ಮಾರೇನಹಳ್ಳಿ ಗ್ರಾ.ಪಂ.ಅಧ್ಯಕ್ಷ ಪಿ.ರಾಹುಲ್ ಹಾಗೂ ಕುಟುಂಬದ ವತಿಯಿಂದ ಆಯೋಜನೆ :

ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಜಾಲ ಹೋಬಳಿಯ ಮಾರೇನಹಳ್ಳಿ ಗ್ರಾ.ಪಂ.ಆಧ್ಯಕ್ಷ ಪಿ.ರಾಹುಲ್ ಮತ್ತು ಅವರ ಕುಟುಂಬ ವರ್ಗದ ವತಿಯಿಂದ ಮಾರೇನಹಳ್ಳಿ ಗ್ರಾಮದ ಅವರ ಸ್ವಗೃಹದಲ್ಲಿ ಲೋಕಕಲ್ಯಾಣಾ ರ್ಥವಾಗಿ ಏರ್ಪಡಿಸಿದ್ದ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಬ್ಯಾಟರಾಯನಪುರ ಕ್ಷೇತ್ರದ ಹಲವು ಗಣ್ಯರು, ಕಾಂಗ್ರೆಸ್ ಮುಖಂಡರು, ವಿವಿಧ ಗ್ರಾ.ಪಂ.ಗಳ ಅಧ್ತಖ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಅಸಂಖ್ಯಾತ ಜನ ಪಾಲ್ಗೊಂಡು ಸತ್ಯನಾರಾಯಣ ಸ್ವಾಮಿಯ ಕೃಪೆಗೆ ಪಾತ್ರರಾದರು.

ಸತ್ಯನಾರಾಯಣ ಪೂಜಾ ಕಾರ್ಯಕ್ರಮದ ಅಂಗವಾಗಿ ವಿವಿಧ ದೇವತಾ ಕಾರ್ಯಗಳು, ಸತ್ಯನಾರಾಯಣ ಸ್ವಾಮಿಗೆ ವಿಶೇಷ ಪೂಜೆ, ತೀರ್ಥ, ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಪೂಜೆಗೆ ಆಗಮಿಸಿದ್ದ ಭಕ್ತಾದಿಗಳು ಸತ್ಯನಾರಾಯಣ ಸ್ವಾಮಿಗೆ ನಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು. ಆಗಮಿಸಿದ್ದ ಎಲ್ಲಾ ಭಕ್ತರಿಗೂ ಭೋಜನ ವ್ಯವಸ್ಥೆ ಏರ್ಪಡಿಸಲಾಗಿತ್ತು.

ಈ ವೇಳೆ ಗ್ರಾ.ಪಂ.ನೂತನ ಅಧ್ಯಕ್ಷ ಪಿ.ರಾಹುಲ್ ಮಾತನಾಡಿ ದೈವ ಕೃಪೆಯಿಂದ ಈ ವರ್ಷ ಉತ್ತಮ ಮಳೆ, ಬೆಳೆಯಾಗುತ್ತಿದ್ದು, ಎಲ್ಲೆಡೆ ಸಮೃದ್ಧಿಯ ವಾತಾವರಣವಿದೆ. ಇಂತಹ ಸುಸಂದರ್ಭದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸತ್ಯನಾರಾಯಣ ಪೂಜೆ ಏರ್ಪಡಿಸುವ ಮನಸ್ಸಾಯಿತು, ಈ ನಿಟ್ಟಿನಲ್ಲಿ ಇಂದು ಸತ್ಯನಾರಾಯಣ ಪೂಜೆ ಏರ್ಪಡಿಸಲಾಗಿದೆ. ಪೂಜೆಗೆ ಆಗಮಿಸಿರುವ ಎಲ್ಲಾ ಭಕ್ತರು, ಮುಖಂಡರು, ಸ್ನೇಹಿತರು, ಹಿತೈಷಿಗಳು ಹಾಗೂ ಬಂಧುಗಳಿಗೂ ಸತ್ಯನಾರಾಯಣ ಸ್ವಾಮಿ ಒಳ್ಳೆಯ ಆಯುರಾರೋಗ್ಯ, ಐಶ್ವರ್ಯ, ಸಂತೋಷ, ಸಮೃದ್ಧಿಯನ್ನು ಕರುಣಿಸಲಿ ಎಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ದಾನೇಗೌಡ, ತಾ.ಪಂ.ಮಾಜಿ ಅಧ್ಯಕ್ಷ ನಾಗರಾಜ್, ಮಾರೇನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷರು, ಶಿಡ್ಲಘಟ್ಟ ವಿ.ಸ.ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಆಂಜಿನಪ್ಪ(ಪುಟ್ಟು), ಮಾರೇನಹಳ್ಳಿ ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಚೊಕ್ಕನಹಳ್ಳಿ ನಂಜೇಗೌಡ,ಮಾಜಿ ಅಧ್ಯಕ್ಷರಾದ ಡಿ.ಎಂ.ಚೌಡಪ್ಪ, ಉಪಾಧ್ಯಕ್ಷೆ ನಂಜಮ್ಮ ಬಲ್ಲಯ್ಯ, ಬಾಗಲೂರು ಗ್ರಾ.ಪಂ.ಅಧ್ಯಕ್ಷ ಕೆಂಪೇಗೌಡ, ಕಾಂಗ್ರೆಸ್ ಮುಖಂಡರಾದ ಮರಳುಕುಂಟೆ ಮುನಿರಾಮಣ್ಣ (ಎಂ.ಆರ್.), ಜಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಜೈಕುಮಾರ್, ಜಾಲ ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಮರಳುಕುಂಟೆ ರಮೇಶ್, ಗೋಪಾಲಪುರ ಡೈರಿ ಅಧ್ಯಕ್ಷ ಮುನಿರಾಜು, ಮರಳುಕುಂಟೆ ಸುರೇಶ್, ದಾಸನಾಯಕನಹಳ್ಳಿ ಗೋಪಾಲ್, ಬೆಟ್ಟಹಲಸೂರು ಗ್ರಾ.ಪಂ‌. ಮಾಜಿ ಅಧ್ಯಕ್ಷ ಬಿ.ಎಂ.ನಾಗೇಶ್, ಹಾಲಿ ಉಪಾಧ್ಯಕ್ಷ ಬಿ.ಆರ್.ಪ್ರವೀಣ್, ಗ್ರಾ.ಪಂ.ಸದಸ್ಯರಾದ ಮೋಹನ್ ಸಿದ್ಧರಾಜು, ಬಾಲರಾಜ್, ಚಾಗಲೇಟಿ ಚಿಕ್ಕಪ್ಪಯ್ಯ, ಮಾರೇನ ಹಳ್ಳಿ ಗ್ರಾ.ಪಂ.ಸದಸ್ಯರಾದ ಎಸ್.ಎಲ್.ಎನ್. ಲಕ್ಷ್ಮೀನಾರಾ ಯಣ ಸಂಧ್ಯಾ ಸುಂದರೇಶ್, ಕಮಲಮ್ಮ, ಕೃಷ್ಣಪ್ಪ, ಶ್ರೀರಾಮಣ್ಣ, ಜ್ಯೋತಿ ಮುನಿಯಪ್ಪ, ರತ್ನಮ್ಮ ವೆಂಕಟಸ್ವಾಮಿ, ಎಂ.ಪಿ.ವಿಶ್ವನಾಥ್, ಯುವ ಕಾಂಗ್ರೆಸ್ ಮುಖಂಡರಾದ ಪ್ರದೀಪ್(ಮುತ್ತು), ರಾಮೇಗೌಡ, ಮುರಳಿ, ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *