ಭಾರತ ದೇಶ ಕೃಷಿ ಪ್ರಧಾನವಾದದ್ದು, ರೈತರು ದಎನಿಸಿಕೊಂಡಿದ್ದಾರೆ, ರೈತರಿಗೆ ಸರಕಾರಿ ಸೌಲಭ್ಯಗಳನ್ನು ಒದಗಿಸುವುದು ಪ್ರತಿಯೊಬ್ಬ ಕೃಷಿ ಅಧಿಕಾರಿಯ ಆದ್ಯ ಕರ್ತವ್ಯವಾಗಿದೆ, ರೈತರು ನಕಲಿ ಬೀಜ, ಗೊಬ್ಬರ ಮಾರಾಟಗಾರರ ಕುರಿತು ಜಾಗೃತಿ ವಹಿಸಬೇಕು, ಪರವಾನಗಿ ಪಡೆದ ಮಾರಾಟಗಾರರಿಂದ ಮಾತ್ರ ಬೀಜ ಗೊಬ್ಬರ ಖರಿದಿಸಬೇಕು ಎಂದು ಕಲಬುರಗಿ ಸಹಾಯಕ ಕೃಷಿ ನಿರ್ದೆಶಕ ಚಂದ್ರಕಾಂತ ಜಿವಣಗಿ ಹೇಳಿದರು.

ಕಮಲಾಪುರ ತಾಲೂಕಿನ ಮಹಾಗಾಂವ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕೃಷಿ ಇಲಾಖೆ ವತಿಯಿಂದ ಶನಿವಾರ ಹಮ್ಮಿಕೊಂಡ ಬಿಜೋಪಚಾರ, ಕೃಷಿ ಸಹಾಯಕ ನಿರ್ದೆಶಕಿಯಾಗಿ ಪದೊನ್ನತಿ ಹೊಂದಿದ ವಿಜಯಲಕ್ಷ್ಮಿ ಜೈನಾಪುರ ಅವರಿಗೆ ಬಿಳ್ಕೊಡುಗೆ ಹಾಗೂ ತಾಲೂಕಿನ ಸಾಧಕ ರೈತರಿಗೆ ಹಾಗೂ ಗ್ರಾಮ ಸಹಾಯಕರಿಗೆ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು ಕೇವಲ ಕಛೇರಿಗೆ ಸೀಮಿತವಾಗದೆ ಪ್ರತಿ ದಿನ ಕನಿಷ್ಠ ಹತ್ತು ರೈತರಿಗೆ ಭೇಟಿಯಾಗಿ ಸಮಸ್ಯೆಗಳ ಕುರಿತು ಆಲಿಸುವ ಕಾರ್ಯ ಮಾಡಬೇಕು, ಮಹಾಗಾಂವ ಕೇಂದ್ರದಲ್ಲಿ ೮ ವರ್ಷ ಸೇವೆ ಸಲ್ಲಿಸಿದ ಕೃಷಿ ಅಧಿಕಾರಿ ವಿಜಯಲಕ್ಷ್ಮಿ ಜೈನಾಪುರ ಅವರು ನಿರಂತರವಾಗಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ ಎನ್ನುವುದಕ್ಕೆ ಇಂದಿನ ಕಾರ್ಯಕ್ರಮದಲ್ಲಿ ಹಾಜರಿದ್ದ ರೈತರ ಸಂಖ್ಯೆ ನೋಡಿದರೆ ಗೊತ್ತಾಗುತ್ತದೆ ಎಂದರು.

ಮಡಕಿ ಪಿಕೆಪಿಎಸ್ ಅಧ್ಯಕ್ಷ ರಾಜಕುಮಾರ ಮಂಠಾಳೆ ಮಾತನಾಡಿ ವಿಜಯಲಕ್ಷ್ಮಿ ಮೇಡಂ ಅವರು ನನ್ನ ಪಿಕೆಪಿಎಸ್ ವ್ಯಾಪ್ತಿಯ ಹತ್ತಾರು ರೈತರಿಗೆ ಅಗತ್ಯ ಪರಿಕರಗಳನ್ನು ಒದಗಿಸಿ ಅವರಿಗೆ ಸ್ವಾವಲಂಬಿ ಜೀವನ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ ಎಂದರು.

ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ‌ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ ಮಾತನಾಡಿ ನಮ್ಮ ಭಾಗದ ರೈತರು ಅತಿವೃಷ್ಠಿ ಮತ್ತು ಅನಾವೃಷ್ಠಗೆ ತುತ್ತಾಗಿ ಸಂಕಷ್ಟ ಎದುರಿಸಿದ್ದಾರೆ, ಈ ವರ್ಷ ನಿಗದಿತ ಸಮಯಕ್ಕೆ ಬಿತ್ತನೆ ಬೀಜ, ರಸಗೊಬ್ಬರಗಳ ನ್ನು ಒದಗಿಸಿ ಬಿತ್ತನೆ ಸಹಕರಿಸಬೇಕು, ವಿಜಯಲಕ್ಷ್ಮಿ ಜೈನಾಪುರ ಅವರು ಮಹಾಗಾಂವ ವ್ಯಾಪ್ತಿಯ ಅರ್ಹ ರೈತರಿಗೆ ತಕ್ಕ ಮಟ್ಟದ ಸರಕಾರಿ ಸೌಲಭ್ಯಗಳನ್ನು ಒದಗಿಸಿ ಸೈ ಎನಿಸಿಕೊಂಡಿದ್ದಾರೆ ಎಂದರು.

ನಿವೃತ್ತ ವಿಜ್ಞಾನಿ ರವೀಂದ್ರ ಗುಂಡಪಗೋಳ್, ಕಮಲಾಪುರ ಕಸಾಪ ಅಧ್ಯಕ್ಷ ಸುರೇಶ ಲೇಂಗಟಿ, ಕೃಷಿ ಅಧಿಕಾರಿ ವಿಜಯಲಕ್ಷ್ಮಿ ಜೈನಾಪುರ, ಮಡಕಿ ಪಿಕೆಪಿಎಸ್ ಅಧ್ಯಕ್ಷ ರಾಜಕುಮಾರ ಮಂಠಾಳೆ , ಮಜರ ಅಲಿ ದರ್ಜಿ ಮಾತನಾಡಿದರು.

ಪ್ರಗತಿಪರ ರೈತರಾದ ನಿವೃತ್ತ ಕೃಷಿ ವಿಜ್ಞಾನಿ ರವೀಂದ್ರ ಗುಂಡಪಗೋಳ್,
ಯಕ್ಕಂಚಿ ಗ್ರಾಮದ ಗುರುನಾಥ ಸೊನ್ನದ, ‌ಅಂಬಲಗಾ ಗ್ರಾಮದ
ಶಿವಪುತ್ರಪ್ಪ ಮೇಗಪಗೋಳ್, ಸುರೇಶ ಕೊಳ್ಳುರೆ, ರೈತ ಮಹಿಳೆ ಕವಿತಾಬಾಯಿ ಲೇಂಗಟಿ ಮಹಾಗಾಂವ ಕ್ರಾಸ್, ಸತೀಶ ಹೊಳಕುಂದಾ, ಭೀಮಶಾ ನೀರ್ ಮಹಾಗಾಂವ ಇವರುಗಳನ್ನು ಕೃಷಿ ಕ್ಷೇತ್ರದಲ್ಲಿ ತೋರಿದ ಸಾಧನೆಗಾಗಿ ಹಾಗೂ ಗ್ರಾಮ ಸಹಾಯಕರನ್ನು ಸತ್ಕರ ಮಾಡಲಾಯಿತು..

ಈ ಸಂದರ್ಭದಲ್ಲಿ
ಮಹಾಗಾಂವ ಕಳ್ಳಿಮಠದ ಶ್ರೀ ವಿರೂಪಾಕ್ಷ ದೇವರು,
, ಪದೊನ್ನತಿ ಹೊಂದಿದ ವಿಜಯಲಕ್ಷ್ಮಿ ಜೈನಾಪುರ , ಮಹಾಗಾಂವ ಮಾಜಿ ಗ್ರಾಪಂ ಅಧ್ಯಕ್ಷ ನರೇಶ ಹರಸೂರಕರ, ಸಾಯಿಬಣ್ಣ ನಿಂಗದಳ್ಳಿ, ಪ್ರಭಾರಿ ಇ ಒ ಬಸವರಾಜ ಪಾಟೀಲ, ಮಾರುತಿ ಘಂಟಿ, ಮಂಜುನಾಥ ಜೇವರ್ಗಿ, ಜಿಲಾನಿ ಹರಕಂಚಿ , ಮಹಾಗಾಂವ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯ ಮಹಾಗಾಂವ, ಕುರಿಕೋಟಾ, ಸಿರಗಾಪುರ, ಯಕ್ಕಂಚಿ, ಹರಕಂಚಿ, ನಾಗೂರ, ಕಠಳ್ಳಿ, ಹೊಳಕುಂದಾ, ತಡಕಲ, ಅಂಕಲಗಿ, ಧಮ್ಮೂರ, ಬೆಳಕೋಟಾ, ಅಂಬಲಗಾ, ಮುಗಳಿ,‌ಮಡಕಿ, ದಸ್ತಾಪುರ ಮತ್ತಿತರ ಗ್ರಾಮಗಳ ರೈತರು ಉಪಸ್ಥಿತರಿದ್ದರು.

, ಅಂಬಾರಾಯ ಮಡ್ಡೆ ನಿರೂಪಿಸಿದರು, ಶಿವಪುತ್ರಪ್ಪ ಮೇಗಪಗೋಳ್ ಪ್ರಾಸ್ತಾವಿಕವಾಗಿ‌ ಮಾತನಾಡಿದರು.

ಕೋಟ್….ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಮಹಾಗಾಂವ ಕೇಂದ್ರದ ರೈತರು ಅಗತ್ಯ ಸಹಕಾರ ನೀಡಿದಕ್ಕೆ ನಾನು ಚಿರರುಣಿ, ಈ ಅವಧಿಯಲ್ಲಿ ತಿಳಿಯದೆ ಲೋಪ ಎಸಗಿದರೆ ಅನ್ಯಥಾ ಭಾವಿಸಬೇಡಿ……ವಿಜಯಲಕ್ಷ್ಮಿ ಜೈನಾಪುರ ಕೃಷಿ ಅಧಿಕಾರಿ

Leave a Reply

Your email address will not be published. Required fields are marked *