: ದಿನಾಂಕ 10,3, 2024ರ ಭಾನುವಾರ ಬೆಳಗ್ಗೆ 6.00 ಗಂಟೆಯಿಂದ 10 .00 ಗಂಟೆಯವರೆಗೂ ನರ್ಚರ್ ಆಸ್ಪತ್ರೆ 2 ನೇ ಬ್ಲಾಕ ರಾಜಾಜಿನಗರ ಬೆಂಗಳೂರು ಇವರ ಸಹಯೋಗದಲ್ಲಿ ಇಎಲ್ ಸಿ ಹಾಗೂ ಎನ್ಎಸ್ಎಸ್ ಘಟಕವು ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ವಾಕಥಾನ್ ನಡಿಗೆಯನ್ನು ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯದಿಂದ ಪ್ರಾರಂಭಿಸಿ ಪವಿತ್ರ ಪ್ಯಾರಾಡೈಸ್ ನ್ನು ಸಂಪರ್ಕಿಸಿ ನರ್ಚರ್ ಆಸ್ಪತ್ರೆಗೆ ಬಂದು ತಲುಪಲಾಯ್ತು ನಡಿಗೆಯೊಂದಿಗೆ ಕಾಲುದಾರಿಯಲ್ಲಿ ಎದುರಾದ ಮಹಿಳೆಯರನ್ನು ಹಾಗೂ ಸಾರ್ವಜನಿಕರನ್ನು ಸಂಪರ್ಕಿಸಿ ಮತದಾರರ ವೋಟರ್ ಕಾರ್ಡ್ ನ ಬಗ್ಗೆ ಮಾಹಿತಿ ಸಂಗ್ರಹಿಸಿ ಕಾರ್ಡ್ ಇಲ್ಲದವರಿಗೆ ಮಾಹಿತಿ ನೀಡಲಾಯ್ತು. ಸಾರ್ವಜನಿಕರು ಯುವಕರು ಮಾಡಿದ ಈ ಕಾರ್ಯವನ್ನು ಶ್ಲಾಪಿಸಿದರು. ನರ್ಚರ್ ಆಸ್ಪತ್ತೆಯವರು ಪ್ರಮಾಣ ಪತ್ರವನ್ನು ನೀಡುವುದರ ಮೂಲಕ ವಿದ್ಯಾರ್ಥಿ ಬಳಗವನ್ನು ಪ್ರೋತ್ಸಾಹಿಸಿದರು. ಮಾರ್ಕೆಟಿಂಗ್ ಮ್ಯಾನೇಜರ್ ಆದ ಶ್ರೀಮತಿ ಅರ್ಪಿತ ಜಿ. ಅವರು ಇ ಎಲ್ ಸಿ – ಮತ್ತು ಎನ್ಎಸ್ಎಸ್ ಘಟಕದ ಮೂಲಕ ಮಹಿಳಾ ದಿನಾಚರಣೆಯನ್ನು ಆಚರಿಸಲಾಯ್ತು. ಪ್ರಾಂಶುಪಾಲರಾದ ಡಾ. ಶೀಲಾದೇವಿ ಎಸ್ ಮಳೀಮಠರವರ ಈ ವಿಶೇಷ ಕಾರ್ಯಕ್ರಮ ಮತದಾನ ಸಾಕ್ಷರತೆಯನ್ನು ಪಸರಿಸುವ ಹಿನ್ನೆಲೆಯಲ್ಲಿ ಶೈಕ್ಷಣಿಕ ಮಹತ್ವ ಪಡೆಯಿತು. ಶ್ರೀಗಿರೀಶ ವೈಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಹಾಗೂ ಇಎಲ್ ಸಿ ಸಂಚಾಲಕರು ಕುನಿಖಿತಾ – ಘಟಕದ ವತಿಯಿಂದ ಶ್ರೀ ಆನಂದಮೂರ್ತಿ -ಶ್ರೀನರಸಿಂಗ ರಾವ್ ಗುಮಾಸ್ತೆ – ಶ್ರೀಗಿರೀಶ ಪಿ ಹೆಚ್-ಕು.ತೇಜಸ್ —ಕು. ಹೇಮಂತ್ – ಕು.ಯಶವಂತ – ಕು.ರಾಜು- ಇತರ ಸ್ವಯಂ ಸೇವಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *