ಯಲಹಂಕ ಸುದ್ದಿ. ಬೆಂಗಳೂರು ಉತ್ತರ ತಾಲೂಕು ಬ್ಯಾಟ್ಟರಾಯನಪುರ ವಿಧಾನಸಭಾ ಕ್ಷೇತ್ರ ಜಕ್ಕೂರು ವಾರ್ಡ್ ನಂಬರ್ 5 ಅಗ್ರಹಾರ ಬಡಾವಣೆ.
ದಿನಾಂಕ 31.05.2024 ರ ಶುಕ್ರವಾರದಂದು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆ ಅಗ್ರಹಾರ ಬಡಾವಣೆ ಇಲ್ಲಿ ಘನ ಸರ್ಕಾರದ ಆದೇಶದಂತೆ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ಸಮವಸ್ತ್ರ ವಿತರಿಸುವ ಮೂಲಕ ಶಾಲಾ ಪ್ರಾರಂಭೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನೆರೆದಿದ್ದ ವಿದ್ಯಾರ್ಥಿ ಸಮೂಹವನ್ನು ಕುರಿತು ಘನ ಅಧ್ಯಕ್ಷತೆ ವಹಿಸಿದ್ದಂತಹ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಸೀಮಾ ಕುಲಕರ್ಣಿ ಸರ್ಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಬೇಕು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕು ಎಂದು ಕರೆ ನೀಡಿದರು. ನಮ್ಮ ಶಾಲೆಯ ಬೆಂಗಳೂರು ಪಬ್ಲಿಕ್ ಶಾಲೆ ಎಂದು ಹೆಸರು ಗಳಿಸಿದೆ ಒಂದನೇ ತರಗತಿಯಿಂದಲೇ 30 ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮದಲ್ಲಿ ದಾಖಲಾತಿ ಆರಂಭವಾಗಿದೆ. ನಮ್ಮ ಶಾಲೆಯಲ್ಲಿ ಖಾಸಗಿ ಶಾಲೆಗಳಂತೆ ಮೂಲಭೂತ ಸೌಕರ್ಯಗಳು ಒಂದಿದೆ ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಕರೆ ನೀಡಿದರು.ಲಯನ್ಸ್ ಕ್ಲಬ್ ಆಫ್ ಬೆಂಗಳೂರ್ ಪೋಸ್ಟರ್ ಪದಾಧಿಕಾರಿಗಳು ಈ ಶಾಲೆಯ ಹಿತೈಷಿಗಳು ಆದ ಶ್ರೀ ಆನಂದ್ ಒಡೆಯರ್ ಉಪಸ್ಥಿತರಿದ್ದರು. ಪಠ್ಯ ಪುಸ್ತಕ ಸಮವಸ್ತ್ರ ವಿದ್ಯಾರ್ಥಿಗಳಿಗೆ ವಿತರಿಸಿ ಶುಭ ಕೋರಿದರು ಕರ್ನಾಟಕದ ಹೆಸರಾಂತ ಪತ್ರಿಕೆಯಾದ ಬಯಲು ಸಿಂಹ ಕನ್ನಡ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಆರ್ ಹನುಮಂತು ಅವರು ವಿದ್ಯಾರ್ಥಿಗಳೇ ದೇಶದ ಆಸ್ತಿ ವಿದ್ಯಾರ್ಥಿಗಳ ಜೀವನದಲ್ಲಿ ಸದ್ಗುಣಗಳನ್ನು ರೂಡಿಸಿಕೊಂಡು ಭವ್ಯ ಭಾರತದ ಪ್ರಜೆಗಳಾಗಬೇಕೆಂದು ಶುಭ ಕೋರಿದರು. ಈ ಸಂದರ್ಭದಲ್ಲಿ. ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಸೀಮಾ ಕುಲಕರ್ಣಿ ಪ್ರಾಥಮಿಕ ಶಾಲೆಯ ಪ್ರಧಾನ ಮುಖ್ಯ ಶಿಕ್ಷಕರಾದ ಭದ್ರ ನಾಯಕ್ ಹಾಗೂ ಎರಡು ಶಾಲೆಗಳ ಶಿಕ್ಷಕರು ವೃಂದದವರು ಎಸ್ ಡಿ ಎಂ ಸಿ ಸದಸ್ಯರು ಗ್ರಾಮಸ್ಥರು ಇನ್ನು ಅನೇಕರು ಹಾಜರಿದ್ದರು ಸಹ ಶಿಕ್ಷಕರಾದ ಶ್ರೀಮತಿ ಶಶಿಕಲಾ ಪ್ರಾರ್ಥನೆ ಆಡಿದರು ಸಹ ಶಿಕ್ಷಕರಾದ ಶ್ರೀ ದಿನೇಶ್ ಎಂ ಜಿ ಅವರು ಸ್ವಾಗತಿಸಿದರು ಶ್ರೀಮತಿ ವಸಂತ್ ರೂಪಿಸಿದರು ಶ್ರೀಮತಿ ಕವಿತಾ ವಂದಿಸಿದರು ವಿದ್ಯಾರ್ಥಿಗಳೆಲ್ಲ ಸಂತೋಷದಿಂದ ತೋರಣಗಳಿಂದ ಶಾಲೆಯನ್ನು ಸಿಂಗರಿಸಿದರು ಕಾರ್ಯಕ್ರಮದ ಕೊನೆಯ ಘಟ್ಟದಲ್ಲಿ ವಿದ್ಯಾರ್ಥಿಗಳೆಲ್ಲರಿಗೂ ಸಿಹಿ ಭೋಜನ ವಿತರಿಸಲಾಯಿತು.

Leave a Reply

Your email address will not be published. Required fields are marked *