
ಯಲಹಂಕ : ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಎಸ್. ಸಿ.ಮೋರ್ಚಾ ಅಧ್ಯಕ್ಷ ಲಿಂಗನ ಹಳ್ಳಿ ವೆಂಕಟೇಶ್ ರವರ ಜನ್ನದಿನದ ಪ್ರಯುಕ್ತ ಶಾಸಕ ಎಸ್ ಆರ್ ವಿಶ್ವನಾಥ್ ರವರು ತಮ್ಮ ಗೃಹ ಕಚೇರಿಯಲ್ಲಿ ಬುಧವಾರ ವೆಂಕಟೇಶ್ ರವರಿಗೆ ಗೌರವ ಸನ್ಮಾನ ನೀಡಿ ಜನ್ಮದಿನದ ಶುಭ ಹಾರೈಸಿದರು.
ಇದೇ ವೇಳೆ ಮಾತನಾಡಿದ ಅವರು ‘ಲಿಂಗನಹಳ್ಳಿ ವೆಂಕಟೇಶ್ ರವರು ಕಳೆದ 30 ವರ್ಷಗಳಿಂದ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ ರಾಗಿ ಕ್ಷೇತ್ರದಲ್ಲಿ ಪಕ್ಷದ ಬಲವರ್ಧನೆಗೆ ಶ್ರಮಿಸುತ್ತಿದ್ದು, ಬಿಜೆಪಿ ಪಕ್ಷವನ್ನು ಸದೃಢವಾಗಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿನ್ನೆಲೆಯಿಂದ ಬಂದಿರುವ ಲಿಂಗನಹಳ್ಳಿ ವೆಂಕಟೇಶ್ ರವರು, ಶಿಸ್ತನ ಸಿಪಾಯಿಯಾಗಿದ್ದು, ಸ್ವಯಂ ಸೇವಕ ಸಂಘ ಮತ್ತು ಬಿಜೆಪಿ ಪಕ್ಷದ ಸಂಘಟನೆಯಲ್ಲಿ ಪ್ರಾಮಾಣಿಕವಾಗಿ ತೊಡಗಿಕೊಂಡಿದ್ದಾರೆ.
ಬೆಂ. ನಗರ ಜಿಲ್ಲಾ ಎಸ್ಸಿ ಮೋರ್ಚಾ ಉಪಾಧ್ಯಕ್ಷರಾಗಿ, ಕಾರ್ಯದರ್ಶಿ ಯಾಗಿ ಕಾರ್ಯ ನಿರ್ವಹಿಸಿರುವ. ಅನುಭವ ಹೊಂದಿರುವ ಲಿಂಗನ ಹಳ್ಳಿ ವೆಂಕಟೇಶ್ ಪ್ರಸ್ತುತವಾಗಿ ಯಲಹಂಕ ಗ್ರಾಮಾಂತರ ಮಂಡಲ ಎಸ್ಸಿ ಮೋರ್ಚಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಎಸ್ಸಿ ಮೋರ್ಚಾದ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಲಹಂಕ ಕ್ಷೇತ್ರ ದಲ್ಲಿ ಎಸ್ಸಿ ಮೋರ್ಚಾವನ್ನು ಅತ್ಯಂತ ಸದೃಢವಾಗಿ ಕಟ್ಟಿರುವ ಛಾತಿ ಹೊಂದಿದ್ದಾರೆ. ಅಲ್ಲದ ಪತ್ನಿ ಭಾರತಿ ವೆಂಕಟೇಶ್ ರವನ್ನು ಹೇರೋಹಳ್ಳಿ ಗ್ರಾ.ಪಂ.ಉಪಾಧ್ಯಕ್ಷರನ್ನಾಗಿ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ, ಇವರಿಗೆ ದೇವರು ಆಯುರಾರೋಗ್ಯ ಕರುಣಿಸುವ ಮೂಲಕ ಇನ್ನೂ ಹೆಚ್ಚಿನ ಸೇವೆ ಮಾಡಲು ಅವಕಾಶ ಕಲ್ಪಸು ವಂತಾಗಲಿ ಎಂದು ಶುಭ ಹಾರೈಸಿದರು.
ಸಿಂಗನಾಯಕನಹಳ್ಳಿ ಗ್ರಾ.ಪಂ. ಸದಸ್ಯ ಮಲ್ಲೇಶ್ ಮಾತನಾಡಿ ‘ಶಾಸಕ ಎಸ್ ಆರ್ ವಿಶ್ವನಾಥ್ ರವರು ದಲಿತ ಸಮುದಾಯಕ್ಕೆ ಹೆಚ್ಚಿನ ಆಧ್ಯತೆ ಮತ್ತು ಸಹಕಾರ ನೀಡುವ ಮೂಲಕ ಯಲಹಂಕ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಅತ್ಯಂತ ಸದೃಢವಾಗಿ ಕಟ್ಟಿರುವ ರಾಜ್ಯದ ವಿರಳಾತಿವಿರಳ ನಾಯಕರಲ್ಲಿ ಒಬ್ಬರಾಗಿದ್ದು, ಎಸ್ಸಿ ಮೋರ್ಚಾ ಯಲಹಂಕ ಕ್ಷೇತ್ರದಲ್ಲಿ ಇರುವಷ್ಟು ಸದೃಢವಾಗಿ ರಾಜ್ಯದ ಇನ್ಯಾವ ಕ್ಷೇತ್ರದಲ್ಲಿಯೂ ಇಲ್ಲ ಎನ್ಮಬಹುದು. ಇಂತಹ ಶಾಸಕರನ್ನು ಪಡೆದಿರುವ ನಾವೇ ಧನ್ಯರು. ಯಲಹಂಕ ಕ್ಷೇತ್ರದಲ್ಲಿ ದಲಿತ ಸಮುದಾಯ ಸದಾಕಾಲ ಅವರೊಟ್ಟಿಗೆ ಇರಲಿದೆ ಎಂದರು.
ಇದೇ ಸಂದರ್ಭದಲ್ಲಿ ಕ್ಷೇತ್ರದ ಹಿರಿಯ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಮಾಜಿ ಜಿ.ಪಂ.ಸದಸ್ಯೆ ಭಾರತಿ ವೆಂಕಟೇಶ್, ಬಿಜೆಪಿ ಮುಖಂಡರಾದ ಮುನಿಕೃಷ್ಣ, ರಾಜಶೇಖರ್, ಎಲ್ ಬಿ ಎಸ್ ಮುರಳಿ, ಮುತ್ತುಗದಹಳ್ಳಿ ಮುನಿರಾಜು, ವೆಂಕಟಾಲ ಮುನಿರಾಜು, ವೀರಸಾಗರ ನಾಗೇಶ್, ಇಟಗಲ್ ಪುರ ಆಂಜಿನಪ್ಪ ಸೇರಿದಂತೆ ಇನ್ನಿತರರಿದ್ದು, ವೆಂಕಟೇಶ್ ರವರಿಗೆ ಜನ್ಮದಿನದ ಶುಭ ಹಾರೈಸಿದರು.