
















ಬ್ಯಾಟರಾಯನಪುರ : ಜಕ್ಕೂರು ವಾರ್ಡ್ ನಂಬರ್ 5 ಕೋಗಿಲು ಬಡಾವಣೆಯಲ್ಲಿ ಗಣೇಶೋತ್ಸವ ವಿಜೃಂಭಣೆಯಿಂದ ನೆರವೇರಿತು.
ಪರಿಸರ ಸ್ನೇಹಿ ಗಣೇಶನನ್ನು ವೆಂಕಟೇಶ್ ರವರ ನೇತೃತ್ವದಲ್ಲಿ ಪ್ರತಿಷ್ಠಾಪಿಸಿದ್ದು, ವಿಘ್ನ ವಿನಾಶಕ ಗಣಪನಿಗೆ ಶಾಸ್ತ್ರೋಕ್ತವಾದ ವಿಶೇಷ ಪೂಜೆ, ತೀರ್ಥ, ಪ್ರಸಾದ ವಿನಿಯೋಗ ಮುಂತಾದ ಧಾರ್ಮಿಕ ಕಾರ್ಯಗಳನ್ನು ನೆರೆವೇರಿಸುವ ಮೂಲಕ ಗಣೇಶೋತ್ಸವಕ್ಕೆ ವಿಜೃಂಭಣೆಯ ಸ್ಪರ್ಷ ನೀಡಿರುವ ವೆಂಕಟೇಶ್ ಹಾಗೂ ಸ್ನೇಹಿತರು ಗಣೇಶೋತ್ಸವಕ್ಕೆ ಹೊಸ ಮೆರಗು ನೀಡಿದ್ದಾರೆ.
ಈ ಒಂದು ಸಂದರ್ಭದಲ್ಲಿ ಶಾಸಕರಾದ ಕೃಷ್ಣ ಬೈರೇಗೌಡರು. H A. ಶಿವಕುಮಾರ್ ರವರು. ಸಂಪಿಗೆಹಳ್ಳಿ. ವಾರ್ಡ್ ಅಧ್ಯಕ್ಷರಾದ ಗೋಕುಲ್ ರೆಡ್ಡಿ ( ಗೋಪಾಲ್) ರವರು ವೆಂಕಟೇಶ್ ರವರು ಪುನೀತ್ ಇರ್ಫಾನ್ ಅಮಾನುಲ್ಲಾ ಶರೀಫ್ ಹೇಮಂತ್ ವಸೀಮ್ ನಿಸಾರ್ ಇನ್ನೂ ಅನೇಕ ಗ್ರಾಮಸ್ಥರು ಭಾಗವಹಿಸಿ
ಸರ್ವ ವಿಘ್ನ ವಿನಾಶಕ ಗಣಪತಿಯ ಆರಾಧನಾ ಮಹೋತ್ಸವದ ಈ ಶುಭ ಸಂದರ್ಭದಲ್ಲಿ ನಾಡಿನ, ಬ್ಯಾಟರಾಯನಪುರ ಕ್ಷೇತ್ರ ಮತ್ತು ಕೋಗಿಲು ಬಡಾವಣೆಯ ಸಮಸ್ಥ ನಾಗರೀಕರಿಗೆ ಗಣೇಶೋತ್ಸವದ ಹಾರ್ದಿಕ ಶುಭಾಷಯಗಳು, ವಿಘ್ನ ನಿವಾರಕ ಗಣಪತಿ ಎಲ್ಲಾ ಜನತೆಗೆ ಒಳ್ಳೆಯ ಆಯುರಾರೋಗ್ಯ ಕರುಣಿಸಲಿ, ಸುಖ, ಶಾಂತಿ, ನೆಮ್ಮದಿ, ಸಮೃದ್ಧಿಯನ್ನು ಕರುಣಿಸಲಿ ಎಂದು ಶುಭ ಹಾರೈಸಿದರು.