




















ಯಲಹಂಕ ಉಪನಗರ
ರಾಮಗೊಂಡನಹಳ್ಳಿಯ ಸಮಾಜ ಸೇವಕರು ಹಾಗೂ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇರುವಂತಹ ಶ್ರೀ ಪ್ರಭಾಕರ್ ಅವರು ಹಾಗೂ ಶ್ರೀ ಸ್ವಾಮಿನಾಥನ್ ರವರು, ಶ್ರೀ ಅಶೋಕ್ ಹೆಬ್ಬಾರ್ ಅವರು, ಶ್ರೀ ರಾಕೇಶ್ ರವರು., ಮತ್ತು ಶ್ರೀ ಜಗದೀಶ್ (ದಿಗ್ವಿಜಯ ಕ್ಯಾಂಟೀನ್ ಮಾಲೀಕರು) ಇವರುಗಳ ಉದಾರ ವಾಗಿ ನೀಡಿದಂತಹ ಹಣದಲ್ಲಿ ಶೂಗಳನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ದಿಗ್ವಿಜಯ ಶಾಲೆಯ ವ್ಯವಸ್ಥಾಪಕರು ಶ್ರೀ ಆಂಜನೇಯ ಮೂರ್ತಿರವರು ಹಾಗೂ ಶಾಲೆಯ ಮುಖ್ಯೋಪಾಧ್ಯರು ಮತ್ತು ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಯ ವೃಂದ ಮತ್ತು ಈ ಶೂ ವಿತರಣಾ ದೇಣಿಗೆ ಪಡೆದು ವ್ಯವಸ್ಥೆಯನ್ನು ಮಾಡಿದ ಸ್ನೇಹಜೀವಿ ಬಳಗದ ಶ್ರೀ ನಾರಾಯಣ ಪೈ, ಶ್ರೀ ಸಂದೀಪ್ ಯಾದವ್, ಶ್ರೀ ಆನಂದ್ ಘಂಟಿಗಾನಹಳ್ಳಿ ಇವರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ
ಆರ್ ಹನುಮಂತು
9845085793
7349337989
9035282296