
ಬಸವೇಶ್ವರವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯದ ನೂತನ ವಿದ್ಯಾರ್ಥಿಗಳಿಗೆ ಇಂಡಕ್ಷನ್ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ವಿಮರ್ಶಕ ಹಾಗೂ ಹಿರಿಯ ವಿದ್ವಾಂಸರಾದ ಪ್ರೊ ಜಿ. ಅಶ್ವತ್ಥ ನಾರಾಯಣರವರು ಮುಖ್ಯ ಅತಿಥಿಗಳಿಗೆ ಆಗಮಿಸಿ ಬಿ ಎ ಬಿ ಎಸ್ಸಿ ಬಿಕಾಂ ವಿದ್ಯರ್ಥಿಗಳಿಗೆ ಮೂರು ವರ್ಷದ ತಮ್ಮ ಕಾಲೇಜಿನ ಜೀವನದಲ್ಲಿ ಯಶಸ್ಸನ್ನು ಪಡೆಯುವುದು ಹೇಗೆ ಎಂದು ವಿವರಿಸಿ ಹರಿಸಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರಾಂಶಪಾಲರಾದ ಡಾ. ಶೀಲಾದೇವಿ ಎಸ್ ಮಳಿಮಠರವರು ಕಾಲೇಜಿನ ಇತಿಹಾಸ – ನಡೆದು ಬಂದು ಹಾದಿಯನ್ನು ತಿಳಿಸಿ ಮೂರುವರ್ಷದ ಕಾಲೇಜು ಜೀವನವನ್ನು ತಮ್ಮಗುರಿ ಮಟ್ಟದಲ್ಲಿ ಪ್ರಗತಿ ಹೊಂದಬೇಕೆಂದು ತಿಳಿಸಿದರು.ಕು. ಪದ್ಮಿನಿ ಪ್ರಾರ್ಥನೆ – ಗಿರೀಶ ವೈ ನಿರೂಪಣೆ – ಶ್ರೀಗಿರೀಶ ಪಿ ಹೆಚ್ ಸ್ವಾಗತ – ಶ್ರೀ ರಾಜಗೋಪಾಲರವರು ಅತಿಥಿಗಳ ಪರಿಚಯ – ಕುನಿಖಿತಾ ವಂದನಾರ್ಪಣೆ ಮಾಡಿದರು. ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.