ಕೋಲಾರ : ಮಕ್ಕಳಿಂದ ಟಿವಿ ಮತ್ತು ಮೊಬೈಲ್ ಗಳು ದೂರವಿರಿಸಿ ಮಕ್ಕಳಿಗೆ ನೀತಿ ಕಥೆಗಳು ಮತ್ತು ಸಾಹಸ ಕಥೆಗಳನ್ನು ಹೇಳಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪ್ರೊ. ಬಿ ಎನ್. ಕೃಷ್ಣಪ್ಪ ಎಂದರು,

ತಾಲೂಕಿನ ನರಸಾಪುರ ಗ್ರಾಮದ ಸೂರ್ಯ ವಿದ್ಯಾನಿಕೇತನ ಶಾಲೆಯಲ್ಲಿ 2023 – 24 ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ರವರು ಹೇಳಿದಂತೆ ಕನಸನ್ನು ಕಾಣದರೆ ಬಹಳ ದೊಡ್ಡ ಕನಸನ್ನು ಕಾಣಿರಿ ಅದನ್ನು ಕಾರ್ಯಗೊಳಿಸುವ ಕಾರ್ಯದಲ್ಲಿ ತತ್ಪರವಾಗಿ ಒಳ್ಳೆ ಗುರಿಯನ್ನು ಮುಟ್ಟಿ, ಕನಸನ್ನು ನನಸನ್ನಾಗಿ ಮಾಡಿಕೊಳ್ಳಿ, ಮಣ್ಣನ್ನು ನಾವು ವಿಶೇಷವಾಗಿ ನೋಡುತ್ತೇವೆ, ಮಣ್ಣಿಗೆ ಸಂಸ್ಕಾರ ನೀಡಿದರೆ ಅದು ಮಡಿಕೆಯಾಗುತ್ತದೆ, ಸಗಣಿಗೆ ಸಂಸ್ಕಾರ ನೀಡಿದರೆ ಅದು ವಿಭೂತಿಯಾಗುತ್ತದೆ, ಚಿನ್ನಕ್ಕೆ ಸಂಸ್ಕಾರ ನೀಡಿದರದು ಆಭರಣವಾಗುತ್ತದೆ ಹಾಗೆಯೇ ಮಾನವನಿಗೆ ಸಂಸ್ಕಾರ ನೀಡಿದರೆ ಅವನು ದೇವಮಾನವನಾಗುತ್ತಾನೆ,

ಈ ರೀತಿಯಾಗಿ ಸಂಸ್ಥೆಯ ಕಾರ್ಯದರ್ಶಿ ರಾಜಣ್ಣನವರು ವಿದ್ಯಾರ್ಥಿಗಳಿಗೆ ಒಳ್ಳೆಯ ಸಂಸ್ಕಾರವನ್ನು ನೀಡುತ್ತಾ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಉತ್ತಮ ಸಮಾಜ ಕಟ್ಟುವ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ, ನಮ್ಮ ಹಿರಿಯರು ಒಂದು ವರ್ಷದ ಒಳಗೆ ಫಸಲನ್ನು ಬೇಕಾದರೆ ತರಕಾರಿ ಮತ್ತು ಹಣ್ಣನ್ನು ಬೆಳೆ, ಈ ಭೂಮಿ ಇರುವ ವರೆಗೂ ಈ ಸಮಾಜಕ್ಕೆ ಒಳ್ಳೆಯ ಫಸಲು ಬೇಕಾದರೆ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸು ಎಂದಿದ್ದಾರೆ,

ಇಂತಹ ಉತ್ತಮ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿರುವ ರಾಜಣ್ಣನವರು ಸಮಾಜದ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ, ಇವರ ಈ ಕಾರ್ಯಕ್ರಮಗಳು ನಮಗೆ ಹೆಮ್ಮೆ ಅನಿಸುತ್ತಿದ್ದು ಎಲ್ ಕೆ ಜಿ ಯಿಂದ 10ನೇ ತರಗತಿಯವಗಿನ ವಿದ್ಯಾರ್ಥಿ ಸಾಧಕರಿಗೆ ಮೊಟ್ಟ ಮೊದಲನೆದಾಗಿ ಗೌರವಿಸುವ ಕಾರ್ಯಕ್ರಮ ಏರ್ಪಡಿಸಿರುವುದು ತುಂಬಾ ಹೆಮ್ಮೆಯ ವಿಷಯ ಬರೀ ಪಠ್ಯ ಪುಸ್ತಕ ಮತ್ತು ಕ್ರೀಡಾ ವಿಷಯಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳನ್ನು ಗೌರವಿಸುವುದರ ಜೊತೆಗೆ ವಿದ್ಯಾರ್ಥಿಗಳ ಪೋಷಕರಿಗೆ ಮತ್ತು ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಕ್ರೀಡೆಗಳನ್ನು ಏರ್ಪಡಿಸಿ ಅವರಿಗೂ ಸಹ ಗೌರವವನ್ನು ನೀಡುವ ಕಾರ್ಯ ಮಾಡಿದ್ದಾರೆ 614 ಅಂಕಗಳನ್ನು ಪಡೆದ ವಿದ್ಯಾರ್ಥಿನಿಯ ಮರು ಮೌಲ್ಯಮಾಪಕ್ಕೆ ಅವರೇ ಖುದ್ದಾಗಿ ಅವರೇ ಸಹಾಯ ಮಾಡಿ ಆ ವಿದ್ಯಾರ್ಥಿನಿಗೆ ಹೆಚ್ಚಿನ ಅಂಕಗಳನ್ನು ಬರುವಂತೆ ಮಾಡಿದ್ದಾರೆ, ಇದರಿಂದ ಗೊತ್ತಾಗುತ್ತದೆ ಅವರ ಸೇವೆ ಎಷ್ಟು ಆಭಾರಿಯಾದದು ಎಂದರು.

ಸೂರ್ಯ ವಿದ್ಯಾನಿಕೇತನ  ಶಾಲೆಯ ಕಾರ್ಯದರ್ಶಿ ಎನ್ ರಾಜಣ್ಣ ಮಾತನಾಡಿ ಈ ಶಾಲೆಯನ್ನು ನಾವು  ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ  ಅನುಕೂಲವಾಗಲೆಂದು  ಬಹಳಷ್ಟು ಶ್ರಮಪಟ್ಟು  ನಡೆಸುತ್ತಿದ್ದೇವೆ, ನಾವು ಶಾಲೆಯನ್ನು ತೆಗೆದುಕೊಂಡಂತ ಸಂದರ್ಭದಲ್ಲಿ ಈ ಶಾಲೆಯಲ್ಲಿ ಬಹಳಷ್ಟು ಕಡಿಮೆ ವಿದ್ಯಾರ್ಥಿಗಳಿದ್ದು ಆ ವಿದ್ಯಾರ್ಥಿಗಳ ಪೋಷಕರೇ    ನಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುತ್ತೇವೆ ಎಂದು ವರ್ಗಾವಣೆ ಪ್ರಮಾಣ ಪತ್ರಗಳನ್ನು ನೀಡಿ ಎಂದು ಒತ್ತಡ ಹಾಕುತ್ತಿದ್ದರು, ಆದರೆ  ಆ ಪೋಷಕರ ಮನವೊಲಿಸಿ  ವಿದ್ಯಾರ್ಥಿಗಳು ಇಲ್ಲೇ ಉಳಿಯುವಂತೆ ಮಾಡಿ ಒಳ್ಳೆಯ ವ್ಯಾಸಂಗವನ್ನು ವಿದ್ಯಾರ್ಥಿಗಳಿಗೆ ನೀಡಿದೆವು, ಇದರ ಪ್ರತಿಫಲವಾಗಿ  ವಿದ್ಯಾರ್ಥಿಗಳು ಅತ್ಯುನ್ನತ ಹುದ್ದೆಯಲ್ಲಿ ಇದ್ದಾರೆ, ನಮಗೆ ಅದಕ್ಕಿಂತ  ಮತ್ತೇನನ್ನು ನಾವು ಬಯಸುವುದಿಲ್ಲ ಎಂದರು.

ಈ ಕಾರ್ಯಕ್ರಮದಲ್ಲಿ  ವ್ಯಾಸಂಗದಲ್ಲಿ ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು ಮತ್ತು  ಶಿಕ್ಷಕರಿಗೆ ಹಾಗೂ  ವಿದ್ಯಾರ್ಥಿಗಳ ಪೋಷಕರಿಗೆ ಕ್ರೀಡಾಕೂಟಗಳನ್ನು ಏರ್ಪಡಿಸಿದ್ದು ಕ್ರೀಡೆಯಲ್ಲಿ  ಗೆದ್ದಂತಹ ವರನ್ನು ಸನ್ಮಾನಿಸಲಾಯಿತು.

ಈ ಸಮಾರಂಭದಲ್ಲಿ ಕೋಲಾರ ಡಯಟ್ ನ  ಹಿರಿಯ ಉಪನ್ಯಾಸಕರು  ಹಾಗೂ ಕೋಲಾರ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ  ಸಿ ಆರ್ ಅಶೋಕ್, ಕೋಲಾರ ತಾಲೂಕು ಕ್ಷೇತ್ರ  ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕ  ಕೆ.   ಶಾಲೆಯ ಅಧ್ಯಕ್ಷ ಎಂ ಸಿ ಭೈರಪ್ಪ, ಜಿಲ್ಲಾ ಕಸಾಪ ಕೋಶಾಧಿಕಾರಿ ಡಾ. ಮುನಿರಾಜು, ನರಸಾಪುರ ಸಮೂಹ ಶಿಕ್ಷಣ ಸಂಪನ್ಮೂಲ ಕೇಂದ್ರದ ಶಿಕ್ಷಣ ಸಂಯೋಜಕ ಯು. ಗೋವಿಂದ್, ನರಸಾಪುರ ಗ್ರಾ.ಪಂ. ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷೇ ಪದ್ಮಮ್ಮ, ನಂದಗುಡಿ ಹೋಬಳಿಯ ಕಸಾಪ ಅಧ್ಯಕ್ಷ ಹರೀಶ್, ಇತರರು ಹಾಜರಿದ್ದರು.

Leave a Reply

Your email address will not be published. Required fields are marked *