ಯಲಹಂಕ : ಜಗತ್ತಿನ ಪ್ರತಿ ಯೊಬ್ಬರೂ ಕೂಡ ತಾವು ಕೈಗೊಳ್ಳುವ ಕರ್ತವ್ಯದಲ್ಲಿ ಪೂಜೆಯಷ್ಟೇ ಪ್ರಾಮಾಣಿಕ ವಾಗಿ ತೊಡಗಿಸಿಕೊಳ್ಳಬೇಕು, ಹಾಗಾದಾಗ ಎಲ್ಲರೂ ನೆಮ್ಮದಿಯ ಬದುಕು ಕಟ್ಟಿಕೊಳ್ಳಬಹುದಾಗಿದೆ ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಯಲಹಂಕದ ಹೊನ್ನೇನಹಳ್ಳಿ ಸಮೀಪವಿರುವ ವಿಶ್ವ ವಿದ್ಯಾಪೀಠ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದ ಅವರು ‘ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಉಪದೇಶ ಮಾಡುವಾಗ ಕರ್ತವ್ಯ ನಿರ್ವಹಣೆ ಕುರಿತು, ನಾವು ಕೈಗೊಳ್ಳುವ ಕರ್ತವ್ಯವನ್ನು ಪೂಜೆಯಷ್ಟೇ ನಿಷ್ಠೆಯಿಂದ ಮಾಡ ಬೇಕು. ಪೂಜೆಯ ವೇಳೆ ನಾವು ಹೇಗೆ ಮೊಸ, ವಂಚನೆಯ ಯೋಚನೆ ಮಾಡುವುದಿಲ್ಲವೋ ಅದೇ ರೀತಿ ನಮ್ಮ ಕರ್ತವ್ಯ ನಿರ್ವಹಣೆಯ ವೇಳೆ ಸಹ ಇದ್ದಾಗ ಪ್ರತಿಯೊಬ್ಬರು ನೆಮ್ಮದಿಯ ಬದುಕು ಕಟ್ಟಿಕೊಳ್ಳಬಹುದು ಎಂದರು.

ಪ್ರಾಮಣಿಕ ಕರ್ತವ್ಯ ನಿರ್ವಹಣೆ ಕೇವಲ ಉಪದೇಶ ವಾಗಬಾರದು, ಅದನ್ನು ಉಪದೇಶ ಮಾಡುವವರು ಸಹ ಅನುಸರಣೆ ಮಾಡಬೇಕು. ಶಿಕ್ಷಣ ಕಲಿಕೆಯಲ್ಲೂ ಸಹ ಇದು ಅನ್ವಯವಾಗುತ್ತದೆ. ಶ್ರೀಕೃಷ್ಣ ಉಪದೇಶ ಮಾಡಿದ್ದನ್ನು ಅರ್ಜುನ ಹೇಗೆ ಅನುಸರಿಸಿದನೋ ಹಾಗೆಯೇ ಶಿಕ್ಷಕರು ಬೋಧಿಸಿದ ಉಪನ್ಯಾಸ ವನ್ನು ವಿದ್ಯಾರ್ಥಿಗಳು ಚಾಚೂ ತಪ್ಪದೆ ಅನುಸರಿಸಿ, ಕಲಿತಾಗ ಗುರು-ಶಿಷ್ಯರ ಸಂಬಂಧ ಕೃಷ್ಣಾರ್ಜುನರ ರೀತಿಯಲ್ಲಿ ಪವಿತ್ರವಾಗಿ ಇರುತ್ತದೆ ಎಂದರು.

ಮೌಲ್ಯಗಳು ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ವಿಶ್ವ ವಿದ್ಯಾಪೀಠ ಶಾಲೆ ಆರಂಭದ ದಿನದಂದೇ ತಮ್ಮ ವಿದ್ಯಾರ್ಥಿಗಳಿಗೆ ರಾಮಾಯಣ ದರ್ಶನ ಬೋಧನೆ ಮೂಲಕ ಶೈಕ್ಷಣಿಕ ವರ್ಷವನ್ನು ಆರಂಭಿಸಿರು ವುದು ಸ್ತುತ್ಯಾರ್ಹ ಸಂಗತಿ. ರಾಮಾಯಣದಲ್ಲಿ ಎರಡು ಮೇರು ಆದರ್ಶಗಳಿವೆ. ಆದರ್ಶಪ್ರಾಯವಾದ ಸಾರ್ಥಕ ಬದುಕಿಗೆ ಶ್ರೀ ರಾಮಚಂದ್ರ ಉದಾಹರಣೆಯಾದರೆ, ದುಷ್ಠ ಚಿಂತನೆಗೆ ದೊರೆಯುವ ಫಲ ಎಂಥಹದ್ದು ಎಂಬುದಕ್ಕೆ ರಾವಣ ಉದಾಹರಣೆಯಾಗಿ ನಿಲ್ಲುತ್ತಾನೆ. ಏನು ಮಾಡಬೇಕು ಎಂಬುದಕ್ಕೆ ರಾಮ ಆದರ್ಶ ವಾದರೆ, ಏನು ಮಾಡಬಾರದು ಎಂಬುದಕ್ಕೆ ರಾವಣ ಆದರ್ಶವಾಗುತ್ತಾನೆ. ಉತ್ತಮ ಆದರ್ಶಗಳ ಕಲಿಕೆಗೆ ರಾಮಾಯಣದ ಅವಲೋಕನಕ್ಕಿಂತ ಉತ್ತಮ ಮಾರ್ಗ ಬೇರೊಂದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ವಿಶ್ವ ವಿದ್ಯಾಪೀಠ ಶಾಲೆಯ ವತಿಯಿಂದ ಹೊರತಂದಿರುವ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ವಿಶ್ವ ವಿದ್ಯಾಪೀಠ ಶಾಲೆಯ ಮುಖ್ಯಸ್ಥ ರಾದ ಸುಶೀಲಾ ಸಂತೋಷ್, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಶಾಲೆಯ ವಿದ್ಯಾರ್ಥಿ ಗಳಿದ್ದರು.

Leave a Reply

Your email address will not be published. Required fields are marked *