

































ಯಲಹಂಕ ಸುದ್ದಿ. ಬೆಂಗಳೂರು ಯಲಹಂಕ. ಕೋಗಿಲು ರಸ್ತೆಯಲ್ಲಿರುವ ಶ್ರೀನಿವಾಸಪುರದ ಆಕ್ಸಫರ್ಡ್ ಆಂಗ್ಲ ಪ್ರೌಢಶಾಲೆ ಮತ್ತು ಆಕ್ಸಫರ್ಡ್ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪ್ರತಿವರ್ಷದಂತೆ ಜೂನ್ ಐದು ವಿಶ್ವ ಪರಿಸರ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಅಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಕ್ಸಫರ್ಡ್ ಶಾಲಾ ಮತ್ತು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪ್ರಮೀಳಾ ರಾಜೇಶ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ಪರಿಸರ ಕುರಿತ ಮುಖ್ಯಾಂಶ ಪರಿಸರ ಸಂರಕ್ಷಣೆಯ ದಿನಾಚರಣೆಗೆ ಸಂಬಂಧಿಸಿದ ಸಾಂಸ್ಕೃತಿಕ ನೃತ್ಯವನ್ನು 8 9ನೇ ತರಗತಿಯ ವಿದ್ಯಾರ್ಥಿನಿಯರು ಮಾಡಿದರು .
ಹಾಗೆಯೇ ಪ್ಲಾಸ್ಟಿಕ್ ನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ನಾಟಕವನ್ನು ಮಾಡಲಾಯಿತು. ಪ್ಲಾಸ್ಟಿಕ್ ನ ನಾಟಕದಲ್ಲಿ 10ನೇ ತರಗತಿ ವಿದ್ಯಾರ್ಥಿ ಕೈಸರ್ ಎಲ್ಲರ ಗಮನ ಸಳೆದದ್ದು ವಿಶೇಷ ನಂತರ ಶಾಲಾ ವಿದ್ಯಾರ್ಥಿಗಳೊಂದಿಗೆ ಪರಿಸರ ಸಂರಕ್ಷಣೆಯ ಪ್ರಮಾಣವಚನ ವನ್ನು ಶ್ರೀಮತಿ ಪ್ರಮೀಳಾ ರಾಜೇಶ್ ಅವರು ಮಕ್ಕಳಿಗೆ ನೀಡುವುದರ ನೀಡುವುದರೊಂದಿಗೆ ಕಾರ್ಯಕ್ರಮಕ್ಕೆ ಮೆರುಗು ತಂದಿದೆ ಹಾಗೆಯೇ ಸಾರ್ವಜನಿಕರಿಗೆ ಪರಿಸರ ಜಾಗೃತಿ ಜಾತವನ್ನು ಶ್ರೀನಿವಾಸಪುರದಿಂದ ಕೋಗಿಲೆ ರಸ್ತೆ ಮೂಲಕ ಇಟ್ಟಿಗೆ ಫ್ಯಾಕ್ಟ್ರಿ ಅಗ್ರಹಾರ ಬಡಾವಣೆಯ ನಿವಾಸಿಗಳಿಗೆ ಪರಿಸರ ಜಾಗೃತಿ ತಿಳಿಸುವ ಚಿತ್ರಫಲಕ ಮತ್ತು ಜಾಗೃತಿ ಪ್ರತಿಫಲವನ್ನು ವಿದ್ಯಾರ್ಥಿಗಳು ತೋರಿಸುವುದರೊಂದಿಗೆ ಪರಿಸರ ಜಾಗೃತಿ ಮೂಡಿಸಿದರು. ಅಂಗಡಿ ಮತ್ತು ಪರಿಸರ ಸಾರ್ವಜನಿಕರಿಗೆ ಮಕ್ಕಳು ಸಸಿ ನೀಡುವುದರೊಂದಿಗೆ ಪರಿಸರ ಜಾಗೃತಿ ಮೂಡಿಸಿದರು ಬೀದಿ ನಾಟಕ ಮಾಡಿರುವುದು ಈ ವರ್ಷದ ವಿಶೇಷತೆ.
ವಿಶ್ವ ಪರಿಸರದ ಕಾರ್ಯಕ್ರಮದಲ್ಲಿ ಶಿಕ್ಷಕರು ಮತ್ತು ಮಕ್ಕಳು ಸಸಿ ನೆಡುವುದರೊಂದಿಗೆ ಮಕ್ಕಳಿಗೆ ಪರಿಸರ ಸಂರಕ್ಷಣೆ ಕುರಿತ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಗೆದ್ದ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರಾದ ಶ್ರೀಮತಿ ಪ್ರಮೀಳಾ ರಾಜೇಶ್ ರವರು ಪ್ರಶಸ್ತಿ ಪತ್ರ ಶುಭ ಕೋರುವುದು ರೊಂದಿಗೆ ಪರಿಸರ ದಿನಾಚರಣೆ ಕುರಿತು ಇರುವುದೊಂದೇ ಭೂಮಿ ಅದನ್ನು ಸ್ವಚ್ಛ ಸುಂದರವಾಗಿ ಮಾಡುವುದು ನಮ್ಮ ಕರ್ತವ್ಯವಾಗಬೇಕು. ಮಕ್ಕಳಿಗೆ ಪರಿಸರ ಪ್ರೇಮ ಬೆಳೆಸುವುದು ಪರಿಸರ ಸಂರಕ್ಷಣೆಯ ಅರಿವು ಮೂಡಿಸುವುದೇ ನಮ್ಮ ಆಕ್ಸಫರ್ಡ್ ಶಾಲೆಯ ಮುಖ್ಯ ಉದ್ದೇಶ ಎಂದು ಹೇಳಿದರು. ಈ ಸಂದರ್ಭದಲ್ಲಿ. ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಶಾಲೆಯ ಸಿಬ್ಬಂದಿ ವರ್ಗದವರು ಮಕ್ಕಳು ಇನ್ನೂ ಅನೇಕರು ಭಾಗವಹಿಸಿ ಕಾಯ೯ಕ್ರಮ ಯಶಸ್ವಿಯಾಗಿ ನಡೆಯಿತು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿ ಆರ್ ಹನುಮಂತ. 9845085793
7349337989