
ದಿನಾಂಕ 8-4-2024 ರ ಸೋಮವಾರ 2, 4.6 ನೇ ಸೆಮೆಸ್ಟರ್ ನ ವಿದ್ಯಾರ್ಥಿಗಳಿಗೆ ಈ ಸೆಮೆಸ್ಟರ್ ನಲ್ಲಿ ಹೇಗೆ ತಮ್ಮ ಶೈಕ್ಷಣಿಕ ನಿಲುವನ್ನು ರಕ್ಷಿಸಿಕೊಳ್ಳಬೇಕೆಂದು ಶೈಕ್ಷಣಿಕ ಪುನಶ್ಚೇತನ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಹಳೆಯ ವಿದ್ಯಾರ್ಥಿಯಾಗಿದ್ದ ಶ್ರೀ ಅಜಿತ್ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಬ್ಯಾಲೆನ್ಸ್ ಮಾಡಿಕೊಳ್ಳುತ್ತ ನಿಮ್ಮ ವಿದ್ಯಾರ್ಥಿ ನಡೆಯನ್ನು ಸದ್ಭಳಿಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು. ಅತಿಥಿಗಳಾಗಿ ಆಗಮಿಸಿದ ಶ್ರೀಶಿವಾರೆಡ್ಡಿಯವರು ಮಾತನಾಡಿ ವಿದ್ಯಾರ್ಥಿ ಜೀವನವು ವೃತ್ತಿಪರವಾಗಿರಲೆಂದು ತಿಳಿಸಿದರು. ಪ್ರಾಂಶುಪಾಲರಾದ ಡಾ. ಶೀಲಾದೇವಿಎಸ್ ಮಳಿಮಠ ಅವರು ಮತನಾಡಿ ಹಳೆಯ ತಪ್ಪುಗಳನ್ನೆಲ್ಲಾ ಬದಿಗಿಟ್ಟು ಹೊಸ ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲುಕರೆ ನೀಡಿದರು. ಇಎಲ್ ಸಿ ಘಟಕದ ಕುನಿಖಿತಾ – ಎನ್ಎಸ್ಎಸ್ ಘಟಕದ ಶ್ರೀಗಿರೀಶ ವೈ ಮಹಾಮನೆ – ಕನ್ನಡ ಸಂಘದ ಶ್ರೀಗಿರೀಶ ಪಿಹೆಚ್ – ನರಸಿಂಗ ರಾಪ್ ಗುಮಾಸ್ತೆ – ಕು.ಐಶ್ವರ – ಕು. ಕಾವ್ಯ – ಕು.ರಿಪಿಕಾ ವಿದ್ಯಾರ್ಥಿ ಅಂಬಾಸಿಡರ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಇದೇ ಸಂದರ್ಭದಲ್ಲಿ, ಇಎಲ್ ಸಿಯ PPT ಪ್ರಾತ್ಯಕ್ಷಿಕೆಯ ಮತದಾನದ ಅರಿವು ಕಾರ್ಯಕ್ರಮವನ್ನು ಆಯೋಜಿಸಿ ಯಶಸ್ವಿಗೊಳಿಸಲಾಯ್ತು. ನೂತನ ಮತದಾರರು ಮತದಾನದ ಜಾಗೃತಿ ಪಡೆದುಕೊಂಡರು.