ ಹೋರಾಟಗಾರರ ವೇಷ ಭೂಷಣಗಳನ್ನು ಹಾಕಿಸಿ, ವೃತ್ತದಲ್ಲಿ ದಿಬ್ಬೂರಹಳ್ಳಿ ಸಬ್ಇನ್ಸ್ಪೆಕ್ಟರ್ ರಾಜೇಶ್ವರಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು ತದನಂತರ ಎಸ್.ಎಂ.ಇ ಹಾಗೂ ಸೂರ್ಯ ಶಾಲೆಯ ವತಿಯಿಂದ ಪಿರಮಿಡ್ ಗಳ ಮೂಲಕ ಪ್ರದರ್ಶನ ಮಾಡಿ ದೇಶ ಭಕ್ತಿಯನ್ನು ಪ್ರದರ್ಶಿಸಿದರು.
ಈ ಕಾರ್ಯಕ್ರಮದಲ್ಲಿ ದಿಬ್ಬೂರಹಳ್ಳಿಯ ಎಲ್ಲಾ ಶಾಲಾ ಶಿಕ್ಷಕರ ಹಾಗೂ ಗ್ರಾಮಸ್ಥರು ಹಾಜರಿದ್ದರು.

Leave a Reply

Your email address will not be published. Required fields are marked *