ವಿನಾಯಕ ಗೆಳೆಯರ ಬಳಗ, ಬಾಬು ಬಾಯ್ಸ್ ವತಿಯಿಂದ ಆಯೋಜನೆ :

ಬ್ಯಾಟರಾಯನಪುರ : ಕ್ಷೇತ್ರದ ವಿದ್ಯಾನಗರ ಕ್ರಾಸ್ ಸಮೀಪದ ಎಟಿಎಂ ಬಡಾವಣೆಯಲ್ಲಿ ವಿನಾಯಕ ಗೆಳೆಯರ ಬಳಗ, ಬಾಬು ಬಾಯ್ಸ್ ವತಿಯಿಂದ ಆಯೋಜಿಸಿದ್ದ 7ನೇ ವರ್ಷದ ಗಣೇಶೋತ್ಸವ ವಿಜೃಂಭಣೆಯಿಂದ ನೆರವೇರಿತು.

ಅತ್ಯಂತ ಬೃಹತ್ ಗಾತ್ರದ ಪರಿಸರ ಸ್ನೇಹಿ ಗಣೇಶನನ್ನು ಸುರೇಶ್ ಬಾಬು ನೇತೃತ್ವದಲ್ಲಿ ಪ್ರತಿಷ್ಠಾಪಿಸಿದ್ದು, ವಿಘ್ನ ವಿನಾಶಕ ಗಣಪನಿಗೆ ಶಾಸ್ತ್ರೋಕ್ತವಾದ ವಿಶೇಷ ಪೂಜೆ, ತೀರ್ಥ, ಪ್ರಸಾದ ವಿನಿಯೋಗ ಮುಂತಾದ ಧಾರ್ಮಿಕ ಕಾರ್ಯಗಳನ್ನು ನೆರೆವೇರಿಸುವ ಮೂಲಕ ಗಣೇಶೋತ್ಸವಕ್ಕೆ ವಿಜೃಂಭಣೆಯ ಸ್ಪರ್ಷ ನೀಡಿರುವ ಸುರೇಶ್ ಬಾಬು ಹಾಗೂ ಸ್ನೇಹಿತರು ಗಣೇಶೋತ್ಸವಕ್ಕೆ ಹೊಸ ಮೆರಗು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸುರೇಶ್ ಬಾಬು ‘ಕಳೆದ ಏಳು ವರ್ಷಗಳಿಂದ ಎಟಿಎಂ ಬಡಾವಣೆಯ ಈ ಸ್ಥಳದಲ್ಲಿ ಗಣೇಶೋತ್ಸವ ಆಚರಿಸಲಾಗುತ್ತಿದೆ. ಪರಿಸರ ಸ್ನೇಹಿ ಗಣಪತಿಯ ಪ್ರತಿಷ್ಠಾಪನೆ ನಮ್ಮ ಧ್ಯೇಯವಾಗಿದ್ದು, ಪರಿಸರವೂ ಉಳಿಯಬೇಕು, ಧರ್ಮವೂ ಉಳಿಯಬೇಕು, ಧಾರ್ಮಿಕ ಕಾರ್ಯವೂ ನೆರವೇರಬೇಕು ಎಂಬುದು ನಮ್ಮ ಕಾಳಜಿಯಾಗಿದೆ. ಸರ್ವ ವಿಘ್ನ ವಿನಾಶಕ ಗಣಪತಿಯ ಆರಾಧನಾ ಮಹೋತ್ಸವದ ಈ ಶುಭ ಸಂದರ್ಭದಲ್ಲಿ ನಾಡಿನ, ಬ್ಯಾಟರಾಯನಪುರ ಕ್ಷೇತ್ರ ಮತ್ತು ವಿದ್ಯಾನಗರದ ಸಮಸ್ಥ ನಾಗರೀಕರಿಗೆ ಗಣೇಶೋತ್ಸವದ ಹಾರ್ದಿಕ ಶುಭಾಷಯಗಳು, ವಿಘ್ನ ನಿವಾರಕ ಗಣಪತಿ ಎಲ್ಲಾ ಜನತೆಗೆ ಒಳ್ಳೆಯ ಆಯುರಾರೋಗ್ಯ ಕರುಣಿಸಲಿ, ಸುಖ, ಶಾಂತಿ, ನೆಮ್ಮದಿ, ಸಮೃದ್ಧಿಯನ್ನು ಕರುಣಿಸಲಿ ಎಂದು ಶುಭ ಹಾರೈಸಿದರು.

Leave a Reply

Your email address will not be published. Required fields are marked *